ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಪೇಶಾವರ ಮಾರಣಹೋಮದ ನಂತರ ಈಗ ಉಪಾಧ್ಯಾಯರಿಗೆ ಬಂದೂಕು ತರಬೇತಿ

ತಾಲಿಬಾನ್ ಉಗ್ರಗಾಮಿಗಳು ಡಿಸೆಂಬರ್ ನಲ್ಲಿ ಪೇಶಾವರದ ಸೇನಾ ಶಾಲೆಯಲ್ಲಿ ನಡೆಸಿದ

ಪೇಶಾವರ: ತಾಲಿಬಾನ್ ಉಗ್ರಗಾಮಿಗಳು ಡಿಸೆಂಬರ್ ನಲ್ಲಿ ಪೇಶಾವರದ ಸೇನಾ ಶಾಲೆಯಲ್ಲಿ ನಡೆಸಿದ ದಾಳಿಯಲ್ಲಿ ೧೩೨ ಮಕ್ಕಳು ಸೇರಿದಂತೆ ೧೫೦ ಜನರು ಮೃತಪಟ್ಟಿದ್ದರು. ಮುನ್ನೆಚ್ಚರಿಕೆಯ ಕ್ರಮದಂತೆ ಇನ್ನು ಮುಂದೆ ಪಾಕಿಸ್ತಾನದ ಪೇಶಾವರ ಉಪಾಧ್ಯಾಯರಿಗೆ ಬಂದೂಕು ತರಬೇತಿ ನೀಡಲಾಗುತ್ತಿದ್ದು, ಭದ್ರತೆಗೋಸ್ಕರ ಇನ್ನು ಮುಂದೆ ಅವರು ತರಗತಿಗಳಿಗೆ ಬಂದೂಕನ್ನು ತೆಗೆದುಕೊಂದು ಹೋಗಬಹುದಾಗಿದೆ.

"ಶಸ್ತ್ರಾಸ್ತ್ರಗಳನ್ನು ತರಗತಿಗಳಿಗೆ ತೆಗೆದುಕೊಂಡು ಹೋಗುವುದು ಕಡಾಯವಲ್ಲ. ಆದರೆ ಅವುಗಳನ್ನು ಭದ್ರತೆಗಾಗಿ ಕೊಂಡೊಯ್ಯಲು ಇಚ್ಛಿಸುವವರಿಗೆ ಅಗತ್ಯ ಪರವಾನಗಿ ನೀಡಲಾಗುವುದು" ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"೩೫ ಸಾವಿರ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ರಕ್ಷಿಸಲು ಈಗ ಇರುವ ಪೋಲಿಸ್ ಪಡೆಯ ಸಂಖ್ಯೆ ಅಗತ್ಯದಷ್ಟು ಇಲ್ಲವಾದ್ದರಿಂದ, ಮೇಷ್ಟ್ರುಗಳಿಗೆ ಬಂದೂಕುಗಳನ್ನು ಕೊಂಡೊಯ್ಯಲು ಅವಕಾಶ ನೀಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.

ಸರ್ಕಾರದ ಈ ನಡೆಗೆ ಹಲವು ಮೂಲಗಳಿಂದ ವಿರೋಧವೂ ಕೇಳಿಬಂದಿದೆ. ಒಂದು ಕೈನಲ್ಲಿ ಪೆನ್ ಹಿಡಿದು ಒಂದು ಕೈನಲ್ಲಿ ಬಂದೂಕು ಹಿಡಿದು ಪಾಠ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

SCROLL FOR NEXT