ಪ್ರಧಾನ ಸುದ್ದಿ

ಶೇಖರ್ ಸೇನ್ ಸಂಗೀತ ನಾಟಕ ಅಕಾಡೆಮಿ ನೂತನ ಅಧ್ಯಕ್ಷ

Guruprasad Narayana

ನವದೆಹಲಿ: ಸಂಗೀತಕಾರ ನಟ ಶೇಖರ್ ಸೇನ್ ಅವರನ್ನು ಸಂಗೀತ ನಾಟಕ ಅಕಾಡೆಮಿಯ ನೂತನ ಅಧ್ಯಕ್ಷರನ್ನಾಗಿ ಸರ್ಕಾರ ಗುರುವಾರ ನೇಮಿಸಿದೆ.

ಮೂರು ದಶಕಗಳಿಂದ ಭಜನೆಯ ಸಿ ಡಿ ಆಲ್ಬಮ್ ಗಳನ್ನು ನಿರ್ಮಿಸುತ್ತಿರುವ, ಹಾಗೆಯೇ ಹಲವಾರು ಏಕಪಾತ್ರಾಭಿನಯಗಳನ್ನು ಮಾಡಿರುವ ಸೇನ್ ಅವರು ೫ ವರ್ಷಗಳ ಕಾಲ ಅಕಾಡೆಮಿ ಅಧ್ಯಕ್ಷರಾಗಿರುತ್ತಾರೆ. ಕಳೆದ ಅಕ್ಟೋಬರ್ ನಲ್ಲಿ ಲೀಲಾ ಸ್ಯಾಮ್ಸನ್ ಅವರು ರಾಜೀನಾಮೆ ನೀಡಿದ ನಂತರ ಈ ಹುದ್ದೆ ತೆರವುಗೊಂಡಿತ್ತು.

ಕಳೆದ ವಾರ ಗಣರಾಜ್ಯೋತ್ಸವದ ದಿನ ಸೇನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ತುಳಸಿ, ಕಬೀರ್, ವಿವೇಕಾನಂದ, ಸೂರ್ದಾಸ್ ಇವರುಗಳ ಏಕಪಾತ್ರಾಭಿನಯದ ಸಂಗೀತ ನಾಟಕಗಳಿಗೆ ಇವರು ಹೆಸರುವಾಸಿ.

ಸೇನ್ ಅವರ ಅಂತರ್ಜಾಲ ಪುಟದ ಪ್ರಕಾರ ಇವರು ಹಲವಾರು ಟಿ ವಿ ಧಾರಾವಾಹಿಗಳಿಗೆ ಸಂಗೀತ ನೀಡಿರುವುದಲ್ಲದೆ, ರಮಾನಂದ ಸಾಗರ ಅವರ 'ರಾಮಾಯಣದ' ಶೀರ್ಷಿಕೆ ಗೀತೆಯನ್ನು ಹಾಡಿದ್ದಾರೆ ಕೂಡ.

SCROLL FOR NEXT