ಶೇಖರ್ ಸೇನ್ 
ಪ್ರಧಾನ ಸುದ್ದಿ

ಶೇಖರ್ ಸೇನ್ ಸಂಗೀತ ನಾಟಕ ಅಕಾಡೆಮಿ ನೂತನ ಅಧ್ಯಕ್ಷ

ಸಂಗೀತಕಾರ ನಟ ಶೇಖರ್ ಸೇನ್ ಅವರನ್ನು ಸಂಗೀತ ನಾಟಕ ಅಕಾಡೆಮಿಯ ನೂತನ ಅಧ್ಯಕ್ಷರನ್ನಾಗಿ

ನವದೆಹಲಿ: ಸಂಗೀತಕಾರ ನಟ ಶೇಖರ್ ಸೇನ್ ಅವರನ್ನು ಸಂಗೀತ ನಾಟಕ ಅಕಾಡೆಮಿಯ ನೂತನ ಅಧ್ಯಕ್ಷರನ್ನಾಗಿ ಸರ್ಕಾರ ಗುರುವಾರ ನೇಮಿಸಿದೆ.

ಮೂರು ದಶಕಗಳಿಂದ ಭಜನೆಯ ಸಿ ಡಿ ಆಲ್ಬಮ್ ಗಳನ್ನು ನಿರ್ಮಿಸುತ್ತಿರುವ, ಹಾಗೆಯೇ ಹಲವಾರು ಏಕಪಾತ್ರಾಭಿನಯಗಳನ್ನು ಮಾಡಿರುವ ಸೇನ್ ಅವರು ೫ ವರ್ಷಗಳ ಕಾಲ ಅಕಾಡೆಮಿ ಅಧ್ಯಕ್ಷರಾಗಿರುತ್ತಾರೆ. ಕಳೆದ ಅಕ್ಟೋಬರ್ ನಲ್ಲಿ ಲೀಲಾ ಸ್ಯಾಮ್ಸನ್ ಅವರು ರಾಜೀನಾಮೆ ನೀಡಿದ ನಂತರ ಈ ಹುದ್ದೆ ತೆರವುಗೊಂಡಿತ್ತು.

ಕಳೆದ ವಾರ ಗಣರಾಜ್ಯೋತ್ಸವದ ದಿನ ಸೇನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ತುಳಸಿ, ಕಬೀರ್, ವಿವೇಕಾನಂದ, ಸೂರ್ದಾಸ್ ಇವರುಗಳ ಏಕಪಾತ್ರಾಭಿನಯದ ಸಂಗೀತ ನಾಟಕಗಳಿಗೆ ಇವರು ಹೆಸರುವಾಸಿ.

ಸೇನ್ ಅವರ ಅಂತರ್ಜಾಲ ಪುಟದ ಪ್ರಕಾರ ಇವರು ಹಲವಾರು ಟಿ ವಿ ಧಾರಾವಾಹಿಗಳಿಗೆ ಸಂಗೀತ ನೀಡಿರುವುದಲ್ಲದೆ, ರಮಾನಂದ ಸಾಗರ ಅವರ 'ರಾಮಾಯಣದ' ಶೀರ್ಷಿಕೆ ಗೀತೆಯನ್ನು ಹಾಡಿದ್ದಾರೆ ಕೂಡ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT