ಗೃಹ ಸಚಿವ ರಾಜನಾಥ್ ಸಿಂಗ್ 
ಪ್ರಧಾನ ಸುದ್ದಿ

ಅಸ್ಸಾಮಿನಲ್ಲಿ ಹಿಂದಿ ಭಾಷಿಕರ ಕೊಲೆ: ಗೊಗೋಯ್ ಜೊತೆ ರಾಜನಾಥ್ ಸಿಂಗ್ ಮಾತುಕತೆ

ಅಸ್ಸಾಮಿನ ತಿನ್ಸುಕಿಯಾನಲ್ಲಿ ಹಿಂದಿ ಭಾಷಿಕ ಉದ್ಯಮಿ ಮತ್ತು ಪುತ್ರಿಯನ್ನು ಶಂಕಿತ ಉಲ್ಫಾ ಉಗ್ರಗಾಮಿಗಳು ಕೊಲೆ ಮಾಡಿದ್ದಾರೆ ಎಂಬ ಆರೋಪದ ಮೇಲೆ...

ನವದೆಹಲಿ: ಅಸ್ಸಾಮಿನ ತಿನ್ಸುಕಿಯಾನಲ್ಲಿ ಹಿಂದಿ ಭಾಷಿಕ ಉದ್ಯಮಿ ಮತ್ತು ಪುತ್ರಿಯನ್ನು ಶಂಕಿತ ಉಲ್ಫಾ ಉಗ್ರಗಾಮಿಗಳು ಕೊಲೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ತಿನ್ಸುಕಿಯಾ ಪ್ರದೇಶದಲ್ಲಿ ಇಬ್ಬರು ಹಿಂದಿ ಭಾಷಿಕರು ಕೊಲೆಯಾದ ನಂತರದ ಪರಿಸ್ಥಿಯನ್ನು  ದೂರವಾಣಿ ಸಂಭಾಷಣೆ ವೇಳೆಯಲ್ಲಿ ಗೊಗೋಯ್, ಗೃಹ ಮಂತ್ರಿಗಳಿಗೆ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.

"ಕಾನೂನು ಸುವ್ಯವಸ್ಥೆಗೆ ರಾಜ್ಯ ಈಗಾಗಲೇ ಭದ್ರತಾ ಪಡೆಗಳನ್ನು ತಿನ್ಸುಕಿಯಾ ಪ್ರದೇಶಕ್ಕೆ ನಿಯೋಜಿಸಿದೆ ಎಂದು ಗೊಗೋಯ್ ತಿಳಿಸಿದ್ದಾರೆ. ಹೆಚ್ಚುವರಿ ಭದ್ರಾತಾ ಪಡೆಗಳನ್ನು ಸೇರಿ ಯಾವುದೇ ಅಗತ್ಯ ಸಹಾಯ ನೀಡಲು ಕೇಂದ್ರ ಸರ್ಕಾರ ಸಿದ್ಧ" ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿರುವುದಾಗಿ ರಾಜನಾಥ್ ಸಿಂಗ್ ಹೇಳಿದ್ದಾರೆ.

ಮಂಗಳವಾರ ರಾತ್ರಿ ಉಲ್ಫಾ ಉಗ್ರಗಾಮಿಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ನಂದಲಾಲ್ ಷಾ(೬೫) ಮತ್ತು ಪುತ್ರಿ ಕಾಜೋಲ್ ಷಾ(೨೧) ಮೃತಪಟ್ಟಿದ್ದು, ಅವರ ಪತ್ನಿ ಹಾಗು ಮತ್ತೊಬ್ಬ ಸಂಬಂಧಿಕರಿಗೆ ತೀವ್ರವಾಗಿ ಗಾಯಗಳಾಗಿವೆ.

ಈ ಕೊಲೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಿಂದ ಕಳೆದ ಎರಡು ದಿನಗಳಿಂದ ನಗರದಲ್ಲಿ ಸಾಮಾನ್ಯ ಜೀವನಕ್ಕೆ ಧಕ್ಕೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ: ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ; ಸಿದ್ದರಾಮಯ್ಯ ಹೇಳಿದ್ದು ಏನು?

SIIMA 2025: ಕನ್ನಡ ಅಷ್ಟೊಂದು ಕೆಳಮಟ್ಟಕ್ಕೆ ಇಳಿದಿಲ್ಲ; ವೇದಿಕೆಯಲ್ಲೇ ಆಯೋಜಕರಿಗೆ ದುನಿಯಾ ವಿಜಯ್ ಎಚ್ಚರಿಕೆ, Video!

IVF ಮೂಲಕ ನಟಿ ಭಾವನಾ ಅವಳಿ ಮಕ್ಕಳಿಗೆ ಜನನ; ಒಂದು ಮಗು ಸಾವು!

ಧರ್ಮಸ್ಥಳ ಕೇಸ್: ಜನಾರ್ದನ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ; ಅಣ್ಣಾಮಲೈ ವಿಚಾರಣೆ ಯಾಕಿಲ್ಲ?

'ಅವ್ನ ಬಿಟ್.. ಇವ್ನ ಬಿಟ್.. ಇನ್ಯಾರೋ..': ಲವರ್ ಜೊತೆ ವಿವಾಹಿತ ಮಹಿಳೆ ಪರಾರಿ ಕೇಸ್ ಗೆ ಬಿಗ್ ಟ್ವಿಸ್ಟ್!

SCROLL FOR NEXT