ಐಐಎಂ ಶಿಲ್ಲಾಂಗ್ ಗೆ ಆಗಮಿಸಿದ್ದ ಕಲಾಂ 
ಪ್ರಧಾನ ಸುದ್ದಿ

ಕೊನೆಗೂ ಕಲಾಂ ಅಸೈನ್‍ಮೆಂಟ್ ಕೊಡಲೇ ಇಲ್ಲ!

ಜೀವನದ ಕೊನೆಯ ದಿನದಂದೂ ಎಂದಿನಂತೆ ಉಲ್ಲಸಿತರಾಗಿದ್ದ ಕಲಾಂ ಅವರು ಶಿಲ್ಲಾಂಗ್‍ನ ಐಐಎಂ ವಿದ್ಯಾರ್ಥಿಗಳಿಗೆ ಸರ್‍ಪ್ರೈಸ್ ಅಸೈನ್‍ಮೆಂಟ್‍...

ಕೋಲ್ಕತಾ: ಜೀವನದ ಕೊನೆಯ ದಿನದಂದೂ ಎಂದಿನಂತೆ ಉಲ್ಲಸಿತರಾಗಿದ್ದ ಕಲಾಂ ಅವರು ಶಿಲ್ಲಾಂಗ್‍ನ ಐಐಎಂ ವಿದ್ಯಾರ್ಥಿಗಳಿಗೆ ಸರ್‍ಪ್ರೈಸ್ ಅಸೈನ್‍ಮೆಂಟ್‍ವೊಂದನ್ನು ಕೊಡಲು ನಿರ್ಧರಿಸಿದ್ದರು.

ಆದರೆ, ಅವರ ಆಸೆ ಕೊನೆಗೂ ಈಡೇರಲೇ ಇಲ್ಲ ಎಂದಿದ್ದಾರೆ ಅವರ ಆಪ್ತ ಸೃಜನ್ ಪಾಲ್ ಸಿಂಗ್. ಗುವಾಹತಿಯಿಂದ ಶಿಲ್ಲಾಂಗ್ ಗೆ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಕಲಾಂ ಅವರು ಸಂಸತ್ ಗದ್ದಲದ ಬಗ್ಗೆ ನನ್ನನ್ನು ಮಾತಿಗೆಳೆದರು. ಕಲಾಪಕ್ಕೆ ಅಡ್ಡಿಯಾಗುತ್ತಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು. ಜತೆಗೆ, ``ವಿದ್ಯಾರ್ಥಿಗಳಿಗೆ ನಾವೊಂದು ಸರ್‍ಪ್ರೈಸ್ ಕೆಲಸ ಕೊಡೋಣ. ಸಂಸತ್ ಗದ್ದಲವನ್ನು ಕೊನೆಗಾಣಿಸಲು ಮೂರು ಹೊಸ ಐಡಿಯಾವನ್ನು ನೀಡಿ ಎಂದು ಹೇಳೋಣ. ಅವರು ಅದಕ್ಕೆ ಲಿಖಿತ ರೂಪದಲ್ಲಿ ಉತ್ತರ ನೀಡಲಿ'' ಎಂದಿದ್ದರು. ನಾನು ಅವರ ಕೊನೆಯ ಆಸೆ ಏನೆಂದು ಕೇಳಿದಾಗ ಅವರು, ``ದೇಶದ ಶತಕೋಟಿ ಮುಖಗಳಲ್ಲಿ ಶತಕೋಟಿ ಮುಗುಳ್ನಗೆಗಳನ್ನು ಕಾಣುವುದು'' ಎಂದಿದ್ದರು.

ತಂತ್ರಜ್ಞಾನ ವಿವಿಗೆ ಕಲಾಂ ಹೆಸರು
ಕೇರಳ ಸರ್ಕಾರದ ಪ್ರಸ್ತಾವಿತ ತಂತ್ರಜ್ಞಾನ ವಿಶ್ವವಿದ್ಯಾಲಯಕ್ಕೆ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿಡಲು ನಿರ್ಧರಿಸಲಾಗಿದೆ. ಕಲಾಂ ಅವರು ದೇಶಕ್ಕೆ ನೀಡಿದ ಗಣನೀಯ ಕೊಡುಗೆಯನ್ನು  ಸ್ಮರಿಸಿ, ಅವರ ಹೆಸರನ್ನು ವಿವಿಗಿಡಲು ತೀರ್ಮಾನಿಸಿದ್ದಾಗಿ ಕೇರಳ ಅಸೆಂಬ್ಲಿಯಲ್ಲಿ ಸಿಎಂ ಉಮ್ಮನ್ ಚಾಂಡಿ ಘೋಷಿಸಿದ್ದಾರೆ.

ಕಲಾಂ ಅಪೂರ್ಣ ಉಪನ್ಯಾಸ
ಐಐಎಂ ಶಿಲ್ಲಾಂಗ್‍ನಲ್ಲಿ ಕಲಾಂ ಅವರು ಮಾಡಬೇಕಿದ್ದ ಉಪನ್ಯಾಸದ ಪೂರ್ಣ ಭಾಗವು ಶೀಘ್ರವೇ ಪುಸ್ತಕ ರೂಪದಲ್ಲಿ ದೊರೆಯಲಿದೆ. ಐಐಎಂನಲ್ಲಿ ಅವರು "ಕ್ರಿಯೇಟಿಂಗ್ ಎ ಲಿವಬಲ್ ಪ್ಲಾನೆಟ್  ಅರ್ತ್" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಬೇಕಿತ್ತು. ಆದರೆ ಉಪನ್ಯಾಸ ಆರಂಭಿಸಿದ ಕೆಲವೇ ಕ್ಷಣದಲ್ಲಿ ಅವರು ಕುಸಿದು ಬಿದ್ದಿದ್ದರು. ಹೀಗಾಗಿ ಉಪನ್ಯಾಸವು ಅಪೂರ್ಣಗೊಂಡಿತ್ತು. ಅವರು ಅರ್ಧ ಬರೆದು ಮುಗಿಸಿರುವ ಪುಸ್ತಕದಲ್ಲಿ ಈ ಉಪನ್ಯಾಸವೂ ಸೇರಿತ್ತು. ಈ ಹಿನ್ನೆಲೆಯಲ್ಲಿ ಅದನ್ನು ಅದನ್ನು ಹೇಗಾದರೂ ಮಾಡಿ ಪೂರ್ಣಗೊಳಿಸಬೇಕೆಂಬ ಇರಾದೆಯಿದೆ ಎಂದು ಕಲಾಂರ ಆಪ್ತ ಸಹಾಯಕ ಸೃಜನ್ ಪಾಲ್ ಸಿಂಗ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT