ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಕೊಚ್ಚಿಹೋದ ಒಂಭತ್ತು ಆಂಧ್ರ ಮೀನುಗಾರರು

ಕಳೆದವಾರ ಬಂಗಾಳಕೊಲ್ಲಿ ಸಾಗರದಲ್ಲಿ ಕಾಣೆಯಾಗಿದ್ದ ಒಂಭತ್ತು ಜನ ಆಂಧ್ರಪ್ರದೇಶನ ಮೀನುಗಾರರು ಮೃತಪಟ್ಟಿದ್ದಾರೆ ಎಂದು ಬದುಕುಳಿದ ಒಬ್ಬ ಮೀನುಗಾರ

ವಿಜಯವಾಡ: ಕಳೆದವಾರ ಬಂಗಾಳಕೊಲ್ಲಿ ಸಾಗರದಲ್ಲಿ ಕಾಣೆಯಾಗಿದ್ದ ಒಂಭತ್ತು ಜನ ಆಂಧ್ರಪ್ರದೇಶನ ಮೀನುಗಾರರು ಮೃತಪಟ್ಟಿದ್ದಾರೆ ಎಂದು ಬದುಕುಳಿದ ಒಬ್ಬ ಮೀನುಗಾರ ತಿಳಿಸಿದ್ದಾರೆ. ಕಾಣೆಯಾದ ಮೀನುಗಾರರ ಹುಡುಕಾಟ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡದಿಂದ ಒಂಭತ್ತು ಜನ ಮೀನುಗಾರರು ಬಂಗಾಳಾಕೊಲ್ಲಿಯ ತೀವ್ರ ಅಲೆಗಳಿಂದ ಹಡಗು ಮುಗುಜಿ ಬಲಿಯಾಗಿದ್ದಾರೆ ಎಂದು ಬದುಕುಳಿದ ಒಬ್ಬ ಮೀನುಗಾರ ತಿಳಿಸಿದ್ದಾರೆ.

ಕಾಕಿನಾಡದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬದುಕುಳಿದ ಮೀನುಗಾರ ವಿ ಕೋಟಯ್ಯ ಸಮುದ್ರದಲ್ಲಿ ಮೀನು ಹಿಡಿಯುವಾಗ ವಿಪರೀತ ಹವಾಮಾನದಿಂದ ತಮ್ಮ ಹಡಗುಗಳು ಮುಗುಚಿಕೊಂಡವು. ನನ್ನ ಕಣ್ಮುಂದೆಯೇ ೯ ಜನ ಮೀನುಗಾರರು ಹತರಾದರು. ನಾನು ಹಡಗನ್ನು ಹಿಡಿದು ತೀರಕ್ಕೆ ಕಷ್ಟಪಟ್ಟು ಬಂದು ಸೇರಿದೆ ಎಂದು ತಿಳಿಸಿದ್ದಾರೆ.

ಜೂ ೧೬ ರಿಂದ ಇವರ ದೋಣಿಯು ಒಳಗೊಂಡಂತೆ ಹಲವಾರು ದೋಣಿಗಳು ಕಾಕಿನಾಡ ತೀರದಿಂದ ಹೊರಟಿದ್ದವು.

೨೦ ಹಡಗುಗಳಲ್ಲಿದ ೧೦೦ ಜನ ಮೀನುಗಾರರು ಸುರಕ್ಷಿತವಾಗಿ ಹಿಂದಿರುಗಿದ್ದರೆ ಮತ್ತಿತರ ೨೩ ಹಡಗುಗಳ ೧೦೦ ಮೀನುಗಾರಾರು ಕಾಣೆಯಾಗಿದ್ದರು.

ಪೂರ್ವ ಗೋದಾವರಿ ಕಲೆಕ್ಟರ್ ಅರುಣ್ ಕುಮಾರ್ ತಿಳಿಸಿರುವಂತೆ ಮೂರು ಹೆಲಿಕ್ಯಾಪ್ಟರ್ ಗಳು ಕಾಣೆಯಾದ ಮೀನುಗಾರರನ್ನು ಹುಡುಕುತ್ತಿವೆ. ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT