ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಅರಬ್ಬೀ ಸಮುದ್ರದಲ್ಲಿ ಮುಳುಗಿದ ಸಿಮೆಂಟ್ ತುಂಬಿದ ಹಡಗು; ೧೪ ಜನರ ರಕ್ಷಣೆ

ವೈಪರೀತ್ಯ ಹವಾಮಾನದಿಂದ ಗುಜರಾತ್ ನ ತೀರದಿಂದ ಅರಬ್ಬೀ ಸಮುದ್ರದಲ್ಲಿ ಮುಳುಗಿದ ಸಿಮೆಂಟ್ ಕೊಂಡೊಯ್ಯುತ್ತಿದ್ದ ಹಡಗಿನ ೧೪ ಜನ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ

ಮುಂಬೈ: ವೈಪರೀತ್ಯ ಹವಾಮಾನದಿಂದ ಗುಜರಾತ್ ನ ತೀರದಿಂದ ಅರಬ್ಬೀ ಸಮುದ್ರದಲ್ಲಿ ಮುಳುಗಿದ ಸಿಮೆಂಟ್ ಕೊಂಡೊಯ್ಯುತ್ತಿದ್ದ ಹಡಗಿನ ೧೪ ಜನ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಂ ವಿ ಕೋಸ್ತಲ್ ಪ್ರೈಡ್ ಹಡಗು ಮಹಾರಾಷ್ಟ್ರದ ದಹನು ಇಂದ ಪಶ್ಚಿಮಕ್ಕೆ ೨೫ ಕಿಮೀ ದೂರ ಕ್ರಮಿಸಿದ್ದಾಗ ಎಂಜಿನ್ ನಿಷ್ಫಲವಾಗಿದ್ದರಿಂದ ಮಂಗಳವಾರ ಸಂಜೆ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿದೆ.

ಭಾರತೀಯ ನೌಕಾದಳ ಮತ್ತು ಭಾರತೀಯ ಬಂದರು ಪಡೆ ರಕ್ಷಣೆಗೆ ತಕ್ಷಣ ಹಡಗು ಕಳುಹಿಸಿ ಮುಳುಗಿದ್ದ ಹಡಗನ್ನು ಎಳೆದುತರುವ ವ್ಯವಸ್ಥೆಯನ್ನೂ ಮಾಡಿದ್ದಾರೆ.

ಆದರೆ ಬುಧವಾರ ಬೆಳಗ್ಗೆ ಸುಮಾರು ೮:೪೦ ಕ್ಕೆ ಹಡಗು ಮುಂಬೈ ನ ಉತ್ತರಕ್ಕೆ ೭೫ ನಾಟಿಕಲ್ ಮೈಲುಗಳ ದೂರದಲ್ಲಿ ಮುಳುಗಿದೆ.

ಐ ಎನ್ ಎಸ್ ಶಿಕ್ರಾ ಮತ್ತು ಐ ಎನ್ ಎಸ್ ಕೊಳಬಾ ಹಡುಗಗಳನ್ನು ಬಳಸಿ ಭಾರತೀಯ ನೌಕಾದಳ ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಿ ೧೪ ಸಿಬ್ಬಂದಿಗಳನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್ ಸಚಿವ ಸಂಪುಟ ಭಿನ್ನಮತ ಶಮನ: ರಾಜೀನಾಮೆ ವಾಪಸ್ ಪಡೆದ ರಾಮಲಿಂಗಾ ರೆಡ್ಡಿ!

ದಾವಣಗೆರೆ: ಪಂಚಮಸಾಲಿ ಮಠಕ್ಕೆ ಭಕ್ತರು ನೀಡಿದ್ದ 1 ಕೆ.ಜಿ ಚಿನ್ನಾಭರಣ ನಾಪತ್ತೆ, ಟ್ರಸ್ಟ್ ವಿರುದ್ಧ ಗಂಭೀರ ಆರೋಪ!

Karnataka CET Result 2026 Announced: ಬೆಂಗಳೂರಿನ ಆರ್ ವಿ ಕಾಲೇಜಿನ ತನಿಷಾ ಕಾರ್ತಿಕ್ ಮೊದಲ ಸ್ಥಾನ, 2,92,782 ಅಭ್ಯರ್ಥಿಗಳು ಪ್ರವೇಶಕ್ಕೆ ಅರ್ಹತೆ!

ನಮ್ಮ ಕನಿಕರದಿಂದ TVK ಸರ್ಕಾರ ಉಳಿದಿದೆ: ಶೀಘ್ರದಲ್ಲೇ ಬೀಳಿಸ್ತೀವಿ- DMK ಅಧ್ಯಕ್ಷ ಸ್ಟಾಲಿನ್!

India vs Afghanistan: 6, 6, 6, ವಿಂಟೇಜ್ Rishab Pant ಈಸ್ ಬ್ಯಾಕ್, ಧೋನಿ, ಕಿರ್ಮಾನಿ ಇರುವ ಎಲೈಟ್ ಗ್ರೂಪ್ ಸೇರ್ಪಡೆ! LSG ಶ್ಲಾಘನೆ

SCROLL FOR NEXT