ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಅರಬ್ಬೀ ಸಮುದ್ರದಲ್ಲಿ ಮುಳುಗಿದ ಸಿಮೆಂಟ್ ತುಂಬಿದ ಹಡಗು; ೧೪ ಜನರ ರಕ್ಷಣೆ

ವೈಪರೀತ್ಯ ಹವಾಮಾನದಿಂದ ಗುಜರಾತ್ ನ ತೀರದಿಂದ ಅರಬ್ಬೀ ಸಮುದ್ರದಲ್ಲಿ ಮುಳುಗಿದ ಸಿಮೆಂಟ್ ಕೊಂಡೊಯ್ಯುತ್ತಿದ್ದ ಹಡಗಿನ ೧೪ ಜನ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ

ಮುಂಬೈ: ವೈಪರೀತ್ಯ ಹವಾಮಾನದಿಂದ ಗುಜರಾತ್ ನ ತೀರದಿಂದ ಅರಬ್ಬೀ ಸಮುದ್ರದಲ್ಲಿ ಮುಳುಗಿದ ಸಿಮೆಂಟ್ ಕೊಂಡೊಯ್ಯುತ್ತಿದ್ದ ಹಡಗಿನ ೧೪ ಜನ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಂ ವಿ ಕೋಸ್ತಲ್ ಪ್ರೈಡ್ ಹಡಗು ಮಹಾರಾಷ್ಟ್ರದ ದಹನು ಇಂದ ಪಶ್ಚಿಮಕ್ಕೆ ೨೫ ಕಿಮೀ ದೂರ ಕ್ರಮಿಸಿದ್ದಾಗ ಎಂಜಿನ್ ನಿಷ್ಫಲವಾಗಿದ್ದರಿಂದ ಮಂಗಳವಾರ ಸಂಜೆ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿದೆ.

ಭಾರತೀಯ ನೌಕಾದಳ ಮತ್ತು ಭಾರತೀಯ ಬಂದರು ಪಡೆ ರಕ್ಷಣೆಗೆ ತಕ್ಷಣ ಹಡಗು ಕಳುಹಿಸಿ ಮುಳುಗಿದ್ದ ಹಡಗನ್ನು ಎಳೆದುತರುವ ವ್ಯವಸ್ಥೆಯನ್ನೂ ಮಾಡಿದ್ದಾರೆ.

ಆದರೆ ಬುಧವಾರ ಬೆಳಗ್ಗೆ ಸುಮಾರು ೮:೪೦ ಕ್ಕೆ ಹಡಗು ಮುಂಬೈ ನ ಉತ್ತರಕ್ಕೆ ೭೫ ನಾಟಿಕಲ್ ಮೈಲುಗಳ ದೂರದಲ್ಲಿ ಮುಳುಗಿದೆ.

ಐ ಎನ್ ಎಸ್ ಶಿಕ್ರಾ ಮತ್ತು ಐ ಎನ್ ಎಸ್ ಕೊಳಬಾ ಹಡುಗಗಳನ್ನು ಬಳಸಿ ಭಾರತೀಯ ನೌಕಾದಳ ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಿ ೧೪ ಸಿಬ್ಬಂದಿಗಳನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT