ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಅರಬ್ಬೀ ಸಮುದ್ರದಲ್ಲಿ ಮುಳುಗಿದ ಸಿಮೆಂಟ್ ತುಂಬಿದ ಹಡಗು; ೧೪ ಜನರ ರಕ್ಷಣೆ

ವೈಪರೀತ್ಯ ಹವಾಮಾನದಿಂದ ಗುಜರಾತ್ ನ ತೀರದಿಂದ ಅರಬ್ಬೀ ಸಮುದ್ರದಲ್ಲಿ ಮುಳುಗಿದ ಸಿಮೆಂಟ್ ಕೊಂಡೊಯ್ಯುತ್ತಿದ್ದ ಹಡಗಿನ ೧೪ ಜನ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ

ಮುಂಬೈ: ವೈಪರೀತ್ಯ ಹವಾಮಾನದಿಂದ ಗುಜರಾತ್ ನ ತೀರದಿಂದ ಅರಬ್ಬೀ ಸಮುದ್ರದಲ್ಲಿ ಮುಳುಗಿದ ಸಿಮೆಂಟ್ ಕೊಂಡೊಯ್ಯುತ್ತಿದ್ದ ಹಡಗಿನ ೧೪ ಜನ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಂ ವಿ ಕೋಸ್ತಲ್ ಪ್ರೈಡ್ ಹಡಗು ಮಹಾರಾಷ್ಟ್ರದ ದಹನು ಇಂದ ಪಶ್ಚಿಮಕ್ಕೆ ೨೫ ಕಿಮೀ ದೂರ ಕ್ರಮಿಸಿದ್ದಾಗ ಎಂಜಿನ್ ನಿಷ್ಫಲವಾಗಿದ್ದರಿಂದ ಮಂಗಳವಾರ ಸಂಜೆ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿದೆ.

ಭಾರತೀಯ ನೌಕಾದಳ ಮತ್ತು ಭಾರತೀಯ ಬಂದರು ಪಡೆ ರಕ್ಷಣೆಗೆ ತಕ್ಷಣ ಹಡಗು ಕಳುಹಿಸಿ ಮುಳುಗಿದ್ದ ಹಡಗನ್ನು ಎಳೆದುತರುವ ವ್ಯವಸ್ಥೆಯನ್ನೂ ಮಾಡಿದ್ದಾರೆ.

ಆದರೆ ಬುಧವಾರ ಬೆಳಗ್ಗೆ ಸುಮಾರು ೮:೪೦ ಕ್ಕೆ ಹಡಗು ಮುಂಬೈ ನ ಉತ್ತರಕ್ಕೆ ೭೫ ನಾಟಿಕಲ್ ಮೈಲುಗಳ ದೂರದಲ್ಲಿ ಮುಳುಗಿದೆ.

ಐ ಎನ್ ಎಸ್ ಶಿಕ್ರಾ ಮತ್ತು ಐ ಎನ್ ಎಸ್ ಕೊಳಬಾ ಹಡುಗಗಳನ್ನು ಬಳಸಿ ಭಾರತೀಯ ನೌಕಾದಳ ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಿ ೧೪ ಸಿಬ್ಬಂದಿಗಳನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಭಾರತ ಹೆಚ್ಚಿನ ಸುಂಕ ವಿಧಿಸಬೇಕು: ಕೇಜ್ರಿವಾಲ್

SCROLL FOR NEXT