ಅರವಿಂದ್ ಕೇಜ್ರಿವಾಲ್ 
ಪ್ರಧಾನ ಸುದ್ದಿ

ನ್ಯಾಚುರೋಪತಿ ಚಿಕಿತ್ಸೆಗೆ ಬೆಂಗಳೂರಿಗೆ ಬಂದಿಳಿದ ಅರವಿಂದ್ ಕೇಜ್ರಿವಾಲ್

ಸಕ್ಕರೆ ಖಾಯಿಲೆ ಮತ್ತು ಕೆಮ್ಮಿಗೆ ನ್ಯಾಚುರೋಪತಿ ಚಿಕಿತ್ಸೆ ಪಡೆಯಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ೧೦ ದಿನಗಳ ಸಮಯಕ್ಕೆ

ಅಪ್ಡೇಟ್: ಸಕ್ಕರೆ ಖಾಯಿಲೆ ಮತ್ತು ಕೆಮ್ಮಿಗೆ ನ್ಯಾಚುರೋಪತಿ ಚಿಕಿತ್ಸೆ ಪಡೆಯಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ೧೦ ದಿನಗಳ ಸಮಯಕ್ಕೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಕರ್ನಾಟಕ ಸರ್ಕಾರದ ಶಿಷ್ಟತೆಯ ಪ್ರಕಾರ ನಿಯೋಜಿಸಿದ್ದ ಸರ್ಕಾರಿ ವಾಹನವನ್ನು ಬಳಸದೆ, ಪಕ್ಷದ ಕಾರ್ಯಕರ್ತರ ಖಾಸಗಿ ವಾಹನವೊಂದರಲ್ಲಿ ಚಿಕಿತ್ಸೆಗೆ ತೆರಳಿದ್ದಾರೆ.

ನವದೆಹಲಿ
: ಸಕ್ಕರೆ ಖಾಯಿಲೆ ಮತ್ತು ಕೆಮ್ಮಿಗೆ ನ್ಯಾಚುರೋಪತಿ ಚಿಕಿತ್ಸೆ ಪಡೆಯಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ೧೦ ದಿನಗಳ ಸಮಯಕ್ಕೆ ಬೆಂಗಳೂರಿಗೆ ಹೊರಟಿದ್ದಾರೆ.

ತಮ್ಮ ತಂದೆ ತಾಯಿಯ ಜೊತೆ ಕೇಜ್ರಿವಾಲ್ ಗಾಜಿಯಾಬಾದ್ ನ ಕೌಸಂಭಿಯ ತಮ್ಮ ಮನೆಯನ್ನು ೮ ಘಂಟೆಗೆ ಬಿಟ್ಟರು.

ಈ ೧೦ ದಿನಗಳ ಕೇಜ್ರಿವಾಲ್ ಗೈರು ಹಾಜರಿಯಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಧಿಯಾ ಅವರು ದೆಹಲಿ ಸರ್ಕಾರದ ದಿನಂಪ್ರತಿ ಚಟುವಟಿಕೆಗಳನ್ನು ನೋಡಿಕೊಳ್ಳಲಿದ್ದಾರೆ.

ಕಳೆದ ಎರಡು ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಅರವಿಂದ್ ಕೇಜ್ರಿವಾಲ್ ಅವರ ಬಿಡದ ಕೆಮ್ಮಿಗೆ ಚಿಕಿತ್ಸೆ ಪಡೆಯಲು ಬೆಂಗಳೂರಿನ ಯೋಗ ಚಿಕಿತ್ಸಕರನ್ನು ಕಾಣುವಂತೆ ತಿಳಿಸಿದ್ದರು.

ಅರವಿಂದ್ ಅವರ ರಕ್ತದಲ್ಲಿ ಸಕ್ಕರೆ ಅಂಶದ ಪ್ರಮಾಣ ಕಳೆದ ೧೨ ದಿನಗಳಿಂದ ೩೦೦ ಕ್ಕೂ ಹೆಚ್ಚಿದೆ. ಇನ್ಸುಲಿನ್ ಪ್ರಮಾಣವನ್ನು ಮೂರು ಪಟ್ಟು ಹೆಚ್ಚಿಸಿದ್ದರು ಇತರ ಔಷಧದ ಪ್ರಮಾಣವನ್ನು ದುಪ್ಪಟ್ಟು ಹೆಚ್ಚಿಸಿದ್ದರು ಕೆಮ್ಮಿನಲ್ಲಿ ಇಳಿಮುಖ ಕಂಡಿಲ್ಲ ಹಾಗು ಸಕ್ಕರೆ ಅಂಶದ ಪ್ರಮಾಣ ಹೆಚ್ಚಾಗಿಯೇ ಉಳಿದಿದೆ ಎಂದು ಮೂಲಗಳು ತಿಳಿಸಿವೆ.

ಕೆಮ್ಮಿನ ಅಲರ್ಜಿ ಇರುವ ಕೇಜ್ರಿವಾಲ್ ಅವರಿಗೆ ವಿಧಾನಸಭೆಯ ಚುನಾವಣೆ ವೇಳೆಯಲ್ಲಿ ಅನಾರೋಗ್ಯ ತೀವ್ರಗೊಂಡಿತ್ತು. ಅನಾರೋಗ್ಯದ ಕಾರಣ ನೀಡಿ ಅವರು ನೆನ್ನೆ ನಡೆದ ಪಕ್ಷದ ರಾಷ್ಟ್ರೀಯ ಸಂಚಾಲಕರ ಸಭೆಯಿಂದ ಹೊರಗುಳಿದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT