ಘರ್ ವಾಪಸಿ ಕಾರ್ಯಕ್ರಮ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಮುಸ್ಲಿಂ ವೈಯಕ್ತಿಕ ಕಾನೂನು ಸಮಿತಿ ಸಭೆಯಲ್ಲಿ 'ಘರ್ ವಾಪಸಿ' ಚರ್ಚೆ ಸಂಭವ

ಕೆಲವು ಹಿಂದು ಸಂಘಟನೆಗಳು ನಡೆಸುತ್ತಿರುವ 'ಘರ್ ವಾಪಸಿ' (ಮನೆಗೆ ಹಿಂದಿರುಗಿ) ವಿವಾದ, ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಸಮಿತಿಯ (ಎ ಐ ಎಂ ಪಿ ಎಲ್ ಬಿ)

ಲಕನೌ: ಕೆಲವು ಹಿಂದು ಸಂಘಟನೆಗಳು ನಡೆಸುತ್ತಿರುವ 'ಘರ್ ವಾಪಸಿ' (ಮನೆಗೆ ಹಿಂದಿರುಗಿ) ವಿವಾದ, ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಸಮಿತಿಯ (ಎ ಐ ಎಂ ಪಿ ಎಲ್ ಬಿ) ಮೂರು ದಿನಗಳ ಸಭೆಯಲ್ಲಿ ಚರ್ಚೆಯಾಗುವ ಸಂಭವವಿದೆ. ಈ ಸಭೆ ಮಾರ್ಚ್ ೨೦ರಂದು ಜೈಪುರದಲ್ಲಿ ಪ್ರಾರಂಭವಾಗಲಿದೆ.

"ಈ ವಿಷಯ ಸಭೆಯ ಕಾರ್ಯಸುಚಿಯಲ್ಲಿ ಇಲ್ಲವಾದರೂ ಚರ್ಚೆಗೆ ಎತ್ತಿಕೊಳ್ಳಬಹುದು. ದೇಶ ಮುನ್ನಡೆಯುತ್ತಿದೆಯೇ ಅಥವಾ ಹಾಳುಗುತ್ತಿದೆಯೇ ಎಂಬುದರ ಬಗ್ಗೆ ಚಿಂತನೆ ನಡೆಸಬೇಕಿದೆ. ಈ 'ಘರ್ ವಾಪಸಿ' ಕಾರ್ಯಕ್ರಮ ಎಂದರೆ ಏನು?" ಎಂದು ಎ ಐ ಎಂ ಪಿ ಎಲ್ ಬಿಯ ಪ್ರಧಾನ ಕಾರ್ಯದರ್ಶಿ ಮೌಲಾನ ನಿಜಾಮುದ್ದೀನ್ ತಿಳಿಸಿದ್ದಾರೆ.

"ನಾಳೆ ಕ್ರಿಶ್ಚಿಯನ್ನರನ್ನು ಹಿಂದೂಗಳಾಗಿ ಎನ್ನುತ್ತೀರಿ, ಮುಂದಿನ ದಿನ ಮುಸ್ಲಿಮರನ್ನು ಹಿಂದೂಗಳಾಗಿ ಎಂದು ಕರೆ ಕೊಡುತ್ತೀರಿ. ಇದೇನು ತಮಾಷೆ? ಇದು ಇಡೀ ಸಮುದಾಯವನ್ನು ಅವಮಾನಿಸಿದ ಹಾಗೆ" ಎಂದಿದ್ದಾರೆ ಅವರು.

ಎಲ್ಲ ಸಮುದಾಯಗಳು ಹಿಂದಿನಿಂದ ಸೌಹಾರ್ದಯುತವಾಗಿ ಬದುಕುತ್ತಿರುವ ಜಾತ್ಯಾತೀತ ರಾಷ್ಟ್ರ ಇದು ಎಂದಿರುವ ಅವರು ಮುಸ್ಲಿಮರ ವಿರುದ್ಧ ದೊಡ್ಡ ಪ್ರಚಾರ ನಡೆಸಲಾಗುತ್ತಿದೆ. ಇಂತಹ ವಿವಾದಾತ್ಮಕ ವಿಷಯಗಳನ್ನು ಸಾಮಾನ್ಯವಾಗಿ ಸಭೆಯ ಕಾರ್ಯಸೂಚಿಯ ಹೊರಗಡೆ ಇಟ್ಟಿರುತ್ತೇವೆ. ಆದರೆ ಯಾವುದಾದರೂ ಪ್ರಶ್ನೆ ಎದ್ದರೆ ಅದಕ್ಕೆ ಸಮಿತಿ ಉತ್ತರಿಸುತ್ತದೆ ಎಂದಿದ್ದಾರೆ ಮೌಲಾನ.

ಮಹಾರಾಷ್ಟ್ರದಲ್ಲಿ ದನದ ಮಾಂಸ ನಿಷೇಧದ ಬಗ್ಗೆ ಕೇಳಿದ ಪ್ರಶ್ನೆಗೆ "ಇದೆಲ್ಲಾ ರಾಜಕೀಯ" ಎಂದಿರುವ ಅವರು ಮಹಾರಾಷ್ಟ್ರದಲ್ಲಾಗಲೀ, ಕೋಲ್ಕತ್ತಾದಲ್ಲಾಗಲಿ ಮುಸ್ಲಿಮರಷ್ಟೇ ಅಲ್ಲ, ಉಳಿದವರು ಕೂಡ ದನದ ಮಾಂಸ ತಿನ್ನುತ್ತಾರೆ ಎಂದಿದ್ದಾರೆ. ಇದು ಮುಸ್ಲಿಮರಿಗಷ್ಟೆ ಸಂಬಂಧಿಸಿದ ವಿಷಯವಲ್ಲ, ಇದನ್ನು ನಂಬಿರುವ ಹಲವು ಉದ್ಯಮ ಮತ್ತು ಜನರಿಗೆ ತೊಂದರೆಯಾಗಲಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT