ಪ್ರಧಾನ ಸುದ್ದಿ

ರಾಣಾಘಾಟ್ ನನ್ ರೇಪ್; ಆರೋಪಿ ಮುಂಬೈನಲ್ಲಿ ಸೆರೆ

Guruprasad Narayana

ಮುಂಬೈ: ಪಶ್ಚಿಮಬಂಗಾಳದ ರಾಣಾಘಾಟ್ ನನ್ ಗ್ಯಾಂಗ್ ರೇಪ್ ಪ್ರಕರಣದ ತನಿಖೆಯಲ್ಲಿ ಆಗಿರುವ ಬೆಳವಣಿಗೆಯಲ್ಲಿ ಆರೋಪಿಯೊಬ್ಬನನ್ನು ಪಶ್ಚಿಮ ಬಂಗಾಳದ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.

ಸಿಕಂದರ್ ಶೇಖ್ ಅಲಿಯಾಸ್ ಸಲೀಮ್ ಎಂದು ಗುರುತಿಸಲಾಗಿರುವ ಆರೋಪಿಯನ್ನು ದಕ್ಷಿಣ ಮುಂಬೈನ ನಾಗ್ಪಾಡ ಪ್ರದೇಶದಿಂದ ಪಶ್ಚಿಮ ಬಂಗಾಳ ಪೊಲೀಸರು ಮುಂಬೈ ಪೊಲೀಸರ ನೆರವಿನಿಂದ ನೆನ್ನೆ ರಾತ್ರಿ ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣದ ಮುಂದಿನ ತನಿಖೆಗಾಗಿ ಆರೋಪಿಯನ್ನು ಪಶ್ಚಿಮಬಂಗಾಳಕ್ಕೆ ಕರೆದೊಯ್ಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT