ಇರಾನ್ ವೈಮಾನಿಕ ದಾಳಿಯಿಂದ ಗಲಭೆಗೆ ತುತ್ತಾಗಿರುವ ಯೆಮನ್ 
ಪ್ರಧಾನ ಸುದ್ದಿ

ಯೆಮನ್ ನಿಂದ ಭಾರತೀಯರನ್ನು ವಿಮಾನದಲ್ಲಿ ಕರೆತರಲು ಸರ್ಕಾರ ಚಿಂತನೆ

ಇರಾನ್ ವೈಮಾನಿಕ ದಾಳಿಯಿಂದ ಗಲಭೆಗೆ ತುತ್ತಾಗಿರುವ ಯೆಮನ್ ನಿಂದ ಮಲೆಯಾಳಿಗನ್ನೂ ಒಳಗೊಂಡಂತೆ ಭಾರತೀಯರನ್ನು ವಿಮಾನದ ಮೂಲಕ

ತಿರುವನಂತಪುರಮ್: ಇರಾನ್ ವೈಮಾನಿಕ ದಾಳಿಯಿಂದ ಗಲಭೆಗೆ ತುತ್ತಾಗಿರುವ ಯೆಮನ್ ನಿಂದ ಮಲೆಯಾಳಿಗನ್ನೂ ಒಳಗೊಂಡಂತೆ ಭಾರತೀಯರನ್ನು ವಿಮಾನದ ಮೂಲಕ ಕರೆತರುವ ಸಾಧ್ಯತೆಗಳನ್ನು ಪರಿಗಣಿಸಲಾಗುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮುಖ್ಯಮಂತ್ರಿ ಒಮನ್ ಚ್ಯಾಂಡಿ ಅವರಿಗೆ ತಿಳಿಸಿದ್ದಾರೆ.

ಭಾರತೀಯರನ್ನು ರಕ್ಷಿಸಲು ಯೆಮನ್ ಗೆ ಈಗಾಗಲೇ ಎರಡು ಹಡುಗಳನ್ನು ಕಳುಹಿಸಲಾಗಿದೆ. ಆದರೆ ಈ ಹಡಗುಗಳು ಅಲ್ಲಿಗೆ ತಲುಪಲು ಐದು ದಿನ ಹಿಡಿಯುತ್ತದೆ. ಇಂತಹ ಸನ್ನಿವೇಶದಲ್ಲಿ ವಿಮಾನದ ಮೂಲಕ ಭಾರತೀಯರನ್ನು ಕರೆತರಲು ಸೌದಿ ಸರ್ಕಾರವನ್ನು ಮನವಿ ಮಾಡಿದ್ದೇವೆ ಎಂದು ಕೇಂದ್ರ ಸಚಿವೆ ತಿಳಿಸಿದ್ದಾರೆ ಎಂದು ಅಧಿಕೃತವಾಗಿ ಬಿಡುಗಡೆಯಾದ ಹೇಳಿಕೆ ತಿಳಿಸಿದೆ.

ಯೆಮನ್ ನಲ್ಲಿ ನೆಲೆಸಿರುವ ಹಲವಾರು ಮಲೆಯಾಳಿ ಕುಟುಂಬ ಸದಸ್ಯರ ಜೊತೆ ಒಮನ್ ಚ್ಯಾಂಡಿ ಮಾತನಾಡಿದ್ದಾರೆ. ಹಲವರ ಪಾಸ್ಪೋರ್ಟ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಯೆಮೆನ್ ನ ಭಾರತೀಯ ರಾಯಭಾರಿ ಕಛೇರಿ ಮಧ್ಯಸ್ಥಿಕೆ ವಹಿಸಿದೆ ಎಂದು ಹೇಳಿಕೆ ತಿಳಿಸಿದೆ.

"ಅವರು ಪಾಸ್ಪೋರ್ಟ್ ಗಳನ್ನು ಹಿಂದಕ್ಕೆ ಪಡೆಯದೆ ಹೋದರೆ, ವಾಪಸ್ ಬರಲು ವಿಶೇಶ ಪಾಸ್ ಗಳನ್ನು ಅವರಿಗೆ ನೀಡಲಾಗುವುದು. ನಂತರ ಮತ್ತೊಂದು ಪಾಸ್ಪೋರ್ಟ್ ನೀಡಲಾಗುವುದು" ಎಂದು ಹೇಳಿಕೆ ತಿಳಿಸಿದೆ.

ಯೆಮೆನ್ ನಲ್ಲಿ ಎಲ್ಲ ಮಲೆಯಾಳಿ ಕುಟುಂಬಗಳು ಸುರಕ್ಷಿತವಾಗಿವಿ ಎಂದು ಹೇಳಿಕೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಅಲ್-ಫಲಾಹ್ ವಿಶ್ವವಿದ್ಯಾಲಯದ ಕಚೇರಿ-25 ಸ್ಥಳಗಳ ಮೇಲೆ ED ದಾಳಿ, ತೀವ್ರ ಶೋಧ..!

ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಮಾರಣಹೋಮ: 31ಕ್ಕೇರಿದ ಸಾವಿನ ಸಂಖ್ಯೆ, ನಿರ್ಲಕ್ಷ್ಯವೇ ಕಾರಣ ಎಂದ ತಜ್ಞರು

ಸೌದಿ ಅರೇಬಿಯಾ ಬಸ್ ದುರಂತ ಪ್ರಕರಣ: 45 ಮಂದಿ ಪೈಕಿ ಓರ್ವ ಕನ್ನಡಿಗನೂ ಬಲಿ, ಜೀವನಾಧಾರ ಕಳೆದುಕೊಂಡ ಹುಬ್ಬಳ್ಳಿ ಕುಟುಂಬ..!

ಈ ವರ್ಷ ಇಲ್ಲಿಯವರೆಗೆ 255 ಪಾಕ್ ಡ್ರೋನ್‌ಗಳನ್ನು ಹೊಡೆದುರುಳಿಸಿದ BSF

ಉತ್ತಮ ಜನಪ್ರತಿನಿಧಿಗಳನ್ನು ತಯಾರು ಮಾಡಲು ಒಂದು ವರ್ಷದ ಕೋರ್ಸ್ ಆರಂಭಿಸಲು ಚಿಂತನೆ : ಸಭಾಧ್ಯಕ್ಷ ಯು.ಟಿ. ಖಾದರ್

SCROLL FOR NEXT