ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಎಲ್ ಟಿ ಟಿ ಇ ಮತ್ತೆ ಒಗ್ಗೂಡಬಹುದು ಎಂದು ಎಚ್ಚರಿಸಿದ ಲಂಕಾ ಸಚಿವ

ಯುದ್ಧದಲ್ಲಿ ಸೋತ ಆರು ವರ್ಷದ ನಂತರ ಈಗ ಎಲ್ ಟಿ ಟಿ ಇ ಮತ್ತೆ ಒಗ್ಗೂಡಿ, ಪ್ರತ್ಯೇಕ ತಮಿಳು ರಾಜ್ಯಕ್ಕಾಗಿ ಬೇಡಿಕೆಯಿಟ್ಟು ಮತ್ತೆ ಶ್ರೀಲಂಕಾ ವಿರುದ್ಧ

ಕೊಲೊಂಬೊ: ಯುದ್ಧದಲ್ಲಿ ಸೋತ ಆರು ವರ್ಷದ ನಂತರ ಈಗ ಎಲ್ ಟಿ ಟಿ ಇ ಮತ್ತೆ ಒಗ್ಗೂಡಿ, ಪ್ರತ್ಯೇಕ ತಮಿಳು ರಾಜ್ಯಕ್ಕಾಗಿ ಬೇಡಿಕೆಯಿಟ್ಟು ಮತ್ತೆ ಶ್ರೀಲಂಕಾ ವಿರುದ್ಧ ಯುದ್ಧ ಹೂಡುವ ಗಂಡಾಂತರ ಇದೆ ಎಂದು ಸೋಮವಾರ ಶ್ರೀಲಂಕಾ ಸರ್ಕಾರ ಎಚ್ಚರಿಸಿದೆ.

ಎಲ್ ಟಿ ಟಿ ಇ ಸಂಘಟನೆಯ ಕೆಲವು ಉಪ ಸಂಸ್ಥೆಗಳು ಈ ಕೃತ್ಯಕ್ಕಾಗಿ ಹಣ ಸಂಗ್ರಹಿಸಲು ವಿದೇಶದಲ್ಲಿ ವ್ಯವಾಹಾರ ನಡೆಸುತ್ತಿವೆ ಎಂದು ಉಪ ವಿದೇಶಾಂಗ ಸಚಿವ ಅಜಿತ್ ಪೆರೆರಾ ಹೇಳಿದ್ದಾರೆ.

"ಅವರ ಕೆಲವು ಸಹ ಸಂಘಟನೆಗಳು ಪೆಟ್ರೋಲ್ ಸ್ಟೇಶನ್ ಗಳು, ಸೂಪರ್ ಮಾರ್ಕೆಟ್ ಗಳು ಈ ರೀತಿಯಲ್ಲಿ ವಿದೇಶದಲ್ಲಿ ವ್ಯವಹಾರ ನಡೆಸುತ್ತಿವೆ ಮತ್ತು ಅವರು ಸಾಗಾಣೆ ಸಂಸ್ಥೆಗಳನ್ನು ಹೊಂದಿದ್ದಾರೆ" ಎಂದು ಪೆರೆರಾ ತಿಳಿಸಿದ್ದಾರೆ.

"ಅವರನ್ನು ನಮ್ಮ ನೆಲದ ಮೇಲೆ ಸೋಲಿಸಿದ್ದರು ನಿಜವಾದ ಅಪಾಯವೆಂದರೆ ಅವರು ಮತ್ತೆ ಒಗ್ಗೂಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ಎಲ್ ಟಿ ಟಿ ಇ ಸಂಸ್ಥೆಯನ್ನು ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸುವಂತೆ ಯುರೋಪಿಯನ್ ಯೂನಿಯನ್ ಮೇಲೆ ಶ್ರೀಲಂಕಾ ಸರ್ಕಾರ ಒತ್ತಡ ಹೇರಿರುವ ಹಿನ್ನಲೆಯಲ್ಲಿ ಪೆರೆರಾ ಈ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT