ಯೆಮನ್ ಗೆ ತೆರಳುತ್ತಿರುವ ಭಾರತೀಯ ಯುದ್ಧ ನೌಕೆ 
ಪ್ರಧಾನ ಸುದ್ದಿ

ಯೆಮನ್ ನಲ್ಲಿ ಭಾರತೀಯರನ್ನು ರಕ್ಷಿಸಲು ನೌಕಾದಳದ ಯುದ್ಧ ಹಡಗುಗಳು

ಯೆಮನ್ ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ರಕ್ಷಿಸಲು ಭಾರತೀಯ ನೌಕಾದಳದ ಯುದ್ಧ ಹಡಗುಗಳು ಹೊರಟಿವೆ ಎಂದು ನೌಕಾದಳದ ಮುಖಂಡ

ನವದೆಹಲಿ: ಯೆಮನ್ ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ರಕ್ಷಿಸಲು ಭಾರತೀಯ ನೌಕಾದಳದ ಯುದ್ಧ ಹಡಗುಗಳು ಹೊರಟಿವೆ ಎಂದು ನೌಕಾದಳದ ಮುಖಂಡ ಪಿ ಮುರುಗೇಶನ್ ತಿಳಿಸಿದ್ದಾರೆ.

"ರಕ್ಷಣೆ ಕಾರ್ಯಾಚರಣೆ ವೈಮಾನಿಕ ಹಾಗೂ ಸಮುದ್ರರ ಮೂಲಕ ಒಟ್ಟಿಗೆ ನಡೆಯಲಿದೆ. ಇದಕ್ಕೆ ಭಾರತೀಯ ನೌಕಾದಳ, ಐ ಎ ಎಫ್ ಮತ್ತು ಏರ್ ಇಂಡಿಯಾ ಸಹಕರಿಸಲಿದ್ದಾರೆ" ಎಂದು ಮುರುಗೇಶನ್ ತಿಳಿಸಿದ್ದಾರೆ.

ಅಂತರ ಸಚಿವರ ಸಭೆಯಲ್ಲಿ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು ಇದರ ಅಧ್ಯಕ್ಷತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಹಿಸಿದ್ದರು ಎಂದು ಅವರು ಸೋಮವಾರ ತಿಳಿಸಿದ್ದಾರೆ.

ಮೂರು ನೌಕಾದಳದ ಯುದ್ಧ ಹಡಗುಗಳು ಹಾಗೂ ಎರಡು ಪ್ರಯಾಣಿಕ ಹಡಗುಗಳನ್ನು ಕಳುಹಿಸಲಾಗುವುದು. ಭಾರತೀಯ ವಾಯುಸೇನೆ ಎರಡು ವಿಮಾನಗಳನ್ನು ಕಳುಹಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸಯ್ಯದ್ ಅಕ್ಬರುದ್ದೀನ್ ಯೋಜನೆಯ ವಿವರಗಳನ್ನು ತಿಳಿಸಿದ್ದಾರೆ.

ವಿದೇಶಾಂಗ ಸಚಿವಾಲಯದ ರಾಜ್ಯ ಮಂತ್ರಿ ಜನರಲ್ ವಿ ಕೆ ಸಿಂಗ್ ಇಂದು ಸಂಜೆ ಜಿಬೌಟಿಗೆ ತೆರಳಲಿದ್ದು ರಕ್ಷಣಾ ಕಾರ್ಯಾಚರಣೆಯ ಮುಂದಾಳತ್ವ ವಹಿಸಲಿದ್ದಾರೆ. ಈಗಾಗಲೇ ಓಮನ್ ನಲ್ಲಿ ಏರ ಇಂಡಿಯಾ ಎರಡು ವಿಮಾನಗಳನ್ನು ಇಳಿಸಿದೆ.

ಯೆಮನ್ ನಲ್ಲಿ ಸುಮಾರು ೪೦೦೦ ಭಾರತೀಯರು ಸಿಲುಕಿದ್ದು ಅದರಲ್ಲಿ ಸುಮಾರು ಅರ್ಧದಷ್ಟು ಜನ ನರ್ಸ್ ಗಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಧಾನಿ ಮೋದಿ Video ಡಿಲೀಟ್: Facebook ಮೇಲೆ ಗದಾ ಪ್ರಹಾರ, Mark Zuckerberg ಕ್ಷಮೆಯಾಚನೆಗೆ ಸಂಸದೀಯ ಸಮಿತಿ ಪಟ್ಟು! ಹೇಳಿದ್ದೇನು?

Repo Rate ಶೇ. 5.25 ಯಥಾಸ್ಥಿತಿ ಮುಂದುವರಿಕೆ, GDP ಬೆಳವಣಿಗೆ ಶೇ. 6.7: RBI ವಿತ್ತೀಯ ನೀತಿ ಪ್ರಕಟ

ಪ್ರಾಣ ಉಳಿಸಿದ ಹೀರೋಗೆ ಪ್ರವಾಹವೇ ಕಂಟಕ: ತನ್ನ ಲೈಫ್ ಜಾಕೆಟ್ ಕೊಟ್ಟು ಜೀವ ರಕ್ಷಿಸಿದ ತರಬೇತುದಾರನ ದುರಂತ ಸಾವು!

Hormuz ಜಲಸಂಧಿ ಬಿಕ್ಕಟ್ಟು ಶೀಘ್ರದಲ್ಲೇ ಅಂತ್ಯ: ಅಂತಿಮ ಘಟ್ಟದಲ್ಲಿ ಅಮೆರಿಕ–ಇರಾನ್ ಶಾಂತಿ ಒಪ್ಪಂದ, ಇಂದೇ ಅಧಿಕೃತ ಘೋಷಣೆ ಸಾಧ್ಯತೆ..!

'ಸಾವು ಉತ್ತಮ': ಉದಯನಿಧಿ ಸ್ಟಾಲಿನ್ ಬಂಧನ ಬೆನ್ನಲ್ಲೇ ನಟಿ nivetha pethuraj ಪೋಸ್ಟ್ ವೈರಲ್!