ಯೆಮನ್ ಗೆ ತೆರಳುತ್ತಿರುವ ಭಾರತೀಯ ಯುದ್ಧ ನೌಕೆ 
ಪ್ರಧಾನ ಸುದ್ದಿ

ಯೆಮನ್ ನಲ್ಲಿ ಭಾರತೀಯರನ್ನು ರಕ್ಷಿಸಲು ನೌಕಾದಳದ ಯುದ್ಧ ಹಡಗುಗಳು

ಯೆಮನ್ ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ರಕ್ಷಿಸಲು ಭಾರತೀಯ ನೌಕಾದಳದ ಯುದ್ಧ ಹಡಗುಗಳು ಹೊರಟಿವೆ ಎಂದು ನೌಕಾದಳದ ಮುಖಂಡ

ನವದೆಹಲಿ: ಯೆಮನ್ ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ರಕ್ಷಿಸಲು ಭಾರತೀಯ ನೌಕಾದಳದ ಯುದ್ಧ ಹಡಗುಗಳು ಹೊರಟಿವೆ ಎಂದು ನೌಕಾದಳದ ಮುಖಂಡ ಪಿ ಮುರುಗೇಶನ್ ತಿಳಿಸಿದ್ದಾರೆ.

"ರಕ್ಷಣೆ ಕಾರ್ಯಾಚರಣೆ ವೈಮಾನಿಕ ಹಾಗೂ ಸಮುದ್ರರ ಮೂಲಕ ಒಟ್ಟಿಗೆ ನಡೆಯಲಿದೆ. ಇದಕ್ಕೆ ಭಾರತೀಯ ನೌಕಾದಳ, ಐ ಎ ಎಫ್ ಮತ್ತು ಏರ್ ಇಂಡಿಯಾ ಸಹಕರಿಸಲಿದ್ದಾರೆ" ಎಂದು ಮುರುಗೇಶನ್ ತಿಳಿಸಿದ್ದಾರೆ.

ಅಂತರ ಸಚಿವರ ಸಭೆಯಲ್ಲಿ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು ಇದರ ಅಧ್ಯಕ್ಷತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಹಿಸಿದ್ದರು ಎಂದು ಅವರು ಸೋಮವಾರ ತಿಳಿಸಿದ್ದಾರೆ.

ಮೂರು ನೌಕಾದಳದ ಯುದ್ಧ ಹಡಗುಗಳು ಹಾಗೂ ಎರಡು ಪ್ರಯಾಣಿಕ ಹಡಗುಗಳನ್ನು ಕಳುಹಿಸಲಾಗುವುದು. ಭಾರತೀಯ ವಾಯುಸೇನೆ ಎರಡು ವಿಮಾನಗಳನ್ನು ಕಳುಹಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸಯ್ಯದ್ ಅಕ್ಬರುದ್ದೀನ್ ಯೋಜನೆಯ ವಿವರಗಳನ್ನು ತಿಳಿಸಿದ್ದಾರೆ.

ವಿದೇಶಾಂಗ ಸಚಿವಾಲಯದ ರಾಜ್ಯ ಮಂತ್ರಿ ಜನರಲ್ ವಿ ಕೆ ಸಿಂಗ್ ಇಂದು ಸಂಜೆ ಜಿಬೌಟಿಗೆ ತೆರಳಲಿದ್ದು ರಕ್ಷಣಾ ಕಾರ್ಯಾಚರಣೆಯ ಮುಂದಾಳತ್ವ ವಹಿಸಲಿದ್ದಾರೆ. ಈಗಾಗಲೇ ಓಮನ್ ನಲ್ಲಿ ಏರ ಇಂಡಿಯಾ ಎರಡು ವಿಮಾನಗಳನ್ನು ಇಳಿಸಿದೆ.

ಯೆಮನ್ ನಲ್ಲಿ ಸುಮಾರು ೪೦೦೦ ಭಾರತೀಯರು ಸಿಲುಕಿದ್ದು ಅದರಲ್ಲಿ ಸುಮಾರು ಅರ್ಧದಷ್ಟು ಜನ ನರ್ಸ್ ಗಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT