ಡಿಕೆ ರವಿ ಮತ್ತು ಹನುಮಂತರಾಯಪ್ಪ 
ಪ್ರಧಾನ ಸುದ್ದಿ

ಡಿಕೆ ರವಿ ಸಾವು ಪ್ರಕರಣ: ಮಾವ ಹನುಮಂತರಾಯಪ್ಪ ವಿರುದ್ಧ ದೂರು ದಾಖಲು

ಒಂದು ಕಡೆ ಐಎಎಸ್ ಅಧಿಕಾರಿ ಡಿಕೆ ರವಿ ನಿಗೂಢ ಸಾವಿನ ಪ್ರಕರಣ ತನಿಖೆ ಹಂತದಲ್ಲಿದ್ದರೇ, ಮತ್ತೊಂದು ಕಡೆ ರವಿ ಅವರ ಮಾವ ಹನುಮಂತರಾಯಪ್ಪ ಅವರ ವಿರುದ್ಧ...

ಬೆಂಗಳೂರು: ಒಂದು ಕಡೆ ಐಎಎಸ್ ಅಧಿಕಾರಿ ಡಿಕೆ ರವಿ ನಿಗೂಢ ಸಾವಿನ ಪ್ರಕರಣ ತನಿಖೆ ಹಂತದಲ್ಲಿದ್ದರೇ, ಮತ್ತೊಂದು ಕಡೆ ರವಿ ಅವರ ಮಾವ ಹನುಮಂತರಾಯಪ್ಪ ಅವರ ವಿರುದ್ಧ ಎನ್ ಜಿಒ ದೂರು ದಾಖಲಿಸಿದೆ.

ಸಾಕ್ಷ್ಯಾಧಾರಗಳನ್ನು ಹನುಮಂತರಾಯಪ್ಪ ನಾಶ ಪಡೆಸಿರುವ ಸಾಧ್ಯತೆಗಳಿದ್ದು ಅವರನ್ನು ತನಿಖೆಗೊಳಪಡಿಸಿ ಎಂದು ವಿಶ್ವ ಕನ್ನಡ ಸಮಾಜ ಸರ್ಕಾರೇತರ ಸಂಸ್ಥೆ ಬೆಂಗಳೂರು ಪೊಲೀಸರಲ್ಲಿ ಪ್ರಕರಣ ದಾಖಲಿಸಿದೆ.

ಸಿಐಡಿ ಪೊಲೀಸರು ಸಿಸಿಟಿವಿಯಲ್ಲಿರುವ ಕೆಲವು ದೃಶ್ಯಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಹನುಮಂತರಾಯಪ್ಪ ಅವರ ಈ ಹೇಳಿಕೆ ಅನೇಕ ಅನುಮಾನಗಳನ್ನು ಹುಟ್ಟಿಸಿದೆ. ಅವರ ಹೇಳಿಕೆಯಲ್ಲಿ ಅನೇಕ ಗೊಂದಲಗಳಿವೆ. ಅವರು ಸಾಕ್ಷಿಗಳನ್ನು ನಾಶಪಡಿಸಲು ಯತ್ನಿಸಿರುವ ಸಾಧ್ಯತೆಗಳಿವೆ ಎಂದು ಎನ್ ಜಿಒ ಅಭಿಪ್ರಾಯಪಟ್ಟಿದೆ. 

ಸಿಐಡಿ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತನಿಖಾ ಏಜೆನ್ಸಿಗೆ ಹೇಳದೇ  ಹನುಮಂತರಾಯಪ್ಪ ಮುಚ್ಚಿಟ್ಟಿದ್ದರು, ಈ ಸಂಬಂಧ ಅವರು ಯಾವುದೇ ವರದಿ ನೀಡಿಲ್ಲ.

ರವಿ ಮನೆಯ ಸಿಸಿಟಿವಿ ದೃಶ್ಯಗಳು ಡಿಲೀಟ್ ಆಗಿವೆ ಎಂದು ಹೇಳುವ ಹನುಮಂತರಾಯಪ್ಪ ತಕ್ಷಣವೇ ಸಂಬಂಧ ಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ಏಕೆ ದಾಖಲಿಸಿಲ್ಲ, ಇಡೀ ರಾಜ್ಯದ ಜನತೇ ರವಿ ಸಾವಿನ ಕುರಿತು ಮುಕ್ತ ತನಿಖೆಯಾಗಬೇಕು ಎಂದು ಹೇಳುತ್ತಿದ್ದರೆ, ಹನುಮಂತರಾಯಪ್ಪ ಈ ವಿಷಯವನ್ನು ಬಾಯ್ಬಿಬಿಡದೇ, ಸುಮ್ಮನ್ನೇ ಇದ್ದು, ಕೆಲವು ದಿನಗಳ ನಂತರ ಈ ರೀತಿ ಪೊಲೀಸರ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಹನುಮಂತರಾಯಪ್ಪ ಅವರ ಈ ನಡೆ ಅನುಮಾನ ಮೂಡಿಸಿದೆ ಎಂದು ಸಂಸ್ಥೆ ಆರೋಪಿಸಿದೆ


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT