ಸಲ್ಮಾನ್ ಖಾನ್ ಮತ್ತು ತಂಗಿ ಅರ್ಪಿತಾ ಖಾನ್ 
ಪ್ರಧಾನ ಸುದ್ದಿ

ಉಳಿದಿದ್ದನ್ನು ದೇವರಿಗೆ ಬಿಡುತ್ತೇವೆ: ಸಲ್ಮಾನ್ ತಂಗಿ ಅರ್ಪಿತಾ

ಕುಟುಂಬದ ಕಷ್ಟದ ಸಮಯದಲ್ಲಿ ತಮ್ಮ ಜೊತೆಗಿದ್ದ ಎಲ್ಲ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಧನ್ಯವಾದ ಹೇಳಿರುವ ಅರ್ಪಿತಾ ಖಾನ್,

ಮುಂಬೈ: ಕುಟುಂಬದ ಕಷ್ಟದ ಸಮಯದಲ್ಲಿ ತಮ್ಮ ಜೊತೆಗಿದ್ದ ಎಲ್ಲ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಧನ್ಯವಾದ ಹೇಳಿರುವ ಅರ್ಪಿತಾ ಖಾನ್, ಇನ್ನುಳಿದಿದ್ದನ್ನು ದೇವರಿಗೆ ಬಿಡಲಿದ್ದೇವೆ ಎಂದಿದ್ದಾರೆ.

೨೦೦೨ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಹೇಳಿ ಸಲ್ಮಾನ್ ಖಾನ್ (೪೯) ಅವರಿಗೆ ಬಾಂಬೆ ಸೆಷನ್ ಕೋರ್ಟ್ ೫ ವರ್ಷಗಳ ಕಠಿಣ ಸಜೆ ನೀಡಿತ್ತು. ಆದರೆ ಬಾಂಬೆ ಹೈಕೋರ್ಟ್ ಸಲ್ಮಾನ್ ಖಾನ್ ಅವರಿಗೆ ಮುಂದಿನ ವಿಚಾರಣೆ ಮೇ ೮ ರಂದು ನಡೆಯುವುದರಿಂದ ಅಂದೇ ಎರಡು ದಿನಗಳ ಮಧ್ಯಂತರ ಜಾಮೀನು ನೀಡಿತ್ತು.

"ಇಂದು ಜೀವನದ ಏರು ಪೇರು- ಏಳು ಬೀಳುಗಳಿಂದ ತುಂಬಿದ ದಿನ. ಉಳಿದಿದ್ದನ್ನು ದೇವರಿಗೆ ಬಿಟ್ಟು ಪ್ರಾರ್ಥನೆ ಸಲ್ಲಿಸುತ್ತೇವೆ. ನಮ್ಮ ಜೊತೆ ಇದ್ದುದ್ದಕ್ಕೆ ಧನ್ಯವಾದಗಳು!" ಎಂದು ಅರ್ಪಿತಾ ಕಳೆದ ರಾತ್ರಿ ಟ್ವೀಟ್ ಮಾಡಿದ್ದಾರೆ.

ದಭಾಂಗ್ ಸ್ಟಾರ್ ನ ಇಬ್ಬರು ಸಹೋದರರು, ಸಹೋದರಿಯರು ಹಾಗು ಪೋಷಕರು ತೀರ್ಪು ನೀಡುವಾಗ ಜೊತೆಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT