ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಇರಾಕ್ ಜೈಲು ಪರಾರಿ ಯತ್ನ; ೩೬ ಜನ ಸಾವು; ೪೦ ಖೈದಿಗಳು ಪರಾರಿ

ಪೂರ್ವ ಇರಾಕಿನ ಜೈಲೊಂದರಿಂದ, ಭಯೋತ್ಪಾದನಾ ಆರೋಪವನ್ನು ಎದುರಿಸುತ್ತಿರುವವರು ಸೇರಿದಂತೆ ೪೦ ಜನ ಖೈದಿಗಳು ಗಲಭೆಯ ನಡುವೆ

ಬಾಗ್ದಾದ್: ಪೂರ್ವ ಇರಾಕಿನ ಜೈಲೊಂದರಿಂದ, ಭಯೋತ್ಪಾದನಾ ಆರೋಪವನ್ನು ಎದುರಿಸುತ್ತಿರುವವರು ಸೇರಿದಂತೆ ೪೦ ಜನ ಖೈದಿಗಳು ಗಲಭೆಯ ನಡುವೆ ಪರಾರಿಯಾಗಿದ್ದಾರೆ. ಈ ಗಲಭೆಯಲ್ಲಿ ಕನಿಷ್ಠ ೬ ಪೊಲೀಸ್ ಅಧಿಕಾರಿಗಳು ಹಾಗೂ ೩೦ ಜನ ಖೈದಿಗಳು ಮೃತಪಟ್ಟಿದ್ದಾರೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

ದಿಯಾ ಪ್ರಾಂತ್ಯದ ಖಾಲಿಸ್ ಜೈಲಿನಲ್ಲಿ ನಡೆದ ಈ ಜೈಲು ಪರಾರಿ ಘಟನೆಯ ಬಗ್ಗೆ ಭಿನ್ನ ವರದಿಗಳು ಲಭ್ಯವಾಗಿದೆ. ಮತ್ತೊಂದು ವರದಿಯ ಪ್ರಕಾರ ೧೨ ಜನ ಪೊಲೀಸರು ಮತ್ತು  ೫೧ ಜನ ಖೈದಿಗಳು ಮೃತಪಟ್ಟಿದ್ದು ಸುಮಾರು ೨೦೦ ಖೈದಿಗಳು ಪರಾರಿಯಾಗಿದ್ದಾರೆ. ಇದನ್ನು ಹೆಸರು ಹೇಳಲಿಚ್ಚಿಸದ ಪೋಲಿಸ್ ಅಧಿಕಾರಿಗಳು ಧೃಢಪಡಿಸಿದ್ದಾರೆ.

ಬೆಳಗ್ಗೆ ಜೈಲು ಅಧಿಕಾರಿಗಳೊಂದಿಗೆ ಖೈದಿಗಳು ನಡೆಸಿದ ಜಗಳ ವಿಕೋಪಕ್ಕೆ ತಿರುಗಿ, ಪೋಲೀಸರ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡಿದ್ದರಿಂದ ಗಲಭೆ ಉಂಟಾಯಿತು ಎಂದು ಸಚಿವ ಬ್ರಿಗೇಡಿಯರ್ ಜನರಲ್ ಸಾದ್ ಮಾನ್ ಇಬ್ರಾಹಿಮ್ ತಿಳಿಸಿದ್ದಾರೆ. ಬಾಗ್ದಾದಿನಿಂದ ೮೦ ಕಿಮೀ ದೂರದಲ್ಲಿರುವ ಈ ಜೈಲಿನಲ್ಲಿ ನೂರಾರು ಖೈದಿಗಳಿದ್ದರು ಎನ್ನಲಾಗಿದೆ.

 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT