ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ದಶಕಗಳ ಹಳೆಯ ಭೂವಿವಾದ; ಮೂವರು ದಲಿತರನ್ನು ಬರ್ಬರವಾಗಿ ಕೊಲೆ ಮಾಡಿದ ಜಾಟ್ ಗಳು

ನಾಗಪುರ ಜಿಲ್ಲೆಯ ದಂಗವಾಸ್ ನ ಪ್ರಬಲ ಮೇಲ್ಜಾತಿ ಸಮುದಾಯದ ಜಾಟ್ ಗಳು ಮೂವರು ದಲಿತರ ಮೇಲೆ ಟ್ರಾಕ್ಟರ್ ಓಡಿಸಿ ಕೊಂದು ಹಲವರನ್ನು ಗಾಯಗೊಳಿಸಿರುವ

ಜೈಪುರ: ನಾಗಪುರ ಜಿಲ್ಲೆಯ ದಂಗವಾಸ್ ನ ಪ್ರಬಲ ಮೇಲ್ಜಾತಿ ಸಮುದಾಯದ ಜಾಟ್ ಗಳು ಮೂವರು ದಲಿತರ ಮೇಲೆ ಟ್ರಾಕ್ಟರ್ ಓಡಿಸಿ ಕೊಂದು ಹಲವರನ್ನು ಗಾಯಗೊಳಿಸಿರುವ ಘಟನೆ ನಡೆದಿದೆ. ಈ ಗಲಭೆ ಹಳೆಯ ಭೂವಿವಾದಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗಿದೆ. ೨೦ ಹೆಕ್ಟೇರ್ ಭೂಮಿಯ ಒಡೆತನದ ಬಗ್ಗೆ ದಲಿತರಿಗೂ ಹಾಗು ಚಿನ್ಮರಣ್ ಜಾಟ್ ನಡುವೆ ವಿವಾದವಿತ್ತು ಎನ್ನಲಾಗಿದೆ.

"ದಾಳಿ ಮಾಡಿದ ೨೦೦ ಜನರಲ್ಲಿ ೧೩ ಜರನ್ನು ಗುರುತಿಸಿದ್ದೇವೆ, ಆದರೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ" ಎಂದು ಗಾಯಗೊಂಡ ವ್ಯಕ್ತಿಯೊಬ್ಬನ ಸಹೋದರ ಕಿಶನ್ ಮೇಘ್ವಾಲ್ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ತಿಳಿಸಿದ್ದಾನೆ. "ದಶಕಗಳಿಂದ ಜಾಟ್ ಸಮುದಾಯದ ಕ್ರೌರ್ಯ ಮತ್ತು ದೌರ್ಜನ್ಯಗಳಿಂದ ನೊಂದಿದ್ದೇವೆ" ಎಂದು ಕೂಡ ಅವರು ತಿಳಿಸಿದ್ದಾರೆ.

ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡುಹೋದಾಗ ದಾಳಿಕೋರರು ಆಸ್ಪತ್ರೆಗೆ ಅಡ್ಡಗಟ್ಟಿ ವೈದ್ಯರು ಅವರಿಗೆ ಚಿಕಿತ್ಸೆ ನೀಡದಂತೆ ತಡೆದಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ. ಇದರಿಂದ ಭಯಭೀತರಗಿರುವ ನೂರಾರು ದಲಿತರು ಜೀವ ಉಳಿಸಿಕೊಳ್ಳಲು ಆ ಪ್ರದೇಶದಿಂದ ಓಡಿಹೋಗಿದ್ದಾರೆ ಎಂದು ಕೂಡ ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT