ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಪಾಕಿಸ್ತಾನದಲ್ಲಿ ೨ ಬಸ್ ಅಪಹರಣ; 19 ಪ್ರಯಾಣಿಕರ ಹತ್ಯೆ

ಬಂಧೂಕುದಾರಿಗಳು ಪಾಕಿಸ್ತಾನದಲ್ಲಿ ೨ ಬಸ್ಸುಗಳನ್ನು ಅಪಹರಿಸಿ ೧೯ ಪ್ರಯಾಣಿಕರನ್ನು ಕೊಂದಿರುವ ಹಿನ್ನಲೆಯಲ್ಲಿ ತಪ್ಪಿಸಿಕೊಂಡಿರುವ ಅಪಹರಣಕಾರರನ್ನು...

ಕ್ವೆಟ್ಟ: ಬಂಧೂಕುದಾರಿಗಳು ಪಾಕಿಸ್ತಾನದಲ್ಲಿ ೨ ಬಸ್ಸುಗಳನ್ನು ಅಪಹರಿಸಿ ೧೯ ಪ್ರಯಾಣಿಕರನ್ನು ಕೊಂದಿರುವ ಹಿನ್ನಲೆಯಲ್ಲಿ ತಪ್ಪಿಸಿಕೊಂಡಿರುವ ಅಪಹರಣಕಾರರನ್ನು ಹಿಡಿಯಲು ಪಾಕಿಸ್ತಾನಿ ಭದ್ರತಾ ಪಡೆ ಬೃಹತ್ ಶೋಧ ಕಾರ್ಯಾಚರಣೆಯನ್ನು ನಡೆಸಿದೆ.

ಬಂಧೂಕುದಾರಿಗಳು ಶುಕ್ರವಾರ ೨೫ ಪ್ರಯಾಣಿಕರನ್ನು ಅಪಹರಿಸಿ ಅವರಲ್ಲಿ ೧೯ ಜನರನ್ನು ಕೊಂದುಹಾಕಿದ್ದಾರೆ ಎಂದು ಬಲೂಚಿಸ್ಥಾನದ ಗೃಹಸಚಿವ ಸರ್ಫರಾಜ್ ಬಗ್ಟಿ ತಿಳಿಸಿದ್ದಾರೆ.

ಶನಿವಾರ ಆರು ಪ್ರಯಾಣಿಕರನ್ನು ಅಧಿಕಾರಿಗಳು ರಕ್ಷಿಸಿದ್ದು ಅವರಲ್ಲಿ ಒಬ್ಬರು ತೀವ್ರ ಗಾಯಗೊಂಡಿದ್ದರೆ ಎಂದು ಕೂಡ ಅವರು ತಿಳಿಸಿದ್ದಾರೆ,

ಬಲೂಚಿಸ್ಥಾನಕ್ಕೆ ಹೆಚ್ಚಿನ ಸ್ವಾಯತ್ತತೆಗಾಗಿ ಮತ್ತು ಆ ಪ್ರಾಂತ್ಯದ ಅನಿಲ ಮತ್ತು ಖನಿಜ ಸಂಪತ್ತಿನ ಹೆಚ್ಚಿನ ಹಂಚಿಕೆಗಾಗಿ ಅಲ್ಲಿನ ಪ್ರತ್ಯೇಕವಾದಿಗಳು, ರಾಷ್ಟ್ರೀಯವಾದಿಗಳು ಮತ್ತಿತರ ಗುಂಪುಗಳು ಆಗಾಗ ದಂಗೆಯೇಳುತ್ತಿರುತ್ತಾರೆ.

ಅಪಹರಿದ ಬಂದೂಕುಧಾರಿಗಳು ಸುಮಾರು ೫೦ ಜನರನ್ನು ಬಿಟ್ಟಿದ್ದಾರೆ. ೨೫ ಜನರನ್ನು ಕೊಂಡೊಯ್ಯುವಾಗ, ಭದ್ರತಾ ಪಡೆಗಳು ಅವರನ್ನು ಸುತ್ತುವರೆದಾಗ ಅಪಹರಣಕಾರರು ೧೯ ಜನರನ್ನು ಕೊಂದಿದ್ದಾರೆ ಹಾಗು ಭದ್ರತಾ ಪಡೆಗಳು ೬ ಜನರನ್ನು ರಕ್ಷಿಸಿದೆ ಎಂದು ಸರ್ಫರಾಜ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT