ಪ್ರಧಾನ ಸುದ್ದಿ

ದಾವೂದ್‌ನೊಂದಿಗೆ ಕೈಜೋಡಿಸಿದ್ದ ಮುಂಬೈ ಪೊಲೀಸ್ ಅಧಿಕಾರಿಗಳ ಹೆಸರು ಬಹಿರಂಗಪಡಿಸಿದ ಛೋಟಾ ರಾಜನ್

Lingaraj Badiger

ನವದೆಹಲಿ: ಬಂಧಿತ ಭೂಗತ ಪಾತಕಿ ಛೋಟಾ ರಾಜನ್ ವಿಚಾರಣೆ ವೇಳೆ ಮತ್ತೊಬ್ಬ ಭೂಗತ ಪಾತಕಿ ದಾವೂದ್ ಇಬ್ರಾಹಿಂನೊಂದಿಗೆ ಕೈಜೋಡಿಸಿದ್ದ ಮುಂಬೈ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಬಹರಂಗಪಡಿಸಿದ್ದಾನೆ ಎನ್ನಲಾಗಿದೆ.

ಛೋಟಾ ರಾಜನ್ ಈ ಮುಂಚೆಯೂ, ಕೆಲವು ಮುಂಬೈ ಪೊಲೀಸ್ ಅಧಿಕಾರಿಗಳು ಹಣಕ್ಕಾಗಿ ಮೋಸ್ಟ್ ವಾಂಟೆಡ್ ಉಗ್ರ ದಾವೂದ್‌ನೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ.

'ಮುಂಬೈ ಪೊಲೀಸರು ನನ್ನ ಮೇಲೆ ಸಾಕಷ್ಟು ದೌರ್ಜನ್ಯ ಎಸಗಿದ್ದಾರೆ. ಹೀಗಾಗಿ ನಾನು ಅವರನ್ನು ನಂಬುವುದಿಲ್ಲ. ಕೆಲವು ಮುಂಬೈ ಪೊಲೀಸ್ ಅಧಿಕಾರಿಗಳು ದಾವೂದ್‌ಗೆ ಸಹಕರಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟುಕೊಂಡು ದೆಹಲಿ ಸರ್ಕಾರ ನನಗೆ ನ್ಯಾಯ ದೊರಕಿಸಿಕೊಡಬೇಕು' ಎಂದು ಛೋಟಾ ರಾಜನ್ ಮಾಧ್ಯಮಕ್ಕೆ ಹೇಳಿಕೊಂಡಿದ್ದಾರೆ.

ನನಗೆ ದಾವೂದ್ ಇಬ್ರಾಹಿಂ ಭಯ ಇಲ್ಲ ಮತ್ತು ಆ ಭೂಗತ ಪಾತಕಿಯ ವಿರುದ್ಧ ಹಾಗೂ ಭಯೋತ್ಪಾದನೆ ವಿರುದ್ಧ ನನ್ನ ಹೋರಾಟವನ್ನು ಮುಂದುವರೆಸುತ್ತೇನೆ ಎಂದಿದ್ದಾನೆ.

ಇದೇ ವೇಳೆ, ತನ್ನ ವಿರುದ್ಧದ ಎಲ್ಲಾ ಕೇಸ್‌ಗಳು ಆಧಾರ ರಹಿತ ಎಂದಿರುವ ಭೂಗತ ಪಾತಕಿ, ನನಗೆ ನ್ಯಾಯ ದೊರಕಿಸಬೇಕು ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾನೆ.

SCROLL FOR NEXT