ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರಿ ವಿವಾದವನ್ನು 'ನೋಟು ಮತ್ತು ನಾಣ್ಯ'ಗಳಲ್ಲಿ ಅಳೆದಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಒಮರ್ ಅಬ್ದುಲ್ಲ ಶನಿವಾರ ವ್ಯಂಗ್ಯವಾಡಿದ್ದಾರೆ.
ಮೋದಿ ಜಮ್ಮು ಕಾಶ್ಮೀರಕ್ಕೆ ೮೦೦೦೦ ಕೋಟಿ ರೂ ವಿಶೇಷ ಅನುದಾನ ಘೋಷಿಸಿದ ನಂತರ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹೀಗೆ ಟ್ವೀಟ್ ಮಾಡಿದ್ದಾರೆ.
"ಕಾಶ್ಮೀರ ವಿವಾದವನ್ನು 'ನೋಟು ಮತ್ತು ನಾಣ್ಯ'ಗಳಲ್ಲಿ ಅಳೆಯುವ ಮೂಲಕ ಮೋದಿ ಮತ್ತದೇ ತಪ್ಪು ಮಾಡಿದ್ದಾರೆ ಎಂದು ಅಬ್ದುಲ್ಲ ಟ್ವೀಟ್ ಮಾಡಿದ್ದಾರೆ.