ನಿಂಬಾಳ ಗ್ರಾಮದಲ್ಲಿ ಮದ್ಯ ನಿಷೇಧ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಮಹಿಳೆಯರ ಹೋರಾಟಕ್ಕೆ ಮಣಿದು ಮದ್ಯ ಮುಕ್ತವಾಯ್ತು ನಿಂಬಾಳ ಗ್ರಾಮ

ದೇಶದ ವಿವಿಧ ರಾಜ್ಯಗಳ ಸರ್ಕಾರಗಳು ಮದ್ಯ ನಿಷೇಧಕ್ಕೆ ಚಿಂತನೆ ನಡೆಸುತ್ತಿದೆಯಾದರೂ, ಅದೇಕೊ ಆಚರಣೆಗೆ ಮಾತ್ರ ಬರುತ್ತಿಲ್ಲ. ಆದರೆ ನಮ್ಮ ಕರ್ನಾಟಕದ ಪುಟ್ಟ ಗ್ರಾಮವೊಂದು ಕಳೆದ 2 ವರ್ಷದಿಂದ ಮದ್ಯ ಮುಕ್ತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ...

ಗುಲ್ಬರ್ಗಾ: ದೇಶದ ವಿವಿಧ ರಾಜ್ಯಗಳ ಸರ್ಕಾರಗಳು ಮದ್ಯ ನಿಷೇಧಕ್ಕೆ ಚಿಂತನೆ ನಡೆಸುತ್ತಿದೆಯಾದರೂ, ಅದೇಕೊ ಆಚರಣೆಗೆ ಮಾತ್ರ ಬರುತ್ತಿಲ್ಲ. ಆದರೆ ನಮ್ಮ ಕರ್ನಾಟಕದ ಪುಟ್ಟ  ಗ್ರಾಮವೊಂದು ಕಳೆದ 2 ವರ್ಷದಿಂದ ಮದ್ಯ ಮುಕ್ತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹೌದು.. ತೀವ್ರ ಹಿಂದುಳಿದ ಗುಲ್ಬರ್ಗಾ ಜಿಲ್ಲೆಯ ಗ್ರಾಮವೊಂದು ಇದೀಗ ಇಡೀ ದೇಶಕ್ಕೆ ಮಾದರಿಯಾಗಿ ನಿಂತಿದೆ. ಈಗ್ಗೆ ಕೇವಲ 2 ವರ್ಷಗಳ ಹಿಂದಷ್ಟೇ ಕುಡುಕರ ತವರಾಗಿದ್ದ ನಿಂಬಾಳ ಗ್ರಾಮ  ಇದೀಗ ಮದ್ಯಮುಕ್ತ ಗ್ರಾಮವಾಗಿದೆ. ಆ ಮೂಲಕ ಇಡೀ ದೇಶಕ್ಕೆ ಮಾದರಿ ಗ್ರಾಮವಾಗಿದೆ. ಇದಕ್ಕೆಲ್ಲಾ ಕಾರಣ ಆ ಗ್ರಾಮದ ಮಹಿಳಾ ಮಣಿಗಳ ಧೈರ್ಯ ಮತ್ತು ದಿಟ್ಟ ಹೋರಾಟ. ಕುಡಿತಕ್ಕೆ  ದಾಸರಾಗಿದ್ದ ಆಗ್ರಾಮದ ಪುರುಷರು ನಿತ್ಯ ತಮ್ಮ ಮನೆಯ ಮಹಿಳೆಯರಿಗೆ ಕಾಟ ನೀಡುತ್ತಿದ್ದರು. ಆ ಹಿಂಸೆಯನ್ನು ತಾಳಲಾರದೆ ಸಿಡಿದೆದ್ದ ಮಹಿಳೆಯರು ಮದ್ಯಪಾನದ ವಿರುದ್ಧ ಹೋರಾಟ  ಮಾಡಿ ಅಂತಿಮವಾಗಿ ಗ್ರಾಮದಲ್ಲಿ ಮದ್ಯ ನಿಷೇಧಿಸುವಲ್ಲಿ ಯಶಸ್ವಿ ಕೂಡ ಆಗಿದ್ದಾರೆ.

ಗ್ರಾಮದಲ್ಲಿದ್ದ ಒಟ್ಟು ನಾಲ್ಕು ಮದ್ಯದಂಗಡಿಗಳನ್ನು ಮಹಿಳೆಯರು ತಮ್ಮ ಹೋರಾಟದ ಮೂಲಕ ಬಾಗಿಲು ಹಾಕಿಸಿದ್ದಾರೆ. ಇದೀಗ ಆ ಅಂಗಡಿಗಳ ಮಾಲೀಕರು ಬೇರೆ ವ್ಯಾಪರದಲ್ಲಿ ತೊಡಗಿದ್ದು,  ನಿಂಬಾಳ ಗ್ರಾಮದಲ್ಲಿ ಮದ್ಯಪಾನ ಸಂಪೂರ್ಣ ನಿಷೇಧವಾಗಿದೆ.

ಮದ್ಯಪಾನ ನಿಷೇಧಿಸುವಂತೆ ಗ್ರಾಮದ 51 ಮಹಿಳೆಯರ ಗುಂಪು ಹುಟ್ಟುಹಾಕಿದ ಈ ಹೋರಾಟಕ್ಕೆ ಗ್ರಾಮದ ಮುಖ್ಯಸ್ಥರು ಕೂಡ ಸಾಥ್ ನೀಡಿದ ಹಿನ್ನಲೆಯಲ್ಲಿ ಇಂದು ನಿಂಬಾಳ ಗ್ರಾಮ  ಮದ್ಯಮುಕ್ತ ಗ್ರಾಮವಾಗಿದೆ. ಗ್ರಾಮದ ಮುಖಂಡರೇ ಹೇಳುವಂತೆ ನಿಂಬಾಳ ಗ್ರಾಮದಲ್ಲಿ ಪುರುಷರು ಪ್ರತಿನಿತ್ಯ ಸುಮಾರು 35 ಸಾವಿರದಿಂದ 40 ಸಾವಿರ ರು. ಮದ್ಯಪಾನಕ್ಕೆ ಖರ್ಚು  ಮಾಡುತ್ತಿದ್ದರು. ಆದರೆ ಗ್ರಾಮದಲ್ಲಿ ಜಾರಿಗೆ ತಂದ ಮದ್ಯಪಾನ ನಿಷೇಧ ಕಾನೂನಿಂದಾಗಿ ಇಂದು ವಾರ್ಷಿಕ ಸುಮಾರು 1 ಕೋಟಿಯಿಂದ ಒಂದೂವರೆ ಕೋಟಿ ರು.ಹಣ ಉಳಿಯುತ್ತಿದೆ ಎಂದು  ಗ್ರಾಮದ ಮುಖಂಡರು ಹೇಳಿದ್ದಾರೆ.

ಇದರ ಫಲವಾಗಿ ಕಳೆದ 2 ವರ್ಷಗಳಿಂದ ನಿಂಬಾಳ ಗ್ರಾಮದಲ್ಲಿ ಮದ್ಯಪಾನ ನಿಷೇಧವಾಗಿದ್ದು, ಒಂದು ವೇಳೆ ಗ್ರಾಮಕ್ಕೆ ಯಾರಾದರೂ ಕುಡಿದು ಬಂದರೆ ಅವರಿಗೆ 1100 ರು. ದಂಡ  ವಿಧಿಸಲಾಗುತ್ತಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT