ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮೂದ್ ಕಸೂರಿ 
ಪ್ರಧಾನ ಸುದ್ದಿ

ಜಿನ್ನಾ ಮನೆಯಲ್ಲಿ ಪಾಕಿಸ್ತಾನಿ ರಾಯಭಾರಿ ಕಚೇರಿ ತೆರೆಯಲು ಕಸೂರಿ ಮನವಿ

ಜಿನ್ನಾ ವಾಸವಾಗಿದ್ದ ಮುಂಬೈ ಮನೆಯಲ್ಲಿ ಪಾಕಿಸ್ತಾನಿ ರಾಯಭಾರಿ ಕಚೇರಿಯನ್ನು ಪ್ರಾರಂಭಿಸಲು ಒತ್ತಡವನ್ನು ಮುಂದುವರೆಸುವುದಾಗಿ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ

ಮುಂಬೈ: ಜಿನ್ನಾ ವಾಸವಾಗಿದ್ದ ಮುಂಬೈ ಮನೆಯಲ್ಲಿ ಪಾಕಿಸ್ತಾನಿ ರಾಯಭಾರಿ ಕಚೇರಿಯನ್ನು ಪ್ರಾರಂಭಿಸಲು ಒತ್ತಡವನ್ನು ಮುಂದುವರೆಸುವುದಾಗಿ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮೂದ್ ಕಸೂರಿ ಹೇಳಿದ್ದಾರೆ.

ಪಾಕಿಸ್ತಾನದ ಕರಾಚಿಯಲ್ಲೂ ಭಾರತದ ರಾಯಭಾರಿ ಕಚೇರಿಯನ್ನು ಮತ್ತೆ ತೆರೆಯಲು ಬೆಂಬಲಿಸುವುದಾಗಿ ಹೇಳಿದ್ದಾರೆ.

"ನಾನು ವಿದೇಶಾಂಗ ಸಚಿವನಾಗಿದ್ದ ಸಮಯದಲ್ಲಿ (೨೦೦೨-೦೭) ಜಿನ್ನಾ ಮನೆಯಲ್ಲಿ ಪಾಕಿಸ್ತಾನ ರಾಯಭಾರ ಕಚೇರಿ ತೆರೆಯಲು ಪ್ರತ್ನಿಸಿದ್ದೆ, ಈ ಗುರಿ ಮುಟ್ಟಲು ಪ್ರಯತ್ನವನ್ನು ಮುಂದುವರೆಸುತ್ತೇನೆ.

"ಹಾಗೆಯೇ ಕರಾಚಿಯಲ್ಲಿ ಭಾರತೀಯ ಕಚೇರಿಯನ್ನು ಮತ್ತೆ ತೆರೆಯಬೇಕು" ಎಂದು ಪಾಕಿಸ್ತಾನದ ಜನಕ ಮೊಹಮ್ಮದ್ ಅಲಿ ಜಿನ್ನಾ ವಾಸವಾಗಿದ್ದ ಮಲಬಾರ್ ಬೆಟ್ಟದ ಮನೆಗೆ ಭೇಟಿ ಕೊಟ್ಟ ವೇಳೆಯಲ್ಲಿ ತಿಳಿಸಿದ್ದಾರೆ.

೧೯೫೫ ರಲ್ಲಿ ಕರಾಚಿಯ ಭಾರತೀಯ ರಾಯಭಾರಿ ಕಚೇರಿಯನ್ನು ಪಾಕಿಸ್ತಾನ ಸರ್ಕಾರ ಮುಚ್ಚಿತ್ತು.

"ನಾನು ಇಲ್ಲಿಗೆ ಶಾಂತಿಯ ಸಂದೇಶಕನಾಗಿ ಬಂದಿದ್ದೆ ಆದರೆ ನೆನ್ನೆ ಪ್ರತಿಭಟನೆಗಳನ್ನು ಎದುರಿಸಿದೆ. ಆದರೆ ನನಗೆ ಅಗತ್ಯ ಭದ್ರತೆ ನೀಡಿ ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಂಡದ್ದಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಅವರಿಗೆ ಶ್ರೇಯಸ್ಸು ಸಲ್ಲಬೇಕು.

"ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಶಾಂತಿಗಾಗಿ ಶ್ರಮಿಸಿದ ಮೂವರಿದ್ದಾರೆ-ಮಹಾತ್ಮ ಗಾಂಧಿ, ಜಿನ್ನಾ ಮತ್ತು ದಿಲೀಪ್ ಕುಮಾರ್. ಆದುದರಿಂದ ಅವರಿಗೆ ಸಂಬಂಧಿಸಿದ ಜಾಗಗಳಿಗೆ ಭೇಟಿ ನೀಡಿದೆ" ಎಂದು ಅವರ ಪುಸ್ತಕ 'ನೀದರ್ ಎ ಹಾಕ್ ನಾರ್ ಎ ಡವ್' ಬಿಡುಗಡೆಗಾಗಿ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT