ಕಾಣೆಯಾದ ಹೋರಿಯ ಬಗ್ಗೆ ಪ್ರಕಟಣೆ 
ಪ್ರಧಾನ ಸುದ್ದಿ

ಹೋರಿ ಹುಡುಕಿಕೊಟ್ಟವರಿಗೆ ೫೦ ಸಾವಿರ ರೂ ಬಹುಮಾನ ಘೋಷಿಸಿದ ವಾರಣಾಸಿ ವ್ಯಕ್ತಿ

ಕಳೆದುಹೋಗಿರುವ 'ಬಾದಶಾಃ' ಇರಬಹುದಾದ ಜಾಗದ ಸುಳಿವು ನೀಡಿದವರಿಗೆ, ಹುಡುಕಿಕೊಟ್ಟವರಿಗೆ ೫೦೦೦೦ ರೂ ಬಹುಮಾನ ನೀಡುವುದಾಗಿ ವಾರಣಾಸಿಯ ಸಾರನಾಥದೆಲ್ಲೆಡೆ

ವಾರಣಾಸಿ: ಕಳೆದುಹೋಗಿರುವ 'ಬಾದಶಾಃ' ಇರಬಹುದಾದ ಜಾಗದ ಸುಳಿವು ನೀಡಿದವರಿಗೆ, ಹುಡುಕಿಕೊಟ್ಟವರಿಗೆ ೫೦೦೦೦ ರೂ ಬಹುಮಾನ ನೀಡುವುದಾಗಿ ವಾರಣಾಸಿಯ ಸಾರನಾಥದೆಲ್ಲೆಡೆ ಭಿತ್ತಿಚಿತ್ರಗಳು ರಾರಾಜಿಸುತ್ತಿವೆ.

'ಬಾದಶಾಃ' ಯಾವುದೋ ಒಂದು ಪ್ರಾಣಿಯಲ್ಲ ಬದಲಾಗಿ ಕೆಲವು ದಿನಗಳಿಂದ ಕಾಣೆಯಾಗಿರುವ ಮೂರು ವರ್ಷದ ಸಾಕಿದ-ಪ್ರೀತಿಯ ಹೋರಿ! ಇದು ಪೋಲಿಸ್ ಠಾಣೆಯ ಮೆಟ್ಟಿಲು ಕೂಡ ಏರಿದ್ದು, ಮಾಲೀಕ ಮನೋಜ್ ಕುಮಾರ್ ಕಾಣೆಯಾದ ಹೋರಿಯ ಬಗೆಗೆ ಸಾರನಾಥ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹೋರಿಯ ದೈಹಿಕ ಗುಣಗಳು, ಆಕಾರ, ಬಣ್ಣದ ವಿವರಗಳುಳ್ಳ ಪೋಸ್ಟರ್ ಗಳನ್ನು ಗ್ರಾಮದ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಕಲಾಗಿದೆ. 'ಬಾದಶಾಃ' ತಮ್ಮ ಕುಟುಂಬದ ಸದಸ್ಯನಾಗಿದ್ದು, ಅವನಿಗೆ ಮನೆಯಲ್ಲಿ ಸ್ವತಂತ್ರವಾಗಿ ಓಡಾಡುವ ಅವಕಾಶವಿತ್ತು ಎಂದು ಕೂಡ ಮನೋಜ್ ಹೇಳಿದ್ದಾರೆ.

"ಅದು ಯಾರಿಗೂ ತೊಂದರೆ ನೀಡದೆ ಈ ಪ್ರದೇಶದಲ್ಲೆಲ್ಲಾ ಸುತ್ತಾಡುತ್ತಿತ್ತು" ಎಂದು ಕೂಡ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT