ಬಿಜೆಪಿ ಪೋಸ್ಟರ್ 
ಪ್ರಧಾನ ಸುದ್ದಿ

ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ವಿವಾದಾತ್ಮಕ ಪೋಸ್ಟರ್

ಉತ್ತರ ಪ್ರದೇಶದಲ್ಲಿ ಬಿಜೆಪಿ ಹಾಕಿರುವ ಪೊಸ್ಟರ್ ಹೊಸ ವಿವಾದವನ್ನು ಸೃಷ್ಟಿಸಿದೆ. ಉತ್ತರ ಪ್ರದೇಶವನ್ನು ದ್ರೌಪದಿಯಂತೆಯೂ, ವಿಪಕ್ಷ ನಾಯಕರು ದ್ರೌಪದಿ ಸೀರೆ...

ವಾರಾಣಸಿ: ಉತ್ತರ ಪ್ರದೇಶದಲ್ಲಿ ಬಿಜೆಪಿ ಹಾಕಿರುವ ಪೊಸ್ಟರ್ ಹೊಸ ವಿವಾದವನ್ನು ಸೃಷ್ಟಿಸಿದೆ. ಉತ್ತರ ಪ್ರದೇಶವನ್ನು ದ್ರೌಪದಿಯಂತೆಯೂ, ವಿಪಕ್ಷ ನಾಯಕರು ದ್ರೌಪದಿ ಸೀರೆ ಎಳೆಯುವ ಕೌರವರಂತೆಯೂ, ಹಾಗೂ ಬಿಜೆಪಿ ಘಟಕದ ಅಧ್ಯಕ್ಷ ಕೇಶವ ಮೌರ್ಯ ಅವರನ್ನು ಶ್ರೀಕೃಷ್ಣನಂತೆ ಚಿತ್ರಿಸಿ ವಾರಣಾಸಿ ನಗರದ ಎಲ್ಲಾ ಗೋಡೆಗಳ ಮೇಲೆ ಪೊಸ್ಟರ್ ಅಂಟಿಸಲಾಗಿದೆ.

ದ್ರೌಪದಿಯ ಸೀರೆಯನ್ನು ಎಳೆಯುವ ಕೌರವರಾಗಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಬಹುಜನ್‌ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌, ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರನ್ನು ಪೋಸ್ಟರ್‌ನಲ್ಲಿ ಹಾಕಲಾಗಿದೆ.

ದ್ರೌಪದಿಯಾಗಿ ಬಿಂಬಿಸಿರುವ ಹೆಣ್ಣಿನ ಮುಖವನ್ನು ಪೋಸ್ಟರ್‌ನಲ್ಲಿ ಮಂಕಾಗಿ ಕಾಣಿಸಲಾಗಿದೆ. ಈ ವಿವಾದಾತ್ಮಕ ಪೋಸ್ಟರ್‌ಗೆ ಬಿಜೆಪಿ ಕಾರ್ಯಕರ್ತ ರೂಪೇಶ್‌ ಪಾಂಡೆ ಅವರ ಸಹಿ ಇದೆ.

ಕಲಿಯುಗ್‌ ಮೇ ಕೇಶವ್‌ ಕೇವಲ್‌ ಉಪದೇಶ್‌ ನಹೀಂ ದೇತೇ; ರಣಭೂಮೀ ಮೇ ಯುದ್ಧ್ ಕರ್ತೇಂ ಹೇಂ' (ಕಲಿಯುಗದಲ್ಲಿ ಶ್ರೀಕೃಷ್ಣನು ಕೇವಲ ಉಪದೇಶ ನೀಡುವುದಿಲ್ಲ; ರಣಭೂಮಿಯಲ್ಲಿ ಯುದ್ಧ ಕೂಡ ಮಾಡುತ್ತಾನೆ). ಎಂದು ಪೊಸ್ಟರ್ ಮೇಲೆ ದಪ್ಪ ತಲೆಬರಹ ಬರೆಯಲಾಗಿದೆ. ಜೊತೆಗೆ ಕೇಶವ ರಕ್ಷಮಾ ಎಂದು ಕೂಡ ಬರೆಯಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT