ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಸೇನಾ ಪಡೆಗಳಲ್ಲಿ ಧರ್ಮದ ಆಧಾರದ ಮೇಲೆ ಗಡ್ಡ ಬೆಳೆಸಲು ಅವಕಾಶವಿಲ್ಲ: ಸುಪ್ರೀಂ ಕೋರ್ಟ್

ಗಡ್ಡ ಬೆಳೆಸಲು ಅವಕಾಶ ಕೋರಿ ಇಬ್ಬರು ಐ ಎ ಎಫ್ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ವೈಯಕ್ತಿಕ ನೋಟ ಮತ್ತು ಶೈಲಿಯ ಬಗ್ಗೆ ಇರುವ ಐ ಎ ಎಫ್ ನೀತಿಗಳು ಧಾರ್ಮಿಕ

ನವದೆಹಲಿ: ಗಡ್ಡ ಬೆಳೆಸಲು ಅವಕಾಶ ಕೋರಿ ಇಬ್ಬರು ಐ ಎ ಎಫ್ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ವೈಯಕ್ತಿಕ ನೋಟ ಮತ್ತು ಶೈಲಿಯ ಬಗ್ಗೆ ಇರುವ ಐ ಎ ಎಫ್ ನೀತಿಗಳು ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ ಎಂದಿದೆ. 
ಮೊಹಮದ್ ಜುಬೈರ್ ಮತ್ತು ಅನ್ಸಾರಿ ಆಫ್ತಾಬ್ ಅಹ್ಮದ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ, ನ್ಯಾಯಾಧೀಶ ಟಿ ಎಸ ಠಾಕೂರ್, ನ್ಯಾಯಾಧೀಶ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಾಧೀಶ ಎಲ್ ನಾಗೇಶ್ವರ ರಾವ್ ಇವರುಗಳನ್ನು ಒಳಗೊಂಡ ಪೀಠ "ವೈಯಕ್ತಿಕ ನೋಟ ಮತ್ತು ಶೈಲಿಯ ಬಗ್ಗೆ ಇರುವ ಐ ಎ ಎಫ್ ನೀತಿಗಳು ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ ಮತ್ತು ಅಂತಹ ಆಶಯ ಕೂಡ ಅವಕ್ಕಿಲ್ಲ. 
"ಅವರ (ನೀತಿಗಳು ಮತ್ತು ನಿಯಮಗಳು) ಎಲ್ಲರ ಏಕರೂಪತೆ, ಶಿಸ್ತು ಮತ್ತು ಕ್ರಮವನ್ನು ಬಯಸುತ್ತವೆ, ಇದು ವಾಯುಪಡೆಗೆ ಅವಶ್ಯಕ ಕೂಡ ಮತ್ತು ಇತರ ಸೇನಾ ಪಡೆಗಳಿಗೂ" ಎಂದು ಪೀಠ ಆದೇಶ ನೀಡಿದೆ. 
ತಾವು ಮುಸ್ಲಿಂ ಸಮುದಾಯಕ್ಕೆ ಸೇರಿದವರಾದ್ದರಿಂದ, ಧಾರ್ಮಿಕ ನೆಲೆಯ ಮೇಲೆ ತಮಗೆ ಗಡ್ಡ ಬೆಳೆಸಲು ಜುಬೈರ್ ಅವಕಾಶ ಕೋರಿದ್ದನ್ನು ಭಾರತೀಯ ವಾಯು ಪಡೆ(ಐ ಎ ಎಫ್) ತಿರಸ್ಕರಿಸಿತ್ತು. 
ಜುಬೈರ್ ಅವರು ಈ ಮನವಿಯನ್ನು ಜನವರಿ ೧೦, ೨೦೦೫ ರಂದು ಸಲ್ಲಸಿದ್ದರು ಮತ್ತು ಅದರ ಮುಂದಿನ ತಿಂಗಳೇ ಹಿರಿಯ ಅಧಿಕಾರಿ ಇದನ್ನು ತಿರಸ್ಕರಿಸಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

IPL 2026: MI vs RCB; ವಾಂಖೆಡೆ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಬೆಂಗಳೂರು, ಅತ್ಯಧಿಕ ಮೊತ್ತ!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

SCROLL FOR NEXT