ಹನುಮಂತಪ್ಪ ಕೊಪ್ಪದ್ 
ಪ್ರಧಾನ ಸುದ್ದಿ

8 ಬಾರಿ ತಿರಸ್ಕಾರಗೊಂಡಿದ್ದರೂ ಛಲಬಿಡದೆ ಸೇನೆ ಸೇರಿದ್ದರು ಹನುಮಂತಪ್ಪ

ವೀರ ಕನ್ನಡಿಗ ಹನುಮಂತಪ್ಪ ಕೊಪ್ಪದ್ ಅವರು ಸೇನೆಗೆ ಸೇರಿದ ಕತೆಯೂ ರೋಮಾಂಚನಕಾರಿ...

ಬೆಂಗಳೂರು: ವೀರ ಕನ್ನಡಿಗ ಹನುಮಂತಪ್ಪ ಕೊಪ್ಪದ್ ಅವರು ಸೇನೆಗೆ ಸೇರಿದ ಕತೆಯೂ ರೋಮಾಂಚನಕಾರಿ. 
ಹನುಮಂತಪ್ಪ ಕೊಪ್ಪದ ಅವರಿಗೆ ಬಾಲ್ಯದಿಂದಲೇ ಸಾಹಸ ಪ್ರವೃತ್ತಿ ಹೆಚ್ಚಿತ್ತು. ಕ್ರೀಡೆಯಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದ ಹನುಮಂತಪ್ಪ, ಸೇನೆ ಸೇರಬೇಕೆಂಬ ಆಸೆಯನ್ನು ಹೊಂದಿದ್ದರು.
ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗಲೇ ಸೇನಾ ನೇಮಕಾತಿ ನಡೆಯುವ ಜಾಗದಲ್ಲಿ ಹಾಜರಿರುತ್ತಿದ್ದರು. ಆದರೆ, ಒಂದಲ್ಲ, ಎರಡಲ್ಲ, ಸತತ ಎಂಟು ಬಾರಿ ಸೇನಾ ನೇಮಕಾತಿಯಲ್ಲಿ ವಿಫಲಗೊಂಡಿದ್ದರು. 
ಇಷ್ಟಾದರೂ, ಛಲ ಬಿಡದ ಹನುಮಂತಪ್ಪ, ಸೇನೆಗೆ ಸೇರಲು ಬೇಕಾದಂತಹ ಮೈಕಟ್ಟನ್ನು ಬೆಳಿಸಿಕೊಂಡರು. 9 ನೇ ಬಾರಿಗೆ ಸೇನೆಗೆ ನೇಮಕಾತಿ ಹೊಂದಿದರು. ಅಂತೂ ಪ್ರಯತ್ನ ಮತ್ತು ಛಲ ಬಿಡದ ಹನುಮಂತಪ್ಪ ವೀರ ಸೇನೆಗೆ ಸೇರ್ಪಡೆಗೊಂಡು, ದೇಶಕ್ಕಾಗಿ ಪ್ರಾಣ ಬಿಟ್ಟ ವೀರ ಕನ್ನಡಿಗರಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT