ಸ್ವಚ್ಛ ಭಾರತ ಸರ್ಕಾರ ಟ್ವೀಟ್ ಮಾಡಿರುವ ಚಿತ್ರ 
ಪ್ರಧಾನ ಸುದ್ದಿ

ಅರಮನೆ ನಗರಿ ಮೈಸೂರು ಈ ಬಾರಿಯೂ ದೇಶದ ನಂ.1 ಸ್ವಚ್ಛ ನಗರ

ಅರಮನೆ ನಗರಿ ಮೈಸೂರು ಈ ಬಾರಿಯೂ ಭಾರತದ ‘ನಂ. 1 ಸ್ವಚ್ಛ ನಗರ’ಎಂಬ ಕೀರ್ತಿಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ...

ನವದೆಹಲಿ: ಅರಮನೆ ನಗರಿ ಮೈಸೂರು ಈ ಬಾರಿಯೂ ಭಾರತದ ‘ನಂ. 1 ಸ್ವಚ್ಛ ನಗರ’ಎಂಬ ಕೀರ್ತಿಗೆ ಪಾತ್ರವಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ್ ಅಭಿಯಾನದಡಿ ಸುಮಾರು 73 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯಲ್ಲಿ ಕರ್ನಾಕಟದ ಮೈಸೂರು ಮೊದಲ ಸ್ಥಾನ, ಚಂಡೀಗಢ್ ಎರಡನೇ ಸ್ಥಾನ ಪಡೆದರೆ, ತಮಿಳುನಾಡಿನ ತಿರುಚಿರಾಪಳ್ಳಿ ಮೂರನೇ ಸ್ಥಾನ ಪಡೆದುಕೊಂಡಿದೆ. ದೆಹಲಿ ನಂತರದ ಸ್ಥಾನದಲ್ಲಿರುವುದಾಗಿ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಲ್ಲದೆ ಸ್ವಚ್ಛರಾಜಧಾನಿ ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ ಲಭಿಸಿದೆ ಎಂದು ನಾಯ್ಡು ಹೇಳಿದರು.
ದೇಶದ ಸ್ವಚ್ಛ ನಗರಗಳ ಟಾಪ್ 10 ಪಟ್ಟಿಯಲ್ಲಿ 1)ಕರ್ನಾಟಕದ ಮೈಸೂರು, 2)ಚಂಡೀಗಢ್, 3)ತಮಿಳುನಾಡಿನ ತಿರುಚಿರಾಪಳ್ಳಿ, 4)ನವದೆಹಲಿಯ ಮುನ್ಸಿಪಲ್ ಕಾರ್ಫೋರೇಶನ್, 5)ವಿಶಾಖಪಟ್ಟಣಂ, 6)ಗುಜರಾತ್ ನ ಸೂರತ್, 7)ರಾಜ್ ಕೋಟ್, 8)ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್, 9)ಚಿಂಡ್ವಾಡ್ ಮತ್ತು 10) ಮಹಾರಾಷ್ಟ್ರದ ಗ್ರೇಟರ್ ಮುಂಬೈ ಸೇರಿದೆ. ಕೊಳಕು ನಗರಗಳ ಪಟ್ಟಿಯಲ್ಲಿ ಜಾರ್ಖಂಡ್ ನ ದನ್ ಭಾದ್ ಗೆ ಪ್ರಥಮ ಸ್ಥಾನ
ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ದೇಶದಲ್ಲಿ 65ನೇ ಸ್ವಚ್ಚನಗರಿಯ ಸ್ಥಾನ ಸಿಕ್ಕಿದೆ ಎಂದು ವರದಿ ವಿವರಿಸಿದೆ.
ಕಳೆದ ಬಾರಿಯೂ ಭಾರತದ 476 ನಗರಗಳಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ಅರಮನೆ ನಗರಿ ಮೈಸೂರು ಪ್ರಥಮ ಸ್ಥಾನ ಪಡೆದಿತ್ತು. 2014ರ ನಂತರ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛಭಾರತ್ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಶೌಚಾಲಯ ವ್ಯವಸ್ಥೆ ಮತ್ತು ಸ್ವಚ್ಛತೆಯ ಆಧಾರದ ಮೇಲೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸ್ಫೋಟ ಪ್ರಕರಣದಲ್ಲಿ ಮೊದಲ ಬಂಧನ: i20 ಕಾರಿನ ಮಾಲೀಕ ಆಮಿರ್ Arrest; ಡಾ. ಉಮರ್ ಜೊತೆ ಸೇರಿ ದಾಳಿಗೆ ಸಂಚು!

KPCC ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ?: ದೆಹಲಿಯಲ್ಲಿ ಸಿಡಿದೆದ್ದ ಡಿಸಿಎಂ ಡಿ.ಕೆ ಶಿವಕುಮಾರ್!

ಹೂಕೋಸು ಫೋಟೋ ಹಾಕಿ ಬಿಹಾರದ NDA ಗೆಲುವು ಸಂಭ್ರಮಿಸಿದ ಅಸ್ಸಾಂ ಬಿಜೆಪಿ ಸಚಿವ!: ಮುಸ್ಲಿಮ್ ನರಮೇಧ ನೆನಪಿಸಿದ್ದಕ್ಕೆ ಕಾಂಗ್ರೆಸ್ ಕೆಂಡ!

ಕುಟುಂಬದ ಮೇಲೆ ದಾಳಿ ಮಾಡುವವರನ್ನು...: ಸಹೋದರಿ ರೋಹಿಣಿಗೆ ಆದ ಅಪಮಾನಕ್ಕೆ ಸಿಡಿದ ತೇಜ್ ಪ್ರತಾಪ್ ಯಾದವ್; ತಂದೆ ಲಾಲು ಪ್ರಸಾದ್ ಗೆ ಹೇಳಿದ್ದೇನು?

ಬೆಂಗಳೂರಿನಲ್ಲಿ ಲೈವ್ ಕಾರ್ಯಕ್ರಮದ ವೇಳೆ ಗಾಯಕನ ಪ್ಯಾಂಟ್ ಎಳೆದು ಅವಮಾನ, Video Viral!

SCROLL FOR NEXT