ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ; ಸಿ ಪಿ ಎಂ ಕಾರ್ಯಕರ್ತನ ಬಂಧನ

ಪಿ ವಿ ಸುಜಿತ್(೨೭) ಎಂದು ಗುರುತಿಸಲಾಗಿರುವ ಆರ್ ಎಸ್ ಎಸ್ ಕಾರ್ಯಕರ್ತನನ್ನು ಪಪ್ಪಿನಿಸ್ಸೇರಿಯ ಅವರ ನಿವಾಸದ ಬಳಿ ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ.

ಕಣ್ಣೂರು: ಪಿ ವಿ ಸುಜಿತ್(೨೭) ಎಂದು ಗುರುತಿಸಲಾಗಿರುವ ಆರ್ ಎಸ್ ಎಸ್ ಕಾರ್ಯಕರ್ತನನ್ನು ಪಪ್ಪಿನಿಸ್ಸೇರಿಯ ಅವರ ನಿವಾಸದ ಬಳಿ ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ. ಕೊಲೆಗಡುಕರಿಂದ ಮಗನನ್ನು ರಕ್ಷಿಸಲು ಮುಂದಾದ ಪೋಷಕರಿಗೂ ಈ ದಾಳಿಯಲ್ಲಿ ತೀವ್ರ ಗಾಯಗಳಾಗಿವೆ.

ಸೋಮವಾರ ರಾತ್ರಿ ಸುಮಾರು ೧೧:೩೦ ಕ್ಕೆ ಈ ಘಟನೆ ನಡೆದಿದ್ದು, ಆಯುಧಗಳನ್ನು ಹಿಡಿದ ಒಂದು ಗುಂಪು, ವಾಲಪಟ್ಟಣಮ್ ಪೊಲೀಸ್ ಠಾಣೆಯ ಸುಪರ್ದಿಯಲ್ಲಿರುವ ಪಪ್ಪಿನಿಸ್ಸೇರಿಯ ಅರೋಲಿ ಬಳಿ ಇರುವ ಸಂತ್ರಸ್ತನ ಮನೆಗೆ ನುಗ್ಗಿ ದಾಳಿ ನಡೆಸಿದೆ. ಸಂತ್ರಸ್ತನಿಗೆ ಇರಿದ ಗಾಯಗಳಾಗಿದ್ದು ಕೂಡಲೇ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದರೂ ಅವರು ಅಸು ನೀಗಿದ್ದಾರೆ. ಈ ಕೊಲೆಯ ಹಿಂದೆ ಸಿ ಪಿ ಎಂ ಪಕ್ಷದ ಕೈವಾಡವಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಮುಖಂಡರು ದೂರಿದ್ದಾರೆ.

ಈ ದಾಳಿಯ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು ಶಂಕಿತ ಸಿ ಪಿ ಎಂ ಕಾರ್ಯಕರ್ತನೋಬ್ಬನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BJP, RSS ನಡುವೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಂಘರ್ಷ ಇಲ್ಲ: ಮೋಹನ್ ಭಾಗವತ್

Nation survey: ಇಂದೇ ಲೋಕಸಭೆ ಚುನಾವಣೆ ನಡೆದರೆ NDA ಎಷ್ಟು ಸ್ಥಾನ ಗೆಲ್ಲುತ್ತೆ ಗೊತ್ತಾ?

SCO summit: ಟ್ರಂಪ್ ಗೆ ಸೆಡ್ಡು; ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

"ಭಾರತೀಯರು ಬಗ್ಗದೇ ಹೋದರೆ...": ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾನೇರ ಬೆದರಿಕೆ!

ಯಾವುದೇ ವ್ಯಕ್ತಿ 75 ವರ್ಷಗಳಿಗೆ ನಿವೃತ್ತಿಯಾಗಬೇಕು ಎಂದು ಎಂದಿಗೂ ಹೇಳಿಲ್ಲ: RSS ಮುಖ್ಯಸ್ಥ Mohan bhagwat ಸ್ಪಷ್ಟನೆ

SCROLL FOR NEXT