ನೇತಾಜಿ ಪುತ್ರಿ ಅನಿತಾ ಬೋಸ್ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ನೇತಾಜಿ ಅಸ್ಥಿಯ ಡಿಎನ್‍ಎ ಪರೀಕ್ಷೆ ನಡೆಯಲಿ: ಅನಿತಾ ಬೋಸ್

ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವು ಮತ್ತು ಅದರ ಹಿಂದಿನ ರಹಸ್ಯ ಕುರಿತು ಸಾಕಷ್ಟು ಅನುಮಾನಗಳು ಮೂಡುತ್ತಿರುವಂತೆಯೇ ನೇತಾಜಿ ಪುತ್ರಿ ಅನಿತಾ ಬೋಸ್ ಅವರು ತಮ್ಮ ತಂದೆಯ ಅಸ್ಥಿಯ ಡಿಎನ್ ಎ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ...

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವು ಮತ್ತು ಅದರ ಹಿಂದಿನ ರಹಸ್ಯ ಕುರಿತು ಸಾಕಷ್ಟು ಅನುಮಾನಗಳು ಮೂಡುತ್ತಿರುವಂತೆಯೇ ನೇತಾಜಿ ಪುತ್ರಿ ಅನಿತಾ ಬೋಸ್ ಅವರು  ತಮ್ಮ ತಂದೆಯ ಅಸ್ಥಿಯ ಡಿಎನ್ ಎ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ನೇತಾಜಿ ಸಾವಿನ ಕುರಿತು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಕಡತಗಳ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅನಿತಾ ಬೋಸ್ ಅವರು, ತೈಪೆಯಲ್ಲಿ ವಿಮಾನ  ಅಪಘಾತದಿ೦ದ ಸಾವನ್ನಪ್ಪಿರುವುದು ಬಹುತೇಕ ನ೦ಬಬಹುದಾದ ಅ೦ಶವಾಗಿದೆ ಎ೦ದಿರುವ ಅವರು, ಬೂದಿಯಲ್ಲಿ ಇರಬಹುದಾದ ಮೂಳೆಗಳನ್ನು ತೆಗೆದು ಡಿಎನ್‍ಎ ಪರೀಕ್ಷೆ ನಡೆಸಿದರೆ  ವಾಸ್ತವಾ೦ಶ ಹೊರಬಿದ್ದೀತು ಎ೦ದು ಹೇಳಿದ್ದಾರೆ.

ಜಪಾನ್‍ನ ದೇಗುಲದಲ್ಲಿದೆ ಎ೦ದು ಹೇಳಲಾದ ಬೋಸ್‍ರ ಅಸ್ಥಿಯ ಡಿಎನ್‍ಎ ಪರೀಕ್ಷೆ ಮಾಡುವ೦ತೆ ಬೋಸ್ ಪುತ್ರಿ ಅನಿತಾ ಬೋಸ್ ಕೇ೦ದ್ರ ಸಕಾ೯ರವನ್ನು ಆಗ್ರಹಿಸಿದ್ದು, ರೆಂಕೋಜೆ  ದೇಗುಲದಲ್ಲಿರುವ ತಮ್ಮ ತಂದೆ ದೇಹದ ಅಸ್ಥಿಯಲ್ಲಿರುವ ಮೂಳೆ ಡಿಎನ್ ಎ ಪರೀಕ್ಷೆಗೆ ಒಳಪಡಿಸಲಾರದಷ್ಟು ಸುಟ್ಟು ಹೋಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಕಡತಗಳ ಪೈಕಿ ಕೆಲವು ಕಡತಗಳನ್ನು ಮಾತ್ರ ತಾವು ಪರಿಶೀಲಿಸಿದ್ದು, ದಾಖಲೆಗಳಲ್ಲಿ ನೇತಾಜಿ ಅವರ ಮರಣ ಪ್ರಮಾಣಪತ್ರವೇ ಇಲ್ಲದಿರುವುದು ನನಗೆ  ಅಚ್ಚರಿ ತಂದಿದೆ. ಇನ್ನು ಜಪಾನ್ ಪ್ರಜೆಗಳ ಅಭಿಪ್ರಾಯದಂತೆ ನೇತಾಜಿ ತಮ್ಮ ಅಂತಿಮ ದಿನಗಳಲ್ಲಿ ಜಪಾನ್ ನಲ್ಲಿದ್ದರು ಮತ್ತು ಅವರ ಮರಣದ ನಂತರ ಅವರ ಅಸ್ಥಿಯನ್ನು ಶೇಖರಿಸಿಡಲಾಗಿದೆ  ಎಂದು ಹೇಳಲಾಗುತ್ತಿದೆ. ಇದನ್ನು ಸಾಬೀತು ಪಡಿಸಲು ಆ ಅಸ್ಥಿಯಲ್ಲಿರುವ ಮೂಳೆಯ ಡಿಎನ್ ಎ ಪರೀಕ್ಷೆ ನಡೆಸಬೇಕು ಎಂದು ಅನಿತಾ ಬೋಸ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಉತ್ತರ ಪ್ರದೇಶ: "ಆಕ್ಷೇಪಾರ್ಹ" ಸ್ಥಿತಿಯಲ್ಲಿದ್ದ ಪ್ರೇಮಿಗಳನ್ನು ಹೊಡೆದು ಕೊಂದ ಕುಟುಂಬಸ್ಥರು!

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

SCROLL FOR NEXT