ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಊಟ ಮಾಡುವಾಗ ಹೃದಯಾಘಾತದಿಂದ ವ್ಯಕ್ತಿ ಸಾವು; ರೈಲಿಗೆ ಅಡ್ಡ ಬಿದ್ದು ಕುಟುಂಬ ಆತ್ಮಹತ್ಯೆ

ಊಟ ಮಾಡುವಾಗ ಹೃದಯಾಘಾತದಿಂದ ವ್ಯಕ್ತಿಯೊಬ್ಬ ಮೃತಪಟ್ಟ ಕೆಲವೇ ಘಂಟೆಗಳಲ್ಲಿ, ಆ ವ್ಯಕ್ತಿಯ ಕುಟುಂಬದ ಇತರ 4 ಜನರು ಘಾಟಿಕೆಸರ್ ಬಳಿ ರೈಲಿಗೆ ಅಡ್ಡ ಬಿದ್ದು ಆತ್ಮಹತ್ಯೆ ಮಾಡಿಕೊಂಡ

ಹೈದರಾಬಾದ್: ಊಟ ಮಾಡುವಾಗ ಹೃದಯಾಘಾತದಿಂದ ವ್ಯಕ್ತಿಯೊಬ್ಬ ಮೃತಪಟ್ಟ ಕೆಲವೇ ಘಂಟೆಗಳಲ್ಲಿ, ಆ ವ್ಯಕ್ತಿಯ ಕುಟುಂಬದ ಇತರ 4 ಜನರು ಘಾಟಿಕೆಸರ್ ಬಳಿ ರೈಲಿಗೆ ಅಡ್ಡ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. 
ಪೊಲೀಸರು ಹೇಳುವಂತೆ ಇಡೀ ಕುಟುಂಬ ಕಳೆದ ರಾತ್ರಿ ಕಾರ್ ಮೂಲಕ ಹೈದರಾಬಾದ್ ಗೆ ಪ್ರಯಾಣ ಬೆಳೆಸಿತ್ತು. ಹೈದರಾಬಾದ್ ನಿಂದ 60 ಕಿಲೋಮೀಟರ್ ಗು ಮುಂಚಿತವಾಗಿ ಸಿಗುವ  ಭಾಂಗೀರ್ ನಲ್ಲಿ ಊಟಕ್ಕಾಗಿ ನಿಲ್ಲಿಸಿದ್ದಾರೆ. ಊಟ ಮುಗಿಸಿದ ಕೆಲವೇ ಕ್ಷಣಗಳಲ್ಲಿ ಕುಟುಂಬದ ಮುಖ್ಯಸ್ಥ ಸತ್ಯನಾರಾಯಣ ಅನಾರೋಗ್ಯದಿಂದ ಬಳಲಿದ್ದಾರೆ. 
ಕುಟುಂಬ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ಸತ್ಯನಾರಾಯಣ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಆಗ ನಾಲ್ವರು ಕುಟುಂಬ ಸದಸ್ಯರಾದ ಪತ್ನಿ ಮೀರಾಬಾಯಿ (45), ಹೆಣ್ಣು ಮಕ್ಕಳಾದ ಸ್ವಾತಿ (31), ನೀಲಿಮಾ (29) ಮತ್ತು ಮಗ ಶಿವರಾಂ ಕೃಷ್ಣ (23), ಹೈದರಾಬಾದ್ ನಿಂದ 40 ಕಿಮೀ ದೂರದಲ್ಲಿರುವ ಘಾಟಿಕೆಸರ್ ನ ನಿರ್ಜನ ಪ್ರದೇಶಕ್ಕೆ ತೆರಳಿ ಚಲಿಸುತ್ತಿರುವ ರೈಲಿನ ಮುಂಭಾಗಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
ಸತ್ಯನಾರಾಯಣ ಅವರು ಹೌಸಿಂಗ್ ಬೋರ್ಡ್ ನಲ್ಲಿ ವಿಭಾಗೀಯ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT