ಅಫ್ಘಾನಿಸ್ಥಾನದಲ್ಲಿ ನಿಧನರಾದ ಅಮೆರಿಕಾದ ಪತ್ರಕರ್ತ-ಛಾಯಾಗ್ರಾಹಕ ಡೇವಿಡ್ ಗಿಲಕಿ, ಸೌಜನ್ಯ: ಎನ್ ಪಿ ಆರ್ [ಡಾಟ್] ಆರ್ಗ್ 
ಪ್ರಧಾನ ಸುದ್ದಿ

ಅಫ್ಘಾನಿಸ್ಥಾನದಲ್ಲಿ ಅಮೆರಿಕಾದ ಪತ್ರಕರ್ತ-ಛಾಯಾಗ್ರಾಹಕ ಹತ

ಅಮೆರಿಕಾದ ನ್ಯಾಷನಲ್ ಪಬ್ಲಿಕ್ ರೇಡಿಯೋದ (ಎನ್ ಪಿ ಆರ್) ಪ್ರಶಸ್ತಿ ವಿಜೇತ ಛಾಯಾಗ್ರಾಹಕ-ಪತ್ರಕರ್ತ ಡೇವಿಡ್ ಗಿಲಕಿ ಅಫ್ಘಾನಿಸ್ಥಾನದಲ್ಲಿ ವರದಿಯ ಮಾಡುತ್ತಿದ್ದಾಗ ಭಾನುವಾರ ಹತರಾಗಿದ್ದಾರೆ.

ವಾಶಿಂಗ್ಟನ್: ಅಮೆರಿಕಾದ ನ್ಯಾಷನಲ್ ಪಬ್ಲಿಕ್ ರೇಡಿಯೋದ (ಎನ್ ಪಿ ಆರ್) ಪ್ರಶಸ್ತಿ ವಿಜೇತ ಛಾಯಾಗ್ರಾಹಕ-ಪತ್ರಕರ್ತ ಡೇವಿಡ್ ಗಿಲಕಿ ಅಫ್ಘಾನಿಸ್ಥಾನದಲ್ಲಿ ವರದಿಯ ಮಾಡುತ್ತಿದ್ದಾಗ  ಭಾನುವಾರ ಹತರಾಗಿದ್ದಾರೆ.

ಅಫ್ಘಾನಿಸ್ಥಾನದ ಸೇನೆಯ ಜೊತೆ ಹೆಲ್ಮಂಡ್ ಪ್ರಾಂತ್ಯದಲ್ಲಿ ಪ್ರಯಾಣಿಸುತ್ತಿದ್ದ ೫೦ ವರ್ಷದ ಗಿಲಕಿ, ಜೊತೆಗಿದ್ದ ಸೇನೆಯ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು, ಇವರ ವಾಹನವೂ ಅದಕೆ ಗುದ್ದಿ ಮೃತಪಟ್ಟಿದ್ದಾರೆ ಎಂದು ಎನ್ ಪಿ ಆರ್ ವಕ್ತಾರ ಇಸಾಬೆಲ್ ಲಾರಾ ತಿಳಿಸಿದ್ದಾರೆ.

ಇವರ ಜೊತೆಗೆ ಅಫ್ಘಾನಿಸ್ಥಾನದ ಅನುವಾದಕ ೩೮ ವರ್ಷದ ಜಬಿಹುಲ್ಲ ತಮನ್ನ ಕೂಡ ಹತಾರಾಗಿದ್ದಾರೆ ಎಂದು ಇ ಎಫ್ ಇ ನ್ಯೂಸ್ ವರದಿ ಮಾಡಿದೆ.

ಜೊತೆಗೆ ಪ್ರಯಾಣಿಸುತ್ತಿದ್ದ ಎನ್ ಪಿ ಆಪ್ ಪತ್ರಕರ್ತರಾದ ಟಾಮ್ ಬೋವಮ್ ಮತ್ತು ಮೋನಿಕಾ ಈವ್ಸ್ಟೀವಾ ಸಾವಿನ ದವಡೆಯಿಂದ ಪಾರಾಗಿದ್ದಾರೆ.

ವಿಶ್ವದ ಅತ್ಯುತ್ತಮ ಪತ್ರಕರ್ತ-ಛಾಯಾಗ್ರಾಹಕರಲ್ಲಿ ಒಬ್ಬರಾಗಿದ್ದ ಗಿಲಕಿ ೨೦೦೭ ಎಮ್ಮಿ ಪ್ರಶಸ್ತಿ ಮತ್ತು ೨೦೧೦ರಲ್ಲಿ ಜಾರ್ಜ್ ಪಾಲಕ್ ಪ್ರಶಸ್ತಿ ಮತ್ತಿತರ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

"೯/೧೧ ದಾಳಿಯಿಂದಲೂ ಡೇವಿಡ್ ಇರಾಕ್ ಮತ್ತು ಅಫ್ಘಾನಿಸ್ಥಾನಗಳಲ್ಲಿ ಯುದ್ಧವನ್ನು ವರದಿ ಮಾಡುತ್ತಿದ್ದರು. ಹೇಗೆ ಜನ ಈ ಯುದ್ಧದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ ಎಂಬುದನ್ನು ತಿಳಿಸಿ ಸಾರ್ವಜನಿಕರಿಗೆ ಸಹಾಯ ಮಾಡುವ ಉದ್ದೇಶ ಅವರದ್ದಾಗಿತ್ತು. ಈ ಗುರಿಯಲ್ಲೇ ಅವರು ಮೃತಪಟ್ಟಿದ್ದಾರೆ" ಎಂದು ಎನ್ ಪಿ ಆರ್ ನ ಹಿರಿಯ ಉಪಾಧ್ಯಕ್ಷ ಮೈಕೆಲ್ ಒರೇಸ್ಕೆಸ್ ಹೇಳಿದ್ದಾರೆ.

ಪತ್ರಕರ್ತರ ಸುರಕ್ಷಾ ಸಂಘ (ಸಿ ಪಿ ಜೆ) ವರದಿಯ ಪ್ರಕಾರ ೧೯೯೨ ರಿಂದ ಇಲ್ಲಿಯವರೆಗೆ ವರದಿ ಮಾಡುವಾಗಲೇ ೨೭ ಪತ್ರಕರ್ತರು ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT