ಮಲಬಾರ್-2 ಜಂಟೀ ಕವಾಯತು (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಭಾರತ, ಅಮೆರಿಕ, ಜಪಾನ್ ಜಂಟಿ ಸೇನಾ ಕವಾಯತು; ಚೀನಾ ಗೂಢಚಾರಿಕೆ

ಭಾರತ, ಅಮೆರಿಕ ಮತ್ತು ಜಪಾನ್ ದೇಶಗಳು ಫೆಸಿಫಿಕ್ ಮಹಾಸಾಗರದಲ್ಲಿ ನಡೆಸುತ್ತಿರುವ ಜಂಟಿ ನೌಕಾದಳ ಕವಾಯತಿನ ಮೇಲೆ ಚೀನಾ ಗೂಢಚಾರಿಕೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ...

ಓಕಿನಾವ: ಭಾರತ, ಅಮೆರಿಕ ಮತ್ತು ಜಪಾನ್ ದೇಶಗಳು ಫೆಸಿಫಿಕ್ ಮಹಾಸಾಗರದಲ್ಲಿ ನಡೆಸುತ್ತಿರುವ ಜಂಟಿ ನೌಕಾದಳ ಕವಾಯತಿನ ಮೇಲೆ ಚೀನಾ ಗೂಢಚಾರಿಕೆ ನಡೆಸುತ್ತಿದ್ದು,  "ಮಲಬಾರ್"-2 ಯುದ್ಧ ನೌಕೆಗಳ ಹಿಂದೆಯೇ ತನ್ನ ಗೂಢಚಾರಿಕಾ ದೋಣಿಯನ್ನು ಹಿಂಬಾಲಿಸುವಂತೆ ಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಜಪಾನ್​ನ ಓಕಿನಾವ ದ್ವೀಪದ ಬಳಿ ಅಮೆರಿಕದ ಜಾನ್ ಸಿ ಸ್ಟೆನ್ನಿಸ್ ಎಂಬ ಯುದ್ಧ ವಿಮಾನ ವಾಹಕ ಹಡಗು ಸೇರಿದಂತೆ ಜಪಾನ್ ಮತ್ತು ಭಾರತದ ಒಟ್ಟು 9 ಯುದ್ಧ ನೌಕೆಗಳು 8 ದಿನಗಳ ವಾರ್ಷಿಕ ಕವಾಯತಿನಲ್ಲಿ ಪಾಲ್ಗೊಂಡಿವೆ. ಆದರೆ ಅಮೆರಿಕದ ಯುದ್ಧ ನೌಕೆಯನ್ನು ಚೀನಾದ ದೋಣಿಯೊಂದು ಹಿಂಬಾಲಿಸುತ್ತಿದ್ದು, ಹಡಗಿನ ಚಲನವಲನಗಳ ಮೇಲೆ ನಿಗಾ ಇಟ್ಟಿದೆ ಎಂದು  ಅಧಿಕಾರಿಗಳು ಶಂಕಿಸಿದ್ದಾರೆ.

ಜಪಾನ್ ದಕ್ಷಿಣ ಭಾಗದಲ್ಲಿರುವ ಓಕಿನಾವ ದ್ವೀಪ ಸಮೂಹ ಸೂಕ್ಷ್ಮ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಚೀನಾ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿದೆ. ಆ ಮೂಲಕ ಪಶ್ಚಿಮ ಫೆಸಿಫಿಕ್ ಸಾಗರದಲ್ಲಿ  ಪ್ರಾಬಲ್ಯ ಸ್ಥಾಪಿಸಲು ಚೀನಾ ಹವಣಿಸುತ್ತಿದ್ದು, ಇದೇ ಕಾರಣಕ್ಕಾಗಿ ಈ ದ್ವೀಪಸಮೂಹ ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇನ್ನು ಚೀನಾ ದೇಶದ ಈ ಹವಣಿಕೆಗೆ ಜಪಾನ್ ಪ್ರತಿರೋಧ ಒಡ್ಡಿದ್ದು, ಜಪಾನ್ ಗೆ ಭಾರತ ಮತ್ತು ಅಮೆರಿಕ ದೇಶಗಳು ಸಾಥ್ ನೀಡಿವೆ.

ಚೀನಾ ದೇಶದ ಈ ದುರುದ್ದೇಶ ಪೂರಿತ ನಡೆಯನ್ನು ವಿರೋಧಿಸಲೆಂದೇ ಜಪಾನ್, ಭಾರತ ಮತ್ತು ಅಮೆರಿಕ ದೇಶಗಳು ವಿವಾದಿತ ಓಕಿನಾವ ದ್ವೀಪ ಸಮೂಹದಲ್ಲಿ ಜಂಟಿ ನೌಕಾದಳ ಕವಾಯತು  ನಡೆಸುತ್ತಿವೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಚೀನಾದ ಯುದ್ಧ ನೌಕೆ ಜಪಾನ್ ದ್ವೀಪದ ಬಳಿ ಕಾಣಿಸಿಕೊಂಡಿತ್ತು. ಹಾಗಾಗಿ ಜಪಾನ್ ಈ ದ್ವೀಪಗಳಲ್ಲಿ ರಾಡಾರ್ ಕೇಂದ್ರಗಳನ್ನು ಸ್ಥಾಪಿಸುತ್ತಿದೆ  ಮತ್ತು ಯುದ್ಧ ನೌಕೆಗಳನ್ನು ನಿಯೋಜಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT