ಸೇತು ಭಾರತಂ ಯೋಜನೆ ಮಾದರಿ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ರೈಲ್ವೇ ಕ್ರಾಸಿಂಗ್ ಮುಕ್ತ ಹೆದ್ದಾರಿಗಾಗಿ ಮೋದಿ ಸರ್ಕಾರದ "ಸೇತು ಭಾರತಂ"

ಹೆಚ್ಚುತ್ತಿರುವ ರೈಲ್ವೇ ಕ್ರಾಸಿಂಗ್ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೂತನ ಯೋಜನೆ "ಸೇತು ಭಾರತಂ" ಕೈಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿಗಳನ್ನು ರೈಲ್ವೇ ಕ್ರಾಸಿಂಗ್‌ನಿಂದ..

ನವದೆಹಲಿ: ಹೆಚ್ಚುತ್ತಿರುವ ರೈಲ್ವೇ ಕ್ರಾಸಿಂಗ್ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೂತನ ಯೋಜನೆ "ಸೇತು ಭಾರತಂ" ಕೈಗೊಂಡಿದ್ದು, ರಾಷ್ಟ್ರೀಯ  ಹೆದ್ದಾರಿಗಳನ್ನು ರೈಲ್ವೇ ಕ್ರಾಸಿಂಗ್‌ನಿಂದ ಮುಕ್ತಗೊಳಿಸಿ, ಪುರಾತನ ಸೇತುವೆಗಳನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ಯೋಜನೆ ಉದ್ದೇಶವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಈ 'ಸೇತು ಭಾರತಂ' ಯೋಜನೆಗೆ ಶುಕ್ರವಾರ ಚಾಲನೆ ನೀಡಲಾಯಿತು. ಈ ನೂತನ ಯೋಜನೆಯಡಿ,  ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿಯೇ ರೈಲು ಹಳಿ ಹಾದು ಹೋಗುವಂತಹ ಕಡೆಗಳಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿ ಅಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಜತೆಗೆ  ಇದೇ ಯೋಜನೆಯಡಿಯಲ್ಲಿ ಬ್ರಿಟಿಷರ ಕಾಲದ 1,500 ಮೇಲ್ಸೇತುವೆಗಳನ್ನು ದುರಸ್ತಿಗೊಳಿಸಲಾಗುತ್ತದೆ. ಒಟ್ಟಾರೆ ದೇಶಾದ್ಯಂತ 208 ರೈಲ್ವೇ ಕ್ರಾಸಿಂಗ್‌ಗಳಲ್ಲಿ ಮೇಲ್ಸೇತುವೆಗಳನ್ನು  ನಿರ್ಮಿಸುವ ಮೂಲಕ 2019ರೊಳಗೆ ಹೆದ್ದಾರಿಗಳನ್ನು ರೈಲ್ವೇ ಕ್ರಾಸಿಂಗ್‌ ಮುಕ್ತಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

208 ಮೇಲ್ಸೇತುವೆಗಳ ಪೈಕಿ ಕರ್ನಾಟಕದಲ್ಲಿ 17 ಸೇತುವೆಗಳು ನಿರ್ಮಾಣವಾಗಲಿದ್ದು, ಈ ಮಹತ್ವಾಕಾಂಕ್ಷಿ "ಸೇತು ಭಾರತಂ" ಯೋಜನೆಗಾಗಿ ಕೇಂದ್ರ ಸರ್ಕಾರ ಒಟ್ಟು 50,800 ಕೋಟಿ ರು.  ಹಣವನ್ನು ಮೀಸಲಿರಿಸಿದೆ. ಈ ಪೈಕಿ ರೈಲ್ವೇ ಮೇಲ್ಸೇತುವೆಗೆ 20,800 ಕೋಟಿ ಹಾಗೂ ಸೇತುವೆಗಳ ದುರಸ್ತಿಗೆ 30,000 ಕೋಟಿ ರು. ಖರ್ಚಾಗಲಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Video: 17 ಮಕ್ಕಳು ಸೇರಿ 19 ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ವ್ಯಕ್ತಿ ಮುಂಬೈ ಪೊಲೀಸ್ ಗುಂಡಿಗೆ ಬಲಿ!

2025 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ನಟ ಪ್ರಕಾಶ್‌ ರಾಜ್‌ ಸೇರಿ 70 ಮಂದಿ ಆಯ್ಕೆ

ಡಿಕೆಶಿ, ತೇಜಸ್ವಿ ಸೂರ್ಯ ಜಟಾಪಟಿ; ಬೆಂಗಳೂರಿನಲ್ಲಿ ಟನಲ್ ರಸ್ತೆ ಬಗ್ಗೆ ಕೇಂದ್ರ ಸಚಿವ ಖಟ್ಟರ್ ಹೇಳಿದ್ದೇನು?

ಕೇಂದ್ರದ ಬೆಳೆ ವಿಮಾ ಯೋಜನೆ: ಅನ್ನದಾತನಿಗೆ 'ಅಪಹಾಸ್ಯ'; ಕೇವಲ 3 ರೂ. ಪರಿಹಾರ, ಚೆಕ್ ಗಳ ಮೂಲಕ ಹಿಂತಿರುಗಿಸಿದ ಮಹಾರಾಷ್ಟ್ರ ರೈತರು!

ಚಿತ್ತಾಪುರದಲ್ಲಿ ಪಥ ಸಂಚಲನ: ಮತ್ತೊಂದು ಶಾಂತಿ ಸಭೆ ನಡೆಸುವಂತೆ ಹೈಕೋರ್ಟ್ ಸೂಚನೆ; RSSಗೆ ಹಿನ್ನಡೆ

SCROLL FOR NEXT