ಶನಿ ಶಿಂಗಾಪುರ್ ದೇವಾಲಯವನ್ನು ಹೊಕ್ಕಲು ಪ್ರಯತ್ನಿಸಿದ್ದ ತೃಪ್ತಿ ದೇಸಾಯಿ ನೇತೃತ್ವದ ಮಹಿಳಾ ಕಾರ್ಯಕರ್ತರನ್ನು ತಡೆದಿದ್ದ ಸಂದರ್ಭ 
ಪ್ರಧಾನ ಸುದ್ದಿ

ಮಹಾರಾಷ್ಟ್ರದ ಶಿವದೇವಾಲಯಕ್ಕೆ ಪ್ರವೇಶ ಕೋರಿದ ಮಹಿಳಾ ಕಾರ್ಯಕರ್ತರು

ಟ್ರಿಂಬಕೇಶ್ವರ ಶಿವ ದೇವಾಲಯದ ಗರ್ಭ ಗುಡಿ ಹೊಕ್ಕಲು, ಮಹಿಳಾ ಸಂಘ ಭೂಮಾತಾ ರನ್ರಾಗಿನಿ ಬ್ರಿಗೇಡ್ (ಬಿ ಆರ್ ಬಿ)ನ 200 ಸದಸ್ಯರು ನಾಸಿಕ್ ನತ್ತ ಹೊರಟಿದ್ದಾರೆ ಎಂದು

ಪುಣೆ: ಟ್ರಿಂಬಕೇಶ್ವರ ಶಿವ ದೇವಾಲಯದ ಗರ್ಭ ಗುಡಿ ಹೊಕ್ಕಲು, ಮಹಿಳಾ ಸಂಘ ಭೂಮಾತಾ ರನ್ರಾಗಿನಿ ಬ್ರಿಗೇಡ್ (ಬಿ ಆರ್ ಬಿ)ನ 200 ಸದಸ್ಯರು ನಾಸಿಕ್ ನತ್ತ ಹೊರಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿಯವರೆಗೂ ಆ ದೇವಾಲಯದ ಗರ್ಭಗುಡಿಗೆ ಪುರುಷರಿಗೆ ಮಾತ್ರ ಪ್ರವೇಶವಿದ್ದು, ಇದನ್ನು ಈ ಮಹಿಳಾಕ್ರಕರ್ತರು ವಿರೋಧಿಸಿದ್ದಾರೆ.

ದೇಶದಾದ್ಯಂತ ಭಕ್ತಾದಿಗಳು ಸೋಮವಾರ ಮಹಾ ಶಿವರಾತ್ರಿ ಆಚರಿಸುತ್ತಿದ್ದಾರೆ. ೧೨ ಜ್ಯೋತಿರ್ಲಿಂಗಗಳನ್ನು ಒಳಗೊಂಡ ಟ್ರಿಂಬಕೇಶವರ ಪ್ರಮುಖ ಶಿವ ದೇವಾಲಯಗಳಲ್ಲಿ ಒಂದು.

"ದೇವಾಲಯಗಳ ಗರ್ಭ ಗುಡಿಯನ್ನು ಹೊಕ್ಕಲು ಮಹಿಳೆಯರಿಗೆ ನಿಷೇಧವೇಕೆ? ಯಾವುದೇ ಪೂಜಾಗೃಹವನ್ನು ಹೊಕ್ಕಲು ನಮಗೆ ಸಾಂವಾಧಾನಿಕ ಹಕ್ಕಿದೆ. . ಈ ಮಹಾಶಿವರಾತ್ರಿಯ ಪುಣ್ಯ ಸಮಯದಲ್ಲಿ ನಾವು ಈ ಕಾರ್ಯಕ್ಕೆ ಮುಂದಾಗಿದ್ದೇವೆ" ಎಂದು ಬಿ ಆರ್ ಬಿಯ ಅಧ್ಯಕ್ಷೆ ತೃಪ್ತಿ ದೇಸಾಯಿ ನಾಸಿಕ್ ನಲ್ಲಿ ಹೇಳಿದ್ದಾರೆ.

"ಅವರು ನಮ್ಮನ್ನು ತಡೆದರೆ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ನಮಗೆ ಅವಮಾನ ಮಾಡಿದಂತೆ" ಎಂದು ಅವರು ತಿಳಿಸಿದ್ದಾರೆ.

ದೇವಾಲಯದಲ್ಲಿ ಯಾವುದೇ ಘರ್ಷಣೆ ನಡೆಯದಂತೆ ತಡೆಯಲು ನಾಸಿಕ್ ಪೊಲೀಸರು ಮತ್ತು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಈ ಮಧ್ಯೆ ಬಿ ಆರ್ ಬಿ ಸಂಘದ ಈ ಕ್ರಮವನ್ನು ಟೀಕಿಸಿರುವ ನಾಸಿಕ್ ಮೂಲದ ಕೆಲವು ಮಹಿಳಾ ಸಂಘಟನೆಗಳು, ದೇವಾಲಯದ ಸಂಪ್ರದಾಯವನ್ನು ಉಳಿಸಿಕೊಳ್ಳಲು ಆಗ್ರಹಿಸಿವೆ.

ಈ ಹಿಂದೆ ಮಹಾರಾಷ್ಟ್ರದ ಅಹೆಮದಾನಗರ್ ಜಿಲ್ಲೆಯ ಶನಿ ಶಿಂಗಾಪುರ್ ದೇವಾಲಯವನ್ನು ಹೊಕ್ಕಲು ತೃಪ್ತಿ ದೇಸಾಯಿ ನೇತೃತ್ವದ ೫೦೦ ಬಿ ಆರ್ ಬಿ ಮಹಿಳಾ ಕಾರ್ಯಕರ್ತರು ಪ್ರಯತ್ನಿಸಿದ್ದರು. ಆದರೆ ಅವರನ್ನು ಅಲ್ಲಿ ತಡೆಯಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT