ಪೊಲೀಸರ ವಶದಲ್ಲಿ ತೃಪ್ತಿ ದೇಸಾಯಿ 
ಪ್ರಧಾನ ಸುದ್ದಿ

ತ್ರಯಂಬಕೇಶ್ವರ ದೇವಾಲಯ ವಿವಾದ; ತೃಪ್ತಿ ದೇಸಾಯಿ ಪೊಲೀಸರ ವಶಕ್ಕೆ

ಮಹಿಳೆಯರಿಗೆ ನಿಷೇಧವಿರುವ ಮಹಾರಾಷ್ಟ್ರದ ನಾಸಿಕ್ ನ ತ್ರಯಂಬಕೇಶ್ವರ ದೇವಾಲಯದ ಗರ್ಭಗುಡಿಗೆ ಹೊಕ್ಕಲು ತೆರಳಿದ್ದ ತೃಪ್ತಿ ದೇಸಾಯಿ ನೇತೃತ್ವದ ಭೂಮಾತಾ ಬ್ರಿಗೇಡ್ ಕಾರ್ಯಕರ್ತರನ್ನು

ನಾಸಿಕ್: ಮಹಿಳೆಯರಿಗೆ ನಿಷೇಧವಿರುವ ಮಹಾರಾಷ್ಟ್ರದ ನಾಸಿಕ್ ನ ತ್ರಯಂಬಕೇಶ್ವರ ದೇವಾಲಯದ ಗರ್ಭಗುಡಿಗೆ ಹೊಕ್ಕಲು ತೆರಳಿದ್ದ ತೃಪ್ತಿ ದೇಸಾಯಿ ನೇತೃತ್ವದ ಭೂಮಾತಾ ಬ್ರಿಗೇಡ್ ಕಾರ್ಯಕರ್ತರನ್ನು ನಂದೂರ್ ಶಿಂಗೋಟ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೇವಾಲಯ ಪ್ರವೇಶಕ್ಕೆ ಪ್ರಯತ್ನಿಸಿದ್ದ ಮಹಿಳಾ ಕಾರ್ಯಕ್ರತರನ್ನು ನೆನ್ನೆ ಕೂಡ ವಶಪಡಿಸಿಕೊಂಡ ಪೊಲೀಸರು ನಂತರ ಬಿಡುಗಡೆ ಮಾಡಿದ್ದಾರೆ.

"ಟ್ರಿಬಂಕೇಶ್ವರ ದೇವಾಲಯದ ಒಳಹೋಗುವುದರಿಂದ ನಮ್ಮನ್ನು ತಡೆಯುತ್ತಿರುವುದೇಕೆ? ಪೊಲೀಸರು ಮಾಡಿದ್ದು ತಪ್ಪು" ಎಂದು ದೇಸಾಯಿ ಪ್ರಶ್ನಿಸಿದ್ದಾರೆ.

ಪ್ರಾಚೀನ ಸಂಪ್ರದಾಯದ ಪ್ರಕಾರ ತ್ರಯಂಬಕೇಶ್ವರ ದೇವಾಲಯದ ಗರ್ಭಗುಡಿಗೆ ಮಹಿಳೆಯರಿಗೆ ಪ್ರವೇಶವಿಲ್ಲ. ಇದನ್ನು ಪ್ರಶ್ನಿಸಿ, ಸಂವಿಧಾನ ನೀಡಿರುವ ಹಕ್ಕಿನಂತ ನಮಗೆ ಒಳ ಹೋಗಲು ಪ್ರವೇಶವಿದೆ ಎಂದು ಭೂಮಾತ ಬ್ರಿಗೇಡಿನ ಸದಸ್ಯರು ಮಹಾ ಶಿವರಾತ್ರಿಯಂದು ದೇವಾಲಯವನ್ನು ಒಳಹೊಕ್ಕಲು ಪ್ರಯತ್ನಿಸಿದ್ದರು.

ಈ ಹಿಂದೆ ಮಹಾರಾಷ್ಟ್ರದ ಶನಿ ದೇವಾಲಯಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದ ತೃಪ್ತಿ ದೇಸಾಯಿ ನೇತೃತ್ವದ ಮಹಿಳಾ ಕಾರ್ಯಕರ್ತರನ್ನು ತಡೆಯಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT