ವಿಜಯ್ ಮಲ್ಯ 
ಪ್ರಧಾನ ಸುದ್ದಿ

ವಿಜಯ್ ಮಲ್ಯರ ಖಾಸಗಿ ವಿಮಾನ ಹರಾಜಿಗೆ ಸರ್ಕಾರ ನಿರ್ಧಾರ

ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ರು. 812 ಕೋಟಿ ಸೇವಾ ತೆರಿಗೆಯನ್ನು ಮಲ್ಯ ಇದುವರೆಗೆ ಪಾವತಿಸಿಲ್ಲ. ಇದರಲ್ಲಿ ಬಡ್ಡಿ ಮತ್ತು ದಂಡವೂ ಸೇರಿದ್ದು, ಈ ಮೊತ್ತವನ್ನು ವಸೂಲಿ...

ನವದೆಹಲಿ: ಬ್ಯಾಂಕ್‌ಗಳು ಮಾತ್ರವಲ್ಲ ಈಗ ಸರ್ಕಾರ ಕೂಡಾ ವಿಜಯ್ ಮಲ್ಯ ಅವರ ಬೆನ್ನ ಹಿಂದೆ ಬಿದ್ದಿವೆ. ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ರು. 812 ಕೋಟಿ ಸೇವಾ ತೆರಿಗೆಯನ್ನು ಮಲ್ಯ ಇದುವರೆಗೆ ಪಾವತಿಸಿಲ್ಲ. ಇದರಲ್ಲಿ ಬಡ್ಡಿ ಮತ್ತು ದಂಡವೂ ಸೇರಿದ್ದು, ಈ ಮೊತ್ತವನ್ನು ವಸೂಲಿ ಮಾಡುವುದಕ್ಕಾಗಿ ವಿಜಯ್ ಮಲ್ಯ ಅವರ ಆಸ್ತಿಯನ್ನು ಹರಾಜು ಹಾಕಲು ಸರ್ಕಾರ ಚಿಂತನೆ ನಡೆಸಿದೆ. ಈ ಆಸ್ತಿಗಳ ಪಟ್ಟಿಯಲ್ಲಿ ಮಲ್ಯ ಅವರ ಖಾಸಗಿ ಏರ್‌ಬಸ್ ಎಸಿಜೆ 319 ವಿಮಾನ ಕೂಡಾ ಇದೆ.  ರು. 812 ಕೋಟಿಯಲ್ಲಿ ರು.32 ಕೋಟಿ ಕಿಂಗ್‌ಫಿಶರ್ ಏರ್‌ಲೈನ್ಸ್  ಸರ್ಕಾರಕ್ಕೆ ಪಾವತಿ ಮಾಡಬೇಕಾಗಿತ್ತು.
ಇದಲ್ಲದೆ 5 ಪುಟ್ಟ ಎಟಿಆರ್ ವಿಮಾನಗಳು, ಮೂರು ಹೆಲಿಕಾಪ್ಟರ್‌ಗಳನ್ನೂ ಹರಾಜು ಮಾಡಲು ಸರ್ಕಾರ ತೀರ್ಮಾನಿಸಿದೆ. 2012ರಲ್ಲಿ ಸೇವೆ ಸ್ಥಗಿತಗೊಳಿಸಿರುವ ಕಿಂಗ್ ಫಿಶರ್ ಏರ್‌ಲೈನ್ಸ್ ಬ್ಯಾಂಕುಗಳಿಗೆ ಒಟ್ಟು ರು. 9000 ಕೋಟಿಯನ್ನು ನೀಡಬೇಕಾಗಿದೆ. ಇದೀಗ ವಿಮಾನಗಳನ್ನು ಸೇವಾ ತೆರಿಗೆ ವಿಭಾಗ ವಶ ಪಡಿಸಿಕೊಂಡಿದ್ದು, ಹರಾಜು ಪ್ರಕ್ರಿಯೆಗಳಿಗೆ ಸಿದ್ಧತೆ ನಡೆಸಲಾಗುವುದು ಎಂದು ಸೆಂಟ್ರಲ್ ಬೋರ್ಡ್ ಆಫ್ ಎಕ್ಸೈಸ್ ಆ್ಯಂಡ್ ಕಸ್ಟಮ್ಸ್ (CBEC)  ಅಧಿಕಾರಿಗಳು ಹೇಳಿದ್ದಾರೆ.  ಹರಾಜು ಬೆಲೆಯನ್ನು ಸರ್ಕಾರದ ಎಂಎಸ್‌ಟಿಸಿ ಲಿಮಿಟೆಡ್ ತೀರ್ಮಾನ ಕೈಗೊಳ್ಳಲಿದೆ. ಮೇ  15-16 ತಾರೀಖಿನಂದು ಹರಾಜು ಪ್ರಕ್ರಿಯೆ ನಡೆಯಲಿದೆ.
ಅದೇ ವೇಳೆ ಮಲ್ಯ ಅವರ ಖಾಸಗಿ ವಿಮಾನವನ್ನು ಗುತ್ತಿಗೆ ನೀಡಲಾಗಿದೆ. ವಿಮಾನದ ಹಕ್ಕು ಸ್ಥಾಪಿಸಿ ಇಲ್ಲಿವರೆಗೆ ಯಾರೂ ಅಧಿಕಾರಿಗಳನ್ನಾಗಲೀ ನ್ಯಾಯಾಲಯವನ್ನಾಗಲೀ ಸಮೀಪಿಸಿಲ್ಲ.
ಸೇವಾ ತೆರಿಗೆ ಪಾವತಿ ಮಾಡದಿರುವುದರಿಂದ ಮಲ್ಯ ಅವರನ್ನು ಬಂಧಿಸಬೇಕೆಂದು ತೆರಿಗೆ ಇಲಾಖೆ ಕಳೆದ ವರ್ಷವೇ ಒತ್ತಾಯಿಸಿತ್ತು. ಆದರೆ ರು. 50 ಲಕ್ಷ ವೈಯಕ್ತಿಕ ಬಾಂಡ್ ನೀಡಿ ಮಲ್ಯ ಈ ಬಂಧನದಿಂದ ಬಚಾವ್ ಆಗಿದ್ದರು. ಅಷ್ಟೇ ಅಲ್ಲದೆ ಮಲ್ಯ ದೇಶ ಬಿಡುವ ಸಾಧ್ಯತೆಗಳಿರುವುದರಿಂದ ಅವರ ಪಾಸ್‌ಪೋರ್ಟ್‌ನ್ನೂ ವಶ ಪಡಿಸಬೇಕೆಂದು ತೆರಿಗೆ ಇಲಾಖೆ ಹೇಳಿತ್ತು. 
ಆದರೆ ಅಗತ್ಯವೆನಿಸಿದಾಗ ಅವರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು ಎಂದು ಹೇಳಿ 2015 ಫೆಬ್ರವರಿ 16ರಂದು ನ್ಯಾಯಾಲಯ ತೆರಿಗೆ ಇಲಾಖೆಯ ವಾದವನ್ನು ತಳ್ಳಿ ಹಾಕಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT