ನರೇಂದ್ರ ಮೋದಿ 
ಪ್ರಧಾನ ಸುದ್ದಿ

ಮೋದಿ ಅಧಿಕಾರಕ್ಕೇರುವುದಾಗಿ 1555 ರಲ್ಲೇ ಭವಿಷ್ಯ ನುಡಿದಿದ್ದ ನಾಸ್ಟ್ರಡಾಮಸ್

ನರೇಂದ್ರ ಮೋದಿ ಅವರು 2014ರಿಂದ 2026ರ ವರೆಗೆ ಭಾರತದಲ್ಲಿ ಅಧಿಕಾರ ಚಲಾಯಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರಂತೆ....

ನವದೆಹಲಿ: ನರೇಂದ್ರ ಮೋದಿ ಅವರು  2014ರಿಂದ 2026ರ ವರೆಗೆ ಭಾರತದಲ್ಲಿ ಅಧಿಕಾರ ಚಲಾಯಿಸಲಿದ್ದಾರೆ ಎಂದು ಫ್ರಾನ್ಸ್  ಪ್ರವಾದಿ ಭವಿಷ್ಯ ನುಡಿದಿದ್ದರಂತೆ. ಈ ಭವಿಷ್ಯವಾಣಿಯನ್ನು ಗೃಹ ಸಚಿವಾಲಯದ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಅಮೇಜಿಂಗ್ ಫ್ಯಾಕ್ಟ್ಸ್ ಎಂದು ಬರೆದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ರಿಜಿಜು ಪೋಸ್ಟ್  ಹೀಗಿದೆ.
ಈಗಿನ ಲೋಕಸಭೆಯಲ್ಲಿ :
ಬಿಜೆಪಿ - 283 ಸ್ಥಾನ :  2 + 8 + 3 = 13
ಎನ್‌ಡಿಎ - 337 ಸ್ಥಾನ : 3 + 3 +7 = 13
ಯುಪಿಎ - 58 : 5 + 8 = 13
ಇತರರು - 148 : 1 + 4 + 8 = 13
ನಾಸ್ಟ್ರಡಾಮಸ್ 450 ವರ್ಷಗಳ ಹಿಂದೆ ನುಡಿದಿದ್ದ ಭವಿಷ್ಯ ಪ್ರಕಾರ ಭಾರತದಲ್ಲಿ ನರೇಂದ್ರ ಮೋದಿ ಯುಗ ಆರಂಭವಾಗುವುದಕ್ಕೆ ಸಂಖ್ಯಾಶಾಸ್ತ್ರದ ಪ್ರಕಾರ ಈ 13ರ ಸಂಗಮವು ಮಹತ್ವದ್ದಾಗಿದೆ.
ಫ್ರೆಂಚ್  ಪ್ರವಾದಿಯ ಭವಿಷ್ಯ ಪ್ರಕಾರ 2014 ರಿಂದ 2026ರವರೆಗೆ ಭಾರತವನ್ನು ಮುನ್ನಡೆಸುವ ಆ ವ್ಯಕ್ತಿಯನ್ನು ಮೊದಲಿಗೆ ಜನರು ದ್ವೇಷಿಸುತ್ತಾರೆ. ಅನಂತರ ಆ ವ್ಯಕ್ತಿಯನ್ನು ಜನರು ತುಂಬಾ ಪ್ರೀತಿಸಲು ತೊಡಗುತ್ತಾರೆ. ಆ ವ್ಯಕ್ತಿ ದೇಶದ ದಿಕ್ಕು ದೆಸೆಯನ್ನೇ ಬದಲಿಸಲಿದ್ದಾರೆ.
16ನೇ ಶತಮಾನದಲ್ಲಿ ಬದುಕಿದ್ದ ಫ್ರೆಂಚ್ ಪ್ರವಾದಿ ಮೈಕಲ್ ಡಿ ನಾಸ್ಟ್ರಡಾಮಸ್ ಈ ರೀತಿ ಭವಿಷ್ಯ ನುಡಿದಿದ್ದು 1555ನೇ ಇಸವಿಯಲ್ಲಿ. ಮಧ್ಯ ವಯಸ್ಸಿನ ಆ ವ್ಯಕ್ತಿ ದೇಶದಲ್ಲಿ ಮಾತ್ರವಲ್ಲ ಇಡೀ ಜಗತ್ತಿಗೇ ಸುವರ್ಣಕಾಲವನ್ನು ತರಲಿದ್ದಾರೆ. ಆತನ ನಾಯಕತ್ವದಲ್ಲಿ ಭಾರತ ಜಾಗತಿಕ ನಾಯಕ ಆಗುವುದಲ್ಲದೆ ಹಲವಾರು ದೇಶಗಳು ಭಾರತದಡಿ ಆಸರೆ ಪಡೆಯುತ್ತವೆ ಎಂದು ಭವಿಷ್ಯ ನುಡಿದಿರುವುದಾಗಿ ಎಂದು  ಪೋಸ್ಟ್ನಲ್ಲಿ ಹೇಳಲಾಗಿದೆ. ಈ ಪೋಸ್ಟ್ನ ಜತೆಗೆ ಜರ್ಮನ್ ಚಾನ್ಸೆಲರ್ ಆಂಜೆಲಾ ಮೇರ್ಕಲ್ ಅವರು ದೆಹಲಿಗೆ ಬಂದಾಗ ಮೋದಿಯವರೊಂದಿಗೆ ತೆಗೆಸಿಕೊಂಡ ಫೋಟೋವನ್ನು ರಿಜಿಜು ಶೇರ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT