ಸಂಜಯ್ ರೌತ್ 
ಪ್ರಧಾನ ಸುದ್ದಿ

ಲಷ್ಕರೆ ಹಿಟ್ ಲಿಸ್ಟ್‌ನಲ್ಲಿ ಭಾಳ್ ಠಾಕ್ರೆ ಹೆಸರು ಇತ್ತು ಎಂಬುದರ ಬಗ್ಗೆ ಹೆಮ್ಮೆಯಿದೆ: ಶಿವಸೇನೆ

ಉಗ್ರ ಸಂಘಟನೆಯಾದ ಲಷ್ಕರೆ ತೊಯ್ಬಾ ದ ಹಿಟ್ ಲಿಸ್ಟ್‌ನಲ್ಲಿ ಭಾಳ್ ಠಾಕ್ರೆಯವರ ಹೆಸರು ಇತ್ತು ಎಂಬುದರ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಶಿವಸೇನಾ...

ಮುಂಬೈ: ಉಗ್ರ ಸಂಘಟನೆಯಾದ ಲಷ್ಕರೆ ತೊಯ್ಬಾ ದ ಹಿಟ್ ಲಿಸ್ಟ್‌ನಲ್ಲಿ ಭಾಳ್ ಠಾಕ್ರೆಯವರ ಹೆಸರು ಇತ್ತು ಎಂಬುದರ ಬಗ್ಗೆ  ನಮಗೆ ಹೆಮ್ಮೆಯಿದೆ ಎಂದು ಶಿವಸೇನಾ ನಾಯಕ ಸಂಜಯ್ ರೌತ್ ಗುರುವಾರ ಹೇಳಿದ್ದಾರೆ.  
ಅಪ್ಪಟ ದೇಶಪ್ರೇಮಿಯಾಗಿರುವ ಠಾಕ್ರೆಯವರು ಪಾಕಿಸ್ತಾನದ ಉಗ್ರ ಕೃತ್ಯಗಳನ್ನು ಖಂಡಿಸುತ್ತಲೇ ಇದ್ದರು. ಹಾಗಿರುವ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲು ಉಗ್ರರು ಯೋಜನೆ ಹೂಡಿದ್ದರಲ್ಲಿ ಅಚ್ಚರಿಯೇನಿಲ್ಲ ಎಂದು ರೌತ್  ಅಭಿಪ್ರಾಯ ಪಟ್ಟಿದ್ದಾರೆ. 
ಶಿವಸೇನೆಯ ಮುಖ್ಯಸ್ಥ ಭಾಳ್ ಠಾಕ್ರೆಯನ್ನು ಹತ್ಯೆ ಮಾಡಲು ಲಷ್ಕರೆ ಬಾಡಿಗೆ ಗೂಂಡಾಗಳನ್ನು ನಿಯೋಜಿಸಿತ್ತು. ಆದರೆ ಆ ಯೋಜನೆ ಕೈ ಜಾರಿತ್ತು. ಇದಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಒಬ್ಬನನ್ನು ವಶ ಪಡಿಸಿದ್ದು, ಆತ ಅಲ್ಲಿಂದ ತಪ್ಪಿಸಿಕೊಂಡಿದ್ದ. ಈ ವಿಷಯವನ್ನು ಪೊಲೀಸ್ ಬಚ್ಚಿಟ್ಟದ್ದು ಯಾಕೆ?. ಆತ ಪೊಲೀಸ್ ಬಂಧನದಿಂದ ತಪ್ಪಿಸಿಕೊಂಡಿದ್ದು ಹೇಗೆ? ಇದರ ಹಿಂದೆ ಪೊಲೀಸ್ ಗೂಢಾಲೋಚನೆಗಳಿವೆ? ಇದಕ್ಕೆಲ್ಲಾ ಪೊಲೀಸರು ಮತ್ತು ಸರ್ಕಾರ ಉತ್ತರಿಸಬೇಕಾಗಿದೆ ಎಂದು ರೌತ್ ಒತ್ತಾಯಿಸಿದ್ದಾರೆ.
ಬಾಳ್ ಠಾಕ್ರೆಯನ್ನು ಹತ್ಯೆಗೈಯ್ಯಲು ಪಾಕ್ ಉಗ್ರ ಸಂಘಟನೆ ಲಷ್ಕರೆ ಸಂಚು ಹೂಡಿತ್ತು ಎಂದು ಡೇವಿಡ್ ಹೆಡ್ಲಿ ಹೇಳಿದ್ದರ ಹಿನ್ನಲೆಯಲ್ಲಿ ರೌತ್ ಈ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT