ಮಧ್ಯಪ್ರದೇಶ: ಮಧ್ಯಪ್ರದೇಶದ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಮಾಜಿ ಪ್ರಧಾನಿ ದಿವಂಗತ ನೆಹರು ಅವರನ್ನು ಹೊಗಳಿದ ಹಿನ್ನೆಲೆಯಲ್ಲಿ ವರ್ಗಾವಣೆ ಗೊಂಡಿರುವ ಘಟನೆ ನಡೆದಿದೆ.
ಅಜಯ್ ಸಿಂಗ್ ಗ್ಯಾಂಗ್ ವಾರ್ ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ವೈರಲ್ ಆದ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆಗಳಿಸಲಾಗಿದೆ. ನಂತರ ಹಿಂದಿಯಲ್ಲಿ ಹಾಕಿದ್ದ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿದೆ.
ಜವಹರ್ ಲಾಲ್ ನೆಹರು ಅವರು ಮಾಡಿದ್ದ ತಪ್ಪಾದರೂ ಏನು, ಹಿಂದೂ ತಾಲಿಬಾನ್ ರಾಷ್ಟ್ರದಿಂದ ನಮ್ಮನ್ನು ರಕ್ಷಿಸಿದ್ದು ತಪ್ಪಾಯಿತೇ? ಐಐಟಿ, ಇಸ್ರೋ, ಬಿಎಆರ್ ಸಿ, ಬಿಎಚ್ ಇಎಲ್, ಸೇರಿದಂತೆ ಹಲವು ಸ್ಟೀಲ್ ಫ್ಲಾಂಟ್ ಗಳ, ಜಲಾಶಯಗಳು, ಶಕ್ತಿ ಉತ್ಪನ್ನ ಕೇಂದ್ರಗಳನ್ನು ಸ್ಥಾಪಿಸಿದ್ದು ಅವರ ತಪ್ಪೇ ಎಂದು ಪ್ರಶ್ನಿಸಿದ್ದಾರೆ.
ಹೀಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ಸ್ಟೇಟಸ್ ಅನ್ನು ಸಾವಿರಾರು ಮಂದಿ ಶೇರ್ ಮಾಡಿದ್ದರು. ಸೇವಾ ನಿಯಮ ಉಲ್ಲಂಘನೆ ಆರೋಪದ ಮೇಲೆ ಅವರನ್ನು ವರ್ಗಾವಣೆ ಮಾಡಲಾಗಿದೆ. ಕಳೆದ ಆಗಸ್ಟ್ ನಲ್ಲಿ ಗಾಂಗ್ವಾರ್ ಬದ್ವಾನಿ ಗೆ ನಿಯುಕ್ತಿಗೊಂಡಿದ್ದರು. ಏಕಾಏಕಿ ವರ್ಗಾವಣೆ ಮಾಡಿರುವ ಸರ್ಕಾರ ಯಾವುದೇ ವಿವರಣೆ ನೀಡಿಲ್ಲ.
ಇದನ್ನು ವಿರೋಧಿಸಿರುವ ಕಾಂಗ್ರೆಸ್, ಶಿವರಾಜ್ ಸಿಂಗ್ ಚೌಹಾನ್ ಸರ್ಕಾರದ ಅಸಹಿಷ್ಣುತೆ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ