ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಇಬ್ಬರು ಭಾರತೀಯ ರಾಯಭಾರಿ ಅಧಿಕಾರಿಗಳನ್ನು ಉಚ್ಛಾಟಿಸಲು ಮುಂದಾದ ಪಾಕಿಸ್ತಾನ

ಇಸ್ಲಮಾಬಾದಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳು ಆರ್ ಎ ಡಬ್ಲ್ಯೂ ಏಜೆಂಟ್ ಗಳೆಂದು ದೂರಿ ಅವರನ್ನು ಉಚ್ಛಾಟಿಸಲು ಪಾಕಿಸ್ತಾನ ಬುಧವಾರ

ಇಸ್ಲಮಾಬಾದ್: ಇಸ್ಲಮಾಬಾದಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳು ಆರ್ ಎ ಡಬ್ಲ್ಯೂ ಏಜೆಂಟ್ ಗಳೆಂದು ದೂರಿ ಅವರನ್ನು ಉಚ್ಛಾಟಿಸಲು ಪಾಕಿಸ್ತಾನ ಬುಧವಾರ ಮುಂದಾಗಿದೆ. 
ಪಾಕಿಸ್ತಾನ ಟುಡೇ ವರದಿ ತಿಳಿಸಿರುವಂತೆ "ರಾಯಭಾರ ಅಧಿಕಾರಿಗಳ ವೇಷದಲ್ಲಿ, ಪಾಕಿಸ್ತಾನದಿಂದ ಉಗ್ರ ದಳವನ್ನು ಇಬ್ಬರು ಆರ್ ಎ ಡಬ್ಲ್ಯೂ ಏಜೆಂಟ್ ಗಳು ಮುನ್ನಡೆಸುತ್ತಿದ್ದಾರೆ" ಎಂದಿದೆ. 
ಈ ಇಬ್ಬರು ರಾಜೇಶ್ ಕುಮಾರ್ ಅಗ್ನಿಹೋತ್ರಿ ಮತ್ತು ಬಲೀರ್ ಸಿಂಗ್ ಎಂದು ತಿಳಿಯಲಾಗಿದೆ. ಅವರು ಕ್ರಮವಾಗಿ ಕಮರ್ಷಿಯಲ್ ಕೌಂಸೆಲ್ಲರ್ ಮತ್ತು ಮಾಧ್ಯಮ ಮಾಹಿತಿ ಕಾರ್ಯದರ್ಶಿ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 
"ಉಗ್ರ ಚಟುವಟಿಕೆಗಳಿಗೆ ಸಂಪನ್ಮೂಲ ಒದಗಿಸಿ ಪಾಕಿಸ್ತಾನವನ್ನು ಅಸ್ಥಿರಗೊಳಿಸುವ ಯೋಜನೆಯನ್ನು ಈ ಇಬ್ಬರು ರಾಯಭಾರಿ ಅಧಿಕಾರಿಗಳು ಹಾಕಿಕೊಂಡದ್ದು ಪತ್ತೆ ಹಚ್ಚಲಾಗಿದೆ" ಎಂದು ಮಾಧ್ಯಮ ವರದಿ ಮಾಡಿದೆ. 
ಮೂಲಗಳ ಪ್ರಕಾರ ಇತ್ತೀಚೆಗಷ್ಟೇ ಉಚ್ಛಾಟಿತರಾದ ಭಾರತೀಯ ರಾಯಭಾರಿ ಅಧಿಕಾರಿ ಸುರ್ಜಿತ್ ಸಿಂಗ್ ಕೂಡ ಈ ಕೂಟದಲ್ಲಿ ಭಾಗಿಯಾಗಿದ್ದರು ಎಂದು ಮಾಧ್ಯಮ ವರದಿ ಮಾಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT