ಇಸ್ಲಮಾಬಾದ್: ಇಸ್ಲಮಾಬಾದಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳು ಆರ್ ಎ ಡಬ್ಲ್ಯೂ ಏಜೆಂಟ್ ಗಳೆಂದು ದೂರಿ ಅವರನ್ನು ಉಚ್ಛಾಟಿಸಲು ಪಾಕಿಸ್ತಾನ ಬುಧವಾರ ಮುಂದಾಗಿದೆ.
ಪಾಕಿಸ್ತಾನ ಟುಡೇ ವರದಿ ತಿಳಿಸಿರುವಂತೆ "ರಾಯಭಾರ ಅಧಿಕಾರಿಗಳ ವೇಷದಲ್ಲಿ, ಪಾಕಿಸ್ತಾನದಿಂದ ಉಗ್ರ ದಳವನ್ನು ಇಬ್ಬರು ಆರ್ ಎ ಡಬ್ಲ್ಯೂ ಏಜೆಂಟ್ ಗಳು ಮುನ್ನಡೆಸುತ್ತಿದ್ದಾರೆ" ಎಂದಿದೆ.
ಈ ಇಬ್ಬರು ರಾಜೇಶ್ ಕುಮಾರ್ ಅಗ್ನಿಹೋತ್ರಿ ಮತ್ತು ಬಲೀರ್ ಸಿಂಗ್ ಎಂದು ತಿಳಿಯಲಾಗಿದೆ. ಅವರು ಕ್ರಮವಾಗಿ ಕಮರ್ಷಿಯಲ್ ಕೌಂಸೆಲ್ಲರ್ ಮತ್ತು ಮಾಧ್ಯಮ ಮಾಹಿತಿ ಕಾರ್ಯದರ್ಶಿ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
"ಉಗ್ರ ಚಟುವಟಿಕೆಗಳಿಗೆ ಸಂಪನ್ಮೂಲ ಒದಗಿಸಿ ಪಾಕಿಸ್ತಾನವನ್ನು ಅಸ್ಥಿರಗೊಳಿಸುವ ಯೋಜನೆಯನ್ನು ಈ ಇಬ್ಬರು ರಾಯಭಾರಿ ಅಧಿಕಾರಿಗಳು ಹಾಕಿಕೊಂಡದ್ದು ಪತ್ತೆ ಹಚ್ಚಲಾಗಿದೆ" ಎಂದು ಮಾಧ್ಯಮ ವರದಿ ಮಾಡಿದೆ.
ಮೂಲಗಳ ಪ್ರಕಾರ ಇತ್ತೀಚೆಗಷ್ಟೇ ಉಚ್ಛಾಟಿತರಾದ ಭಾರತೀಯ ರಾಯಭಾರಿ ಅಧಿಕಾರಿ ಸುರ್ಜಿತ್ ಸಿಂಗ್ ಕೂಡ ಈ ಕೂಟದಲ್ಲಿ ಭಾಗಿಯಾಗಿದ್ದರು ಎಂದು ಮಾಧ್ಯಮ ವರದಿ ಮಾಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos