ಡಿ ಎಂ ಕೆ ಮುಖಂಡ ಸ್ಟಾಲಿನ್ 
ಪ್ರಧಾನ ಸುದ್ದಿ

ಜನರ ತೊಂದರೆಯ ಬಗ್ಗೆ ಸಹಾನುಭೂತಿ ಕೂಡ ತೋರಿಸದ ಜಯಲಲಿತಾ: ಸ್ಟಾಲಿನ್

ತಮಿಳುನಾಡು ವಿಧಾನಸಭಾ ವಿರೋಧಪಕ್ಷದ ಅಧ್ಯಕ್ಷ, ಡಿ ಎಂ ಕೆ ಮುಖಂಡ ಸ್ಟಾಲಿನ್, ನೋಟು ಹಿಂಪಡೆತದಿಂದ ತೊಂದರೆಗೆ ಒಳಗಾಗಿರುವ ಜನರ ತೊಂದರೆಗಳಿಗೆ ಮುಖ್ಯಮಂತ್ರಿ ಜಯಲಲಿತಾ

ಚೆನ್ನೈ: ತಮಿಳುನಾಡು ವಿಧಾನಸಭಾ ವಿರೋಧಪಕ್ಷದ ಅಧ್ಯಕ್ಷ, ಡಿ ಎಂ ಕೆ ಮುಖಂಡ ಸ್ಟಾಲಿನ್, ನೋಟು ಹಿಂಪಡೆತದಿಂದ ತೊಂದರೆಗೆ ಒಳಗಾಗಿರುವ ಜನರ ತೊಂದರೆಗಳಿಗೆ ಮುಖ್ಯಮಂತ್ರಿ ಜಯಲಲಿತಾ ಸಹಾನುಭೂತಿ ಕೊಡ ತೋರಿಸದೆ, ಕೇವಲ ಮತಗಳ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 
ಭಾನುವಾರ ಜಯಲಲಿತಾ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಸ್ಟಾಲಿನ್ ಜನರಿಗೆ ಸದ್ಯಕ್ಕೆ ಹಣ ದೊರೆಯದೆ ಅಗತ್ಯ ವಸ್ತುಗಳನ್ನು ಕೂಡ ಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ ಮತ್ತು ಮುಖ್ಯಮಂತ್ರಿಯವರ ಮಾತುಗಳು ಜನರ ಈ ತೊಂದರೆಗೆ ಸಮಾಧಾನ ಕೂಡ ಹೇಳುವುದಿಲ್ಲ ಎಂದಿದ್ದಾರೆ. 
ಭಾನುವಾರ ಹೇಳಿಕೆ ನೀಡಿದ್ದ ಜಯಲಲಿತಾ, ಜನರ ಪ್ರಾರ್ಥನೆಯಿಂದಾಗಿ ಮರುಹುಟ್ಟು ಪಡೆದಿದ್ದೇನೆ ಎಂದಿದ್ದಲ್ಲದೆ ಮುಂದಿನ ಉಪ ಚುನಾವಣೆಗಳಲ್ಲಿ ಎ ಐ ಡಿ ಎಂ ಕೆ ಪಕ್ಷದ ಗೆಲುವಿಗಾಗಿ ಶ್ರಮಿಸುವಂತೆ ಜನರಲ್ಲಿ ಕೋರಿದ್ದರು. 
ಶೀಘ್ರ ಸಂಪೂರ್ಣ ಗುಣಮುಖವಾಗಿ ಮತ್ತೆ ಕೆಲಸಕ್ಕೆ ಹಾಜರಾಗಲು ಕಾಯುತ್ತಿದ್ದೇನೆ ಎಂದು ಕೂಡ ಅವರು ಹೇಳಿದ್ದರು. ಸೆಪ್ಟೆಂಬರ್ ೨೨ ರಿಂದ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಲಲಿತಾ ಅವರನ್ನು ಇನ್ನು ಡಿಸ್ಚಾರ್ಜ್ ಮಾಡಬೇಕಿದೆ. 
ಕೇಂದ್ರ ಸರ್ಕಾರದ ನೋಟು ಹಿಂಪಡೆತದ ನಿರ್ಧಾರವನ್ನು ಸ್ವಾಗತಿಸಿದ್ದರು ಇದರಿಂದ ಸಮಾನ್ಯ ಜನಕ್ಕೆ ಸಾಕಷ್ಟು ತೊಂದರೆಗಳಾಗಿವೆ ಎಂದಿದ್ದಾರೆ ಸ್ಟಾಲಿನ್. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ