ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ದೆಹಲಿಯಲ್ಲಿ ತನ್ನ ಮಕ್ಕಳನ್ನೇ ಕೊಂದ ಖಿನ್ನ ವ್ಯಕ್ತಿ

ದೆಹಲಿಯ ಮಹೇಂದ್ರ ಪಾರ್ಕ್ ನ ೪೩ ವರ್ಷದ ನಿವಾಸಿ ತನ್ನಿಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದ ಘಟನೆ ಬುಧವಾರ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ನವದೆಹಲಿ: ದೆಹಲಿಯ ಮಹೇಂದ್ರ ಪಾರ್ಕ್ ನ ೪೩ ವರ್ಷದ ನಿವಾಸಿ ತನ್ನಿಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದ ಘಟನೆ ಬುಧವಾರ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. 
ಈ ಘಟನೆ ಬೆಳಗಿನ ಜಾವ ಆರು ಘಂಟೆಗೆ ನಡೆದಿದ್ದು ಮುಖೇಶ್ ಎಂಬಾತ ತನ್ನ ಪುತ್ರರಾದ ೧೫ ವರ್ಷದ ಆಯುಷ್ ಮತ್ತು ೮ ವರ್ಷದ ಆರ್ಯನ್ ಎಂಬುವವರನ್ನು ಹಗ್ಗದ ಸಹಾಯದಿಂದ ಕುತ್ತಿಗೆ ಹಿಸುಕಿ ಸಾಯಿಸಿದ್ದಾಗಿ ಪೊಲೀಸರಲ್ಲಿ ಒಪ್ಪಿಕೊಂಡಿದ್ದಾನೆ. 
ಒಂದೂ ವರೆ ವರ್ಷದ ಹಿಂದೆ ತನ್ನ ಪತ್ನಿ ಮೃತಳಾದಾಗಿಲಿಂದಲೂ ಮುಖೇಶ್ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. 
"ಅವನು ನಿರುದ್ಯೋಗಿಯಾಗಿದ್ದ ಮತ್ತು ಮಹೇಂದ್ರ ಪಾರ್ಕ್ ನ ಸಂಜಯ್ ನಗರದ ಮನೆಯಲ್ಲಿ ತನ್ನಿಬ್ಬರು ಪುತ್ರರೊಂದಿಗೆ ನೆಲೆಸಿದ್ದ" ಎಂದು ಪೊಲೀಸ್ ಉಪ ಕಮಿಷನರ್ ವಿಜಯ್ ಸಿಂಗ್ ಹೇಳಿದ್ದಾರೆ.
ಒಂದು ತಿಂಗಳ ಹಿಂದೆ ತನ್ನ ಮನೆಯ ಆವರಣದಲ್ಲಿ ಕಟ್ಟಿದ್ದ ಕಟ್ಟಡ ಅಕ್ರಮವಾಗಿದ್ದು, ಅದನ್ನು ದೆಹಲಿ ಮುನ್ಸಿಪಾಲ್ ಕಾರ್ಪೊರೇಷನ್ ನೆಲಸಮ ಮಾಡಲಿದೆ ಎಂಬ ವಿಷಯಕ್ಕೂ ಮುಖೇಶ್ ಭಯಭೀತನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. 
ಪೊಲೀಸರು ಮುಖೇಶ್ ನನ್ನ ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ. ಆಯುಷ್ ೧೦ ನೇ ತರಗತಿಯ ಮತ್ತು ಆರ್ಯನ್ ೮ ನೇ ತರಗತಿಯ ವಿದ್ಯಾರ್ಥಿಗಳಾಗಿದ್ದರು ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್