ಪ್ರಧಾನ ಸುದ್ದಿ

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದು ಮಾಧ್ಯಮಗಳ ಜವಾಬ್ದಾರಿ: ಪ್ರಧಾನಿ

Guruprasad Narayana
ನವದೆಹಲಿ: ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಅಗತ್ಯತೆಯನ್ನು ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವುಗಳ ಮೇಲೆ ಬಾಹ್ಯ ಒತ್ತಡ ಸಮಾಜಕ್ಕೆ ಒಳ್ಳೆಯದಲ್ಲ ಎಂದು ಬುಧವಾರ ಹೇಳಿದ್ದಾರೆ. 
"ತೀವ್ರ ನಿಯಂತ್ರಣ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದಕ್ಕೆ ಸಹಕರಿಸುವುದಿಲ್ಲ" ಎಂದು ದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಮಾಧ್ಯಮ ದಿನಾಚರಣೆಯ ಅಂಗವಾಗಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. 
ಇತ್ತೀಚಿಗೆ ಕೆಲವು ಮಾಧ್ಯಮ ವ್ಯಕ್ತಿಗಳನ್ನು ಕೊಲೆ ಮಾಡಿರುವ ವಿಷಯದ ಬಗ್ಗೆ ಮಾತನಾಡಿದ ಮೋದಿ "ಎಲ್ಲ ಸಾವುಗಳು ಕಳವಳಕಾರಿ ಆದರೆ ಸತ್ಯ ಹೇಳಿದ್ದಕ್ಕೆ ಪತ್ರಕರ್ತರು ಪ್ರಾಣ ಕಳೆದುಕೊಳ್ಳುವುದು ಇನ್ನು ಗಂಭೀರ ಎಂದು" ಎಂದಿದ್ದಾರೆ. 
SCROLL FOR NEXT