ಪ್ರಧಾನ ಸುದ್ದಿ

ಪೋಷಕರಿಗೆ ಹಣ ಕಳಿಸಿದ ಶಂಕೆ; ಪತ್ನಿಗೆ ಗುಂಡು ಹಾರಿಸಿ ಕೊಂದ ಪತಿ

Guruprasad Narayana
ಬಿಂಧ್: ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಹಣವನ್ನು ತನ್ನ ಪೋಷಕರಿಗೆ ಕಳುಹಿಸಿದ್ದಾರೆ ಎಂದು ಶಂಕಿಸಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಕೊಂದಿದ್ದಾನೆ ಎಂದು ಆರೋಪಿಸಿ ಪೊಲೀಸರು ಅವನನ್ನು ಬಂಧಿಸಿದ್ದಾರೆ. 
ಜೌರಿ ಆಹಿರ್ ಗ್ರಾಮದಲ್ಲಿ ಇದೇ ವಿಷಯಕ್ಕೆ ಈ ಜೋಡಿ ಜಗಳ ಮಾಡಿಕೊಂಡಿದ್ದಾರೆ ನಂತರ ಪತ್ನಿಗೆ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ಬಿಂಧ್ ಎಸ್ ಪಿ ನವನೀತ್ ಭಾಸಿನ್ ಹೇಳಿದ್ದಾರೆ. 
ಆರೋಪಿಯನ್ನು ಅರವಿಂದ್ ಸಿಂಗ್ ಯಾದವ್ (೫೦) ಎಂದು ಗುರುತಿಸಲಾಗಿದ್ದು ಪರವಾನಗಿ ಹೊಂದಿದ್ದ ಬಂಧೂಕಿನಿಂದ ಪತ್ನಿ ಗೀತಾಗೆ (೪೭) ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.
ಸಂತ್ರಸ್ತೆಯ ಪುತ್ರನ ಹೇಳಿಕೆಯ ಮೇರೆಗೆ ಪೊಲೀಸರು ಅರವಿಂದ್ ನ ಬಂಧೂಕು ವಶಪಡಿಸಿಕೊಂಡು, ಅವನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
SCROLL FOR NEXT