ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ನಗದು ಬಿಕ್ಕಟ್ಟು; ಮಣಿಪುರದಲ್ಲಿ ಬ್ಯಾಂಕ್ ಗಳು ಧ್ವಂಸ

ನಗದು ಇಲ್ಲ ಎಂಬ ಕಾರಣ ನೀಡಿ, ಮಿತಿಯಿರುವ ೨೪೦೦೦ ರೂ ದುಡ್ಡು ಕೂಡ ಹಿಂಪಡೆಯಲು ಬಿಡದ ಎಸ್ ಬಿ ಐ ಬ್ಯಾಂಕ್ ಘಟಕಗಳ ಮೇಲೆ ಕುಪಿತಗೊಂಡ ಗ್ರಾಹಕರು ದಾಳಿ ಮಾಡಿ ಧ್ವಂಸಗೊಳಿಸಿದ

ಇಂಫಾಲ್: ನಗದು ಇಲ್ಲ ಎಂಬ ಕಾರಣ ನೀಡಿ, ಮಿತಿಯಿರುವ ೨೪೦೦೦ ರೂ ದುಡ್ಡು ಕೂಡ ಹಿಂಪಡೆಯಲು ಬಿಡದ ಎಸ್ ಬಿ ಐ ಬ್ಯಾಂಕ್ ಘಟಕಗಳ ಮೇಲೆ ಕುಪಿತಗೊಂಡ ಗ್ರಾಹಕರು ದಾಳಿ ಮಾಡಿ ಧ್ವಂಸಗೊಳಿಸಿದ ಘಟನೆಗಳು ಮಣಿಪುರದಲ್ಲಿ ದಾಖಲಾಗಿವೆ. 
ಒಂದು ಕಡೆ ನಡೆದ ಗಲಭೆಯಲ್ಲಿ ಪೊಲೀಸ್ ಪೇದೆಯೊಬ್ಬರಿಗೆ ಗಾಯವಾಗಿದೆ. ಮತ್ತೊಂದು ಕಡೆ ಬ್ಯಾಂಕ್ ನ ಕಿಟಕಿ ಮತ್ತು ಬಾಗಿಲಿನ ಗಾಜುಗಳನ್ನು ಒಡೆಯಲಾಗಿದೆ. ಈ ಘಟನೆಗಳಲಿಗೆ ಸಂಬಂಧಿಸದಂತೆ ಯಾರನ್ನು ಬಂಧಿಸಲಾಗಿಲ್ಲ. 
ಮಣಿಪುರ ವಿಶ್ವವಿದ್ಯಾಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಘಟಕದಲ್ಲಿ, ೨೪೦೦೦ ರೂ ಹಣ ಹಿಂಪಡೆಯಲು ನಿರಾಕರಿಸಿರುವುದರಿಂದ ಈ ಗಲಾಟೆಗೆ ಕಾರಣವಾಗಿದೆ. 
ವಾರಕ್ಕೆ ೨೪೦೦೦ ರೂ ಹಿಂಪಡೆಯುವ ಅವಕಾಶವನ್ನು ಆರ್ ಬಿ ಐ ನೀಡಿದ್ದರು, ನಗದು ಮುಗಿದುಹೋಗುತ್ತಿರುವ ಕಾರಣ ಬ್ಯಾಂಕ್ ಗಳು ಆ ಮೊತ್ತವನ್ನು ನೀಡಲು ನಿರಾಕರಿಸುತ್ತಿರುವುದು ಸಾಮಾನ್ಯವಾಗಿದೆ. 
ನವೆಂಬರ್ ೮ ರಿಂದ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ಕ್ರಮವನ್ನು ಕೇಂದ್ರ ಸರ್ಕಾರ ಘೋಷಿಸಿದ್ದಾಗಿಲಿಂದಲೂ ದೇಶದಾದ್ಯಂತ ಜನ ತಮ್ಮ ಹಣ ಪಡೆಯಲು ದೊಡ್ಡ ದೊಡ್ಡ ಸಾಲುಗಳಲ್ಲಿ ನಿಂತು ಆಕ್ರೋಶ ವ್ಯಕ್ತಪಡಿಸುತ್ತಿರುವ ಘಟನೆಗಳು ಸಾಮಾನ್ಯವಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT