ಲಾಲು ಪ್ರಸಾದ್-ರಾಬ್ಡಿ ದೇವಿ 
ಪ್ರಧಾನ ಸುದ್ದಿ

ಆರ್ ಎಸ್ ಎಸ್ ಚಡ್ಡಿ ಕಳಚಿ ಪ್ಯಾಂಟ್ ಏರಿಸಿಕೊಂಡದ್ದಕ್ಕೆ ಪತ್ನಿ ರಾಬ್ಡಿ ದೇವಿ ಕಾರಣ: ಲಾಲು

ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ಸಮವಸ್ತ್ರದಲ್ಲಿ ಬದಲಾವಣೆ ಮಾಡಿಕೊಂಡು ಚಡ್ಡಿಯಿಂದ, ಪ್ಯಾಂಟ್ ಗೆ ಪ್ರಗತಿಯಾಗಿರುವ ಹಿನ್ನಲೆಯಲ್ಲಿ ಇದಕ್ಕೆ ಕಾರಣ ತಮ್ಮ ಪತ್ನಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ

ಪಾಟ್ನಾ: ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಸಮವಸ್ತ್ರದಲ್ಲಿ ಬದಲಾವಣೆ ಮಾಡಿಕೊಂಡು ಚಡ್ಡಿಯಿಂದ, ಪ್ಯಾಂಟ್ ಗೆ ಪ್ರಗತಿಯಾಗಿರುವ ಹಿನ್ನಲೆಯಲ್ಲಿ ಇದಕ್ಕೆ ಕಾರಣ ತಮ್ಮ ಪತ್ನಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಕಾರಣ ಎಂದು ಆರ್ ಜೆ ಡಿ ಅಧ್ಯಕ್ಷ ಲಾಲು ಪ್ರಸಾದ್ ಬುಧವಾರ ಹೇಳಿದ್ದಾರೆ. 
"ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಪ್ಯಾಂಟ್ ಧರಿಸುವಂತೆ ನಾವೇ ಒತ್ತಡ ಹೇರಿದ್ದು. ಅವರಿಗೆ ಸಭ್ಯತೆ ಕಡಿಮೆ ಎಂದು ರಾಬ್ಡಿ ದೇವಿ ಒಮ್ಮೆ ಪ್ರತಿಕ್ರಿಯಿಸಿದ್ದರು. ಹಿರಿಯ ಕಾರ್ಯಕರ್ತರು ನಾಚಿಕೆಯಿಲ್ಲದೆ ಚಡ್ಡಿಗಳಲ್ಲಿ ಓಡಾಡುತ್ತಿದ್ದರು" ಎಂದು ಲಾಲು ವರದಿಗಾರರಿಗೆ ಹೇಳಿದ್ದಾರೆ. 
ಅವರ ಸದಸ್ಯರು ಪ್ಯಾಂಟ್ ಗೆ ಮೊರೆ ಹೋದ ಒಂದು ದಿನದ ನಂತರ ಬಲಪಂಥೀಯ ಸಂಘಟನೆಯ ಬಗ್ಗೆ ಲಾಲು ತಮ್ಮ ಹಾಸ್ಯದ ಧಾಟಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. 
"ಈ ಆರ್ ಎಸ್ ಎಸ್ ಮುದುಕರಿಗೆ ಸಾರ್ವಜನಿಕವಾಗಿ ಚಡ್ಡಿಯಲ್ಲಿ ಓಡಾಡುವುದಕ್ಕೆ ನಾಚಿಕೆಯಾಗುವುದಿಲ್ಲವೇ?" ಎಂದು ಜನವರಿಯಲ್ಲಿ ತಮ್ಮ ಪತ್ನಿ ಮಾಡಿದ್ದ ಪ್ರತಿಕ್ರಿಯೆ ಈ ಹಿಂದುತ್ವ ಸಂಘಟನೆಯನ್ನು ಮುಜುಗರಕ್ಕೆ ಒಳಪಡಿಸಿತ್ತು ಎಂದು ಆರ್ ಜೆ ಡಿ ಮುಖಂಡ ಹೇಳಿದ್ದು "ರಾಬ್ಡಿ ನೀಡಿದ್ದ ಈ ಪ್ರತಿಕ್ರಿಯೆ ಆರ್ ಎಸ್ ಎಸ್ ಸಮವಸ್ತ್ರ ಬದಲಿಸಿಕೊಳ್ಳುವಂತೆ ಒತ್ತಡ ಹಾಕಿತು" ಎಂದು ಕೂಡ ಹೇಳಿದ್ದಾರೆ. 
ಈಗ ಆರ್ ಎಸ್ ಎಸ್ ಅವರ ಮನಸ್ಥಿತಿಯನ್ನು ಕೂಡ ಬದಲಿಸಿಕೊಳ್ಳಲು ನಾವು ಹಾಗೆಯೇ 
ಒತ್ತಡ ಹೇರಬೇಕು ಎಂದಿರುವ ಲಾಲು "ಈಗ ಸರಿ, ಅವರು ಪ್ಯಾಂಟ್ ತೊಡುವಂತೆ ನಾವು ಒತ್ತಡ ಹೇರಿದ್ದೇವೆ... ಆದರೆ ಈಗ ಅವರ ಯೋಚನಾ ಲಹರಿಯಲ್ಲಿ ಬದಲಾವಣೆ ಬೇಕಿದೆ... ಅವರು ಆಯುಧಗಳನ್ನು ತೊರೆಯುವಂತೆ ಒತ್ತಡ ಹಾಕಲಿದ್ದೇವೆ ಮತ್ತು ದ್ವೇಷ ಕಾರಲು ಬಿಡುವುದಿಲ್ಲ" ಎಂದಿದ್ದಾರೆ. 
ಈ ಹಿಂದೆ ರಾಬ್ಡಿ ದೇವಿ ನೀಡಿದ್ದ ಹೇಳಿಕೆಯನ್ನು ಬಿಜೆಪಿ ಮುಖಂಡರು ಟೀಕಿಸಿದ್ದರು. "ಅವರು 19 ನೆಯ ಶತಮಾನದ ಮನಸ್ಥಿಯ ಹೆಂಗಸು" ಎಂದು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಟೀಕಿಸಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT