ಇರಿತಕ್ಕೊಳಗಾಗಿ ಮೃತಪಟ್ಟ ದೆಹಲಿ ಶಿಕ್ಷಕ ಮುಖೇಶ್ ಕುಮಾರ್
ನವದೆಹಲಿ: ಇಬ್ಬರು ವಿದ್ಯಾರ್ಥಿಗಳಿಂದ ಇರಿತಕ್ಕೆ ಒಳಗಾಗಿ ಇಂದು ಮೃತಪಟ್ಟ ಶಾಲಾ ಶಿಕ್ಷಕರೊಬ್ಬರ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ನೀಡುವುದಾಗಿ ದೆಹಲಿ ಸರ್ಕಾರ ಮಂಗಳವಾರ ಘೋಷಿಸಿದೆ.
ಶಾಲೆಯ ಹಾಜರಾತಿ ಕಡಿಮೆ ಇದೆ ಎಂಬ ಕಾರಣಕ್ಕೆ 12 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ವಜಾ ಮಾಡಿದ್ದಕ್ಕೆ, ಉಳಿದ ಸಹ ವಿದ್ಯಾರ್ಥಿಗಳ ಎದುರಿಗೆ ಮುಖೇಶ್ ಕುಮಾರ್ ಎಂಬ ಸರ್ಕಾರಿ ಶಿಕ್ಷಕರನ್ನು ಈ ಇಬ್ಬರು ವಿದ್ಯಾರ್ಥಿಗಳು ಇರಿದಿದ್ದರು.
ಈ ದಾಳಿಯಾದ ಒಂದು ದಿನದ ನಂತರ ಮಂಗಳವಾರ ಆಸ್ಪತ್ರೆಯಲ್ಲಿ ಗಾಯಗೊಂಡ ಶಿಕ್ಷಕ ಕೊನೆಯುಸಿರೆಳೆದಿದ್ದರು.
ಈ ಇಬ್ಬರು ವಿದ್ಯಾರ್ಥಿಗಳಲ್ಲಿ ಒಬ್ಬನು ಅಪ್ರಾಪ್ತನಾಗಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
ರಾಜ್ಯ ಸರ್ಕಾರ ಕೂಡ ಈ ಪ್ರಕರಣದ ಬಗ್ಗೆ ಮೆಜೆಸ್ಟ್ರೇಟ್ ತನಿಖೆ ನಡೆಸಲು ಆದೇಶಿಸಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಧಿಯಾ ಹೇಳಿದ್ದಾರೆ.
"ಕುಟುಂಬದ ದುಃಖಕ್ಕೆ ಯಾವುದೇ ಪರಿಹಾರ ಸಾಧ್ಯವಿಲ್ಲ... ಅವರ ಆರ್ಥಿಕ ನೆರವಿಗಾಗಿ ಶೀಘ್ರವೇ ಸರ್ಕಾರ 1 ಕೋಟಿ ನೀಡಲಿದೆ" ಎಂದು ಸಿಸೋಧಿಯಾ ಹೇಳಿದ್ದಾರೆ.
"ಶಿಕ್ಷಕರಿಗೆ ಗೌರವ ನೀಡುವುದನ್ನು ಎಲ್ಲ ಪೋಷಕರು ಮಕ್ಕಳಿಗೆ ಬೆಳೆಸಬೇಕು" ಎಂದು ಕೂಡ ಅವರು ಕರೆ ಕೊಟ್ಟಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos