ರಾಜೀವ್ ರೋಶನ್ ಕೊಲೆ ಪ್ರಕರಣದ ಆರೋಪಿ ಮೊಹಮದ್ ಶಹಾಬುದ್ದೀನ್ 
ಪ್ರಧಾನ ಸುದ್ದಿ

ಶಹಾಬುದ್ದೀನ್ ಜಾಮೀನು ವಜಾ ಪ್ರಕರಣ; ಶುಕ್ರವಾರ ಸುಪ್ರೀಂ ಕೋರ್ಟ್ ಆದೇಶ

ರಾಜೀವ್ ರೋಶನ್ ಕೊಲೆ ಪ್ರಕರಣದ ಆರೋಪಿ ಮಾಜಿ ಆರ್ ಜೆ ಡಿ ಸದಸ್ಯ ಮೊಹಮದ್ ಶಹಾಬುದ್ದೀನ್ ಶಹಾಬುದ್ದೀನ್ ಜಾಮೀನನ್ನು ವಜಾ ಮಾಡುವಂತೆ ಕೋರಿ ಬಿಹಾರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರದಲ್ಲಿ ಸುಪ್ರೀಂ ಕೋರ್ಟ್

ನವದೆಹಲಿ: ರಾಜೀವ್ ರೋಶನ್ ಕೊಲೆ ಪ್ರಕರಣದ ಆರೋಪಿ ಮಾಜಿ ಆರ್ ಜೆ ಡಿ ಸದಸ್ಯ ಮೊಹಮದ್ ಶಹಾಬುದ್ದೀನ್ ಜಾಮೀನನ್ನು ವಜಾ ಮಾಡುವಂತೆ ಕೋರಿ ಬಿಹಾರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಲಿದೆ. 
ಶಹಾಬುದ್ದೀನ್ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶ ಪಿನಾಕಿ ಚಂದ್ರ ಘೋಸ್ ಮತ್ತು ನ್ಯಾಯಾಧೀಶ ಅಮಿತಾವ್ ರಾಯ್ ಅವರನ್ನು ಒಳಗೊಂಡ ನ್ಯಾಯಪೀಠ ನಾಳೆ ತೀರ್ಪು ನೀಡಲಿದೆ. 
ಬಿಹಾರ ಸರ್ಕಾರ ಈ ಪ್ರಕರಣದ ವಿಚಾರಣೆಯನ್ನು ವಿಳಂಬಿಸುತ್ತಿದೆ ಎಂದು ಶಹಾಬುದ್ದೀನ್ ಪರ ವಕೀಲ ಕೋರ್ಟ್ ಗೆ ಗುರುವಾರ ತಿಳಿಸಿದ್ದಾರೆ. 
ಶಹಾಬುದ್ದೀನ್ ಅವರನ್ನು ಸಿವಾನ್ ನಿಂದ ಭಾಗಲ್ಪುರ ಕೇಂದ್ರ ಖಾರಾಗೃಹಕ್ಕೆ ವರ್ಗಾಯಿಸಿದ್ದು ಕೂಡ ಈ ವಿಳಂಬದ ಭಾಗ ಎಂದು ಹಿರಿಯ ವಕೀಲ ಶೇಖರ್ ನಾಫದೆ ಹೇಳಿದ್ದಾರೆ. 
"ಈ ವಿಚಾರಣೆ ನಡೆಯದಂತೆ ಅವರು (ಬಿಹಾರ ಸರ್ಕಾರ) ತೆಗೆದುಕೊಂಡಿರುವ ಜಾಣ ನಿರ್ಧಾರ ಇದು. ವಿಚಾರಣೆ ಶುರುವಾದರೆ ನನ್ನ ಕಕ್ಷಿದಾರನ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲದೆ ಇರುವುದರಿಂದ ಈ ಪ್ರಕರಣ ಬಿದ್ದುಹೋಗುತ್ತದೆ" ಎಂದು ಶೇಖರ್ ಹೇಳಿದ್ದಾರೆ. 
ಇದಕ್ಕೆ ಬಿಹಾರ ಸರ್ಕಾರದ ವಕೀಲರು ಪ್ರತಿವಾದವನ್ನು ಮಂಡಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT