ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಕಾಶ್ಮೀರಿ ಪಂಡಿತರು ಹಿಂದಿರುಗಲು ನಿರ್ಣಯ ಅಂಗೀಕರಿಸಿದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ

ಕಣಿವೆಯಿಂದ ವಲಸೆ ಹೋಗಿದ್ದ ಕಾಶ್ಮೀರಿ ಪಂಡಿತರು ಮತ್ತು ಇತರರು ಹಿಂದಿರುಗಲು ಅನುವಾಗಲು ಪೂರಕ ವಾತಾವರಣ ಸೃಷ್ಟಿಸಲು ತೆಗೆದುಕೊಂಡಿರುವ ನಿರ್ಣಯವನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ

ಜಮ್ಮು: ಕಣಿವೆಯಿಂದ ವಲಸೆ ಹೋಗಿದ್ದ ಕಾಶ್ಮೀರಿ ಪಂಡಿತರು ಮತ್ತು ಇತರರು ಹಿಂದಿರುಗಲು ಅನುವಾಗಲು ಪೂರಕ ವಾತಾವರಣ ಸೃಷ್ಟಿಸಲು ತೆಗೆದುಕೊಂಡಿರುವ ನಿರ್ಣಯವನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಅವಿರೋಧವಾಗಿ ಅಂಗೀಕರಿಸಿದೆ. 
ಈ ಬೆಳಗ್ಗೆ ವಿಧಾನಸಭೆ ಜಾರಿಯಾದ ಸ್ವಲ್ಪ ಸಮಯದ ನಂತರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಕಾಶ್ಮೀರಿ ಪಂಡಿತರು ಮತ್ತು ಇತರ ವಲಸಿಗಳು ಹಿಂದಿರುಗಲು ವಿಧಾನಸಭೆ ನಿರ್ಣಯ ಅಂಗೀಕರಿಸಬೇಕು ಎಂದು ಹೇಳಿದರು. 
ಕಾಶ್ಮೀರಿ ಪಂಡಿತರ ಸಮುದಾಯ, ಸಿಖ್ ಸಮುದಾಯದ ಸದಸ್ಯರು ಮತ್ತು ಕೆಲವು ಮುಸ್ಲಿಮರು ೨೭ ವರ್ಷದ ಹಿಂದೆ ದುರದೃಷ್ಟಕರ ಸನ್ನಿವೇಶದಲ್ಲಿ ಕಣಿವೆ ತೊರೆದು ಹೋಗಿದ್ದರು ಎಂದು ತಿಳಿಸಿದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಕಾರ್ಯಕಾರಿ ಅಧ್ಯಕ್ಷ "ಅವರು (ಕಾಶ್ಮೀರಿ ಪಂಡಿತರು, ಕೆಲವು ಸಿಖ್ ಮತ್ತು ಮುಸ್ಲಿಂ ಸಮುದಾಯದ ಸದಸ್ಯರು) ಕಣಿವೆ ತೊರೆದು ಹೋಗಿದ್ದಕ್ಕೆ ಇಂದಿಗೆ ೨೭ ವರ್ಷ ಮತ್ತು ಅವರು ಹಿಂದಿರುಗುವಿಕೆಗಾಗಿ ಪಕ್ಷದ ರಾಜಕೀಯವನ್ನು ಮೀರಿ ಈ ನಿರ್ಣಯ ಅನುಮೋದಿಸಬೇಕಿದೆ" ಎಂದು ಒಮರ್ ಹೇಳಿದ್ದಾರೆ. 
ಪ್ರಶ್ನೋತ್ತರ ಅವಧಿ ಕೊನೆಯಾಗುವ ವೇಳೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಅಬ್ದುಲ್ ರೆಹಮಾನ್ ಈ ನಿರ್ಣವನ್ನು ಅನುಮೋದಿಸಿದ್ದಾರೆ. ಸ್ಪೀಕರ್ ಕವಿಂದರ್ ಗುಪ್ತ ಮಂಡಿಸಿದ ಈ ನಿರ್ಣಯವನ್ನು ಕೂಗು ಮತದ ಮೂಲಕ ಅಂಗೀಕರಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT