ಮಹಾತ್ಮಾ ಫೋಟೋವನ್ನು ಬದಲಿಸಿದ್ದಕ್ಕೆ ವಿವಾದಕ್ಕೆ ಗುರಿಯಾದ ಖಾದಿ ಕ್ಯಾಲೆಂಡರ್ ಗಳು 
ಪ್ರಧಾನ ಸುದ್ದಿ

ಖಾದಿ ಕ್ಯಾಲೆಂಡರ್ ನಲ್ಲಿ ಮೋದಿ ಫೋಟೋ; ಕಾರ್ಮಿಕರು, ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯ

೨೧೦೭ರ ಕ್ಯಾಲೆಂಡರ್ ಗಳು ಮತ್ತು ಡೈರಿಗಳಲ್ಲಿ ಮಹಾತ್ಮಾ ಗಾಂಧಿಯವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗಳು ಬದಲಿಸಿರುವ ನಡೆಯನ್ನು ಖಾದಿ ಗ್ರಾಮೋದ್ಯೋಗ ಪ್ರಾಧಿಕಾರ (ಕೆವಿಐಸಿ)

ಮುಂಬೈ: ೨೧೦೭ರ ಕ್ಯಾಲೆಂಡರ್ ಗಳು ಮತ್ತು ಡೈರಿಗಳಲ್ಲಿ ಮಹಾತ್ಮಾ ಗಾಂಧಿಯವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗಳು ಬದಲಿಸಿರುವ ನಡೆಯನ್ನು ಖಾದಿ ಗ್ರಾಮೋದ್ಯೋಗ ಪ್ರಾಧಿಕಾರ (ಕೆವಿಐಸಿ) ಅಧಿಕಾರಿಗಳು ಬೆಂಬಲಿಸಿದ್ದು, ಈ ನಡೆಯನ್ನು ವಿರೋಧಿಸಿದ್ದ ಖಾದಿ ಕಾರ್ಮಿಕರಿಗೆ ಸೆಡ್ಡು ಹೊಡೆದಿದ್ದಾರೆ. 
ಈ ಮೂಲಕ ಜನವರಿ ೨೬ ರಂದು ಆಯೋಜಿಸಿದ್ದ ೨೮೦೦ ಜನರ ಕೆವಿಐಸಿ ಕಾರ್ಮಿಕರ ಪ್ರತಿಭಟನೆಯನ್ನು ಪರೋಕ್ಷವಾಗಿ ವಿರೋಧಿಸಿದ್ದಾರೆ. 
೩೦೦ ಸದಸ್ಯರಿರುವ ಕೆವಿಐಸಿ ಅಧಿಕಾರಿಗಳ ಸಂಘ ಕೆವಿಐಸಿ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೆನಾ ಅವರಿಗೆ ಪತ್ರ ಬರೆದಿದ್ದು, ಇತ್ತೀಚಿನ ಬೆಳವಣಿಗೆಗಳು ರಾಜಕೀಯಪೂರಿತವಾಗಿದ್ದು, ಸಂಸ್ಥೆಯ ಹೆಸರಿಗೆ ಮಸಿ ಬಳಿಯಲು ದುರುದ್ದೇಶದಿಂದ ಕೂಡಿವೆ ಎಂದಿದ್ದಾರೆ. 
"ದುಷ್ಕರ್ಮಿಗಳು ಮತ್ತು ಸಂಸ್ಥೆಯ ವಿರೋಧಿ ಜನರಿಂದ ಕೆವಿಐಸಿಗೆ ಯಾವುದೇ ಪ್ರಮಾಣಪತ್ರ ಬೇಕಾಗಿಲ್ಲ" ಎಂದು ಕೂಡ ಸಂಘದ ಪ್ರಧಾನ ಕಾರ್ಯದರ್ಶಿ ಬಾಬುಲ್ ಮಂಡಲ್ ಕಳುಹಿಸಿರುವ ಪತ್ರದಲ್ಲಿ ಬರೆಯಲಾಗಿದೆ. 
ಅಧ್ಯಕ್ಷರಿಗೆ ಬೆಂಬಲವನ್ನು ಕೂಡ ಅಧಿಕಾರಿಗಳು ಸೂಚಿಸಿದ್ದಾರೆ. ಈ ಬೆಳವಣಿಗೆಯನ್ನು ಕೂಡಲೇ ತಡೆಯದಿದ್ದರೆ ಕಳವಳಕಾರಿ ಎಂದಿರುವ ಮಂಡಲ್ "ಈ ಪ್ರಕರಣವನ್ನು ಬೆಳೆಯಲು ಬಿಟ್ಟರೆ, ಅದು ಕೆವಿಐಸಿ ಮತ್ತು ಗ್ರಾಮಗಳ ಕಲಾ ಕಾರ್ಮಿಕರಿಗೆ ಮಾರಕವಾಗಲಿದೆ. 
"ನಮಗೆ ಇದರಿಂದ ತೀವ್ರ ನೋವಾಗಿದೆ. ಈ ವಿವಾದವನ್ನು ಅತಿ ಶೀಘ್ರದಲ್ಲೇ ಬಗೆಹರಿಸಿಕೊಳ್ಳಲು ಒಂದು ಒಮ್ಮತದ ಒಪ್ಪಂದಕ್ಕೆ ಬರಬೇಕು" ಎಂದು ಕೂಡ ಅವರು ಹೇಳಿದ್ದಾರೆ. 
ಶಿವ ಸೇನಾ ಸಂಸದ ಆನಂದರಾವ್ ಅದ್ಸುಲ್ ಮುಂದಾಳತ್ವದ ಖಾದಿ ಗ್ರಾಮೋದ್ಯೋಗ ಕರ್ಮಚಾರಿ ಸೇನಾ (ಕೆಜಿಕೆಸ್) ಸಂಸ್ಥೆ ಇನ್ನುಮುಂದೆ ಕೆವಿಐಸಿ ಕ್ಯಾಲೆಂಡರ್ ಗಳು ಮತ್ತು ಡೈರಿಗಳಲ್ಲಿ ಮಹಾತ್ಮ ಗಾಂಧಿ ಅವರ ಚಿತ್ರ ಪ್ರಮುಖವಾಗಿ ಕಾಣಿಸಿಕೊಳ್ಳಬೆಕು ಎಂದು ಆಗ್ರಹಿಸಿದ್ದಾರೆ. 
೨೦೧೭ ರ ಕ್ಯಾಲೆಂಡರ್ ಗಳು ಮತ್ತು ಡೈರಿಗಳಲ್ಲಿ ಮಹಾತ್ಮಾ ಗಾಂಧಿ ವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗಳು ಬದಲಿಸಿರುವ ನಡೆಯನ್ನು ವಿರೋಧಿಸಿ ಮೌನದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕಾರ್ಮಿಕರ ವಿರುದ್ಧ ನೀಡಲಾಗಿರುವ ನೋಟಿಸ್ ಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಕೂಡ ಕೆಜಿಕೆಸ್ ಆಗ್ರಹಿಸಿದೆ. 
ಕೆವಿಐಸಿ ಯಾವುದೇ ಕಾರ್ಮಿಕರಿಗೆ ಕಿರುಕುಳ ನೀಡಿದರೆ ಅಖಿಲ ಭಾರತ ಪ್ರತಿಭಟನೆ ಮಾಡುವುದಾಗಿ ಕೂಡ ತಿಳಿಸಿದೆ. 
ಕ್ಯಾಲೆಂಡರ್ ಗಳು ಮತ್ತು ಡೈರಿಗಳಲ್ಲಿ ಮಹಾತ್ಮಾ ಗಾಂಧಿ ವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗಳು ಬದಲಿಸಿರುವ ಕೆವಿಐಸಿ ನಡೆಯನ್ನು ಬಿಜೆಪಿ ಮೈತ್ರಿ ಪಕ್ಷ ಶಿವಸೇನೆ ಸೇರಿದಂತೆ ಹಲವು ಪಕ್ಷಗಳು ಖಂಡಿಸಿದ್ದು, ಮಹಾತ್ಮಾ ಗಾಂಧಿಯವರ ವಂಶಸ್ಥ ತುಷಾರ್ ಗಾಂಧಿ ಕೂಡ ವಿರೋಧಿಸಿದ್ದಾರೆ. 
ಸದ್ಯದ ಕ್ಯಾಲೆಂಡರ್ ಗಳು ಮತ್ತು ಡೈರಿಗಳನ್ನೂ ಹಿಂಪಡೆದು, ಮಹಾತ್ಮ ಗಾಂಧಿ ಫೋಟೋ ಹೊತ್ತ ಹೊಸವನ್ನು ಮುದ್ರಿಸಬೇಕು ಎಂದು ಕೂಡ ಹಲವರು ಆಗ್ರಹಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT