ಅಮರನಾಥ ಗುಹಾಂತರ ದೇವಾಲಯ 
ಪ್ರಧಾನ ಸುದ್ದಿ

ಅಮರನಾಥ ಯಾತ್ರೆಗೆ ಜಮ್ಮುವಿನಿಂದ ಹೊರಟ ೪,೪೭೭ ಯಾತ್ರಾರ್ಥಿಗಳು

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ವಾಹನ ಚಾಲನೆ ಪ್ರಾರಂಭವಾದ ಬಳಿಕ, ಚಳಿಗಾಲದ ರಾಜಧಾನಿ ಜಮ್ಮುವಿನಿಂದ ೪೪೭೭ ಯಾತ್ರಾರ್ಥಿಗಳ ಹೊಸ ತಂಡ ಶನಿವಾರ ಅಮರನಾಥ ಯಾತ್ರೆಗೆ

ಜಮ್ಮು: ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ವಾಹನ ಚಾಲನೆ ಪ್ರಾರಂಭವಾದ ಬಳಿಕ, ಚಳಿಗಾಲದ ರಾಜಧಾನಿ ಜಮ್ಮುವಿನಿಂದ ೪೪೭೭ ಯಾತ್ರಾರ್ಥಿಗಳ ಹೊಸ ತಂಡ ಶನಿವಾರ ಅಮರನಾಥ ಯಾತ್ರೆಗೆ ಹೊರಟಿದೆ. 
"೩೨೯೮ ಪುರುಷರು, ೯೮೬ ಮಹಿಳೆಯರು ಮತ್ತು ೧೯೩ ಸಾಧುಗಳನ್ನು ಒಳಗೊಂಡಿರುವ ಯಾತ್ರಿಗಳ ತಂಡ ೧೩೬ ವಾಹನಗಳಲ್ಲಿ ಭಗವತಿ ನಗರ್ ಯಾತ್ರಿ ನಿವಾಸ್ ನಿಂದ ಹೊರಟಿತು ಮತ್ತು ಇವುಗಳಿಗೆ ಭದ್ರತಾ ಪಡೆಗಳು ರಕ್ಷಣೆ ಒದಗಿಸಿದ್ದವು" ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಯಾತ್ರಾರ್ಥಿಗಳನ್ನು ಹೊತ್ತ ವಾಹನಗಳು ಬೆಳಗ್ಗೆ ೪:೧೫ ಕ್ಕೆ ಯಾತ್ರಿ ನಿವಾಸ್ ನಿಂದ ಹೊರಟಿವೆ. ಸಂಜೆ ೩:೩೦ ರ ನಂತರ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಜವಾಹರ್ ಸುರಂಗ ಮಾರ್ಗವನ್ನು ಭದ್ರತಾ ಕಾರಣಗಳಿಂದ ಬಂದ್ ಮಾಡಲಾಗುತ್ತದೆ. 
ನೆನ್ನೆ ರಾಂಬಾನ್ ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ ಜಮ್ಮು-ಶ್ರೀನಗರ ಹೈವೇ ಮುಚ್ಚಲಾಗಿತ್ತಾದ್ದರಿಂದ ಯಾವುದೇ ಯಾತ್ರಾರ್ಥಿಗೆ ಕಣಿವೆಯಲ್ಲಿ ಅಡ್ಡಾಡಲು ಅವಕಾಶ ನೀಡಿರಲಿಲ್ಲ. 
ಜೂನ್ ೨೯ ರಂದು ಪ್ರಾರಂಭವಾಗಿರುವ ಈ ೪೦ ದಿನಗಳ ಯಾತ್ರೆ ಶ್ರಾವಣ  ಪೂರ್ಣಿಮೆ ದಿನವಾದ ಆಗಸ್ಟ್ ೭ಕ್ಕೆ ಅಂತ್ಯಗೊಳ್ಳಲಿದೆ. 
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭೂಮಟ್ಟಕಿಂತ ೧೪,೦೦೦ ಅಡಿ ಎತ್ತರದಲ್ಲಿರುವ ಹಿಮಾಲಯದ ಗುಹಾಂತರ ದೇವಾಲಯದ ಹಿಮಲಿಂಗ ದರ್ಶನವನ್ನು ಈಗಾಗಲೇ ೧೦,೦೦೦ಕ್ಕೂ ಹೆಚ್ಚು ಯಾತ್ರಾರ್ಥಿಗಳು ಪಡೆದಿದ್ದಾರೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೌರಿಂಗ್ ಆಸ್ಪತ್ರೆ ದುರಂತ: ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ

Exit polls: ಪಂಚ ರಾಜ್ಯಗಳ ಚುನಾವಣೆ, ದೀದಿಗೆ ಶಾಕ್: BJP ತೆಕ್ಕೆಗೆ ಬಂಗಾಳ, ಅಸ್ಸಾಂನಲ್ಲೂ ಕಮಲ ಮ್ಯಾಜಿಕ್!

Exit polls: ತ.ನಾಡಿನಲ್ಲಿ ನಟ ವಿಜಯ್ ಗೆ ಮುಖಭಂಗ, DMKಗೆ ಮತ್ತೆ ಅಧಿಕಾರ, 10 ವರ್ಷಗಳ ಬಳಿಕ UDFಗೆ ಕೇರಳ ಗದ್ದುಗೆ, CM ವಿಜಯನ್ ಗೆ ಶಾಕ್!

ಮಹಾ ವಿಕಾಸ್ ಅಘಾಡಿಯಲ್ಲಿ ಮಹಾ ಬಿರುಕು; ಮೇಲ್ಮನೆಯಲ್ಲಿ ಇರುವುದೇ ಒಂದು ಸ್ಥಾನ; ಶಿವಸೇನೆಯಿಂದ ಅಂಬಾದಾಸ್ ದಾನ್ವೆ ಕಣಕ್ಕೆ; ಮಿತ್ರಪಕ್ಷಗಳಲ್ಲಿ ತೀವ್ರ ವಿರೋಧ!

ಭಾರತಕ್ಕೆ ಬೇಕಿದ್ದ ಮತ್ತೊಬ್ಬ ಉಗ್ರನ ಬೇಟೆ: ಪಾಕಿಸ್ತಾನದಲ್ಲಿ ಜೈಶ್ ಸಂಘಟನೆಯ ಟಾಪ್ ಕಮಾಂಡರ್ ನಿಗೂಢ ಸಾವು!

SCROLL FOR NEXT