ಅಮರನಾಥ ಗುಹಾಂತರ ದೇವಾಲಯ 
ಪ್ರಧಾನ ಸುದ್ದಿ

ಅಮರನಾಥ ಯಾತ್ರೆಗೆ ಜಮ್ಮುವಿನಿಂದ ಹೊರಟ ೪,೪೭೭ ಯಾತ್ರಾರ್ಥಿಗಳು

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ವಾಹನ ಚಾಲನೆ ಪ್ರಾರಂಭವಾದ ಬಳಿಕ, ಚಳಿಗಾಲದ ರಾಜಧಾನಿ ಜಮ್ಮುವಿನಿಂದ ೪೪೭೭ ಯಾತ್ರಾರ್ಥಿಗಳ ಹೊಸ ತಂಡ ಶನಿವಾರ ಅಮರನಾಥ ಯಾತ್ರೆಗೆ

ಜಮ್ಮು: ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ವಾಹನ ಚಾಲನೆ ಪ್ರಾರಂಭವಾದ ಬಳಿಕ, ಚಳಿಗಾಲದ ರಾಜಧಾನಿ ಜಮ್ಮುವಿನಿಂದ ೪೪೭೭ ಯಾತ್ರಾರ್ಥಿಗಳ ಹೊಸ ತಂಡ ಶನಿವಾರ ಅಮರನಾಥ ಯಾತ್ರೆಗೆ ಹೊರಟಿದೆ. 
"೩೨೯೮ ಪುರುಷರು, ೯೮೬ ಮಹಿಳೆಯರು ಮತ್ತು ೧೯೩ ಸಾಧುಗಳನ್ನು ಒಳಗೊಂಡಿರುವ ಯಾತ್ರಿಗಳ ತಂಡ ೧೩೬ ವಾಹನಗಳಲ್ಲಿ ಭಗವತಿ ನಗರ್ ಯಾತ್ರಿ ನಿವಾಸ್ ನಿಂದ ಹೊರಟಿತು ಮತ್ತು ಇವುಗಳಿಗೆ ಭದ್ರತಾ ಪಡೆಗಳು ರಕ್ಷಣೆ ಒದಗಿಸಿದ್ದವು" ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಯಾತ್ರಾರ್ಥಿಗಳನ್ನು ಹೊತ್ತ ವಾಹನಗಳು ಬೆಳಗ್ಗೆ ೪:೧೫ ಕ್ಕೆ ಯಾತ್ರಿ ನಿವಾಸ್ ನಿಂದ ಹೊರಟಿವೆ. ಸಂಜೆ ೩:೩೦ ರ ನಂತರ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಜವಾಹರ್ ಸುರಂಗ ಮಾರ್ಗವನ್ನು ಭದ್ರತಾ ಕಾರಣಗಳಿಂದ ಬಂದ್ ಮಾಡಲಾಗುತ್ತದೆ. 
ನೆನ್ನೆ ರಾಂಬಾನ್ ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ ಜಮ್ಮು-ಶ್ರೀನಗರ ಹೈವೇ ಮುಚ್ಚಲಾಗಿತ್ತಾದ್ದರಿಂದ ಯಾವುದೇ ಯಾತ್ರಾರ್ಥಿಗೆ ಕಣಿವೆಯಲ್ಲಿ ಅಡ್ಡಾಡಲು ಅವಕಾಶ ನೀಡಿರಲಿಲ್ಲ. 
ಜೂನ್ ೨೯ ರಂದು ಪ್ರಾರಂಭವಾಗಿರುವ ಈ ೪೦ ದಿನಗಳ ಯಾತ್ರೆ ಶ್ರಾವಣ  ಪೂರ್ಣಿಮೆ ದಿನವಾದ ಆಗಸ್ಟ್ ೭ಕ್ಕೆ ಅಂತ್ಯಗೊಳ್ಳಲಿದೆ. 
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭೂಮಟ್ಟಕಿಂತ ೧೪,೦೦೦ ಅಡಿ ಎತ್ತರದಲ್ಲಿರುವ ಹಿಮಾಲಯದ ಗುಹಾಂತರ ದೇವಾಲಯದ ಹಿಮಲಿಂಗ ದರ್ಶನವನ್ನು ಈಗಾಗಲೇ ೧೦,೦೦೦ಕ್ಕೂ ಹೆಚ್ಚು ಯಾತ್ರಾರ್ಥಿಗಳು ಪಡೆದಿದ್ದಾರೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

2025 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ನಟ ಪ್ರಕಾಶ್‌ ರಾಜ್‌ ಸೇರಿ 70 ಮಂದಿ ಆಯ್ಕೆ

ಡಿಕೆಶಿ, ತೇಜಸ್ವಿ ಸೂರ್ಯ ಜಟಾಪಟಿ; ಬೆಂಗಳೂರಿನಲ್ಲಿ ಟನಲ್ ರಸ್ತೆ ಬಗ್ಗೆ ಕೇಂದ್ರ ಸಚಿವ ಖಟ್ಟರ್ ಹೇಳಿದ್ದೇನು?

ಕೇಂದ್ರದ ಬೆಳೆ ವಿಮಾ ಯೋಜನೆ: ಅನ್ನದಾತನಿಗೆ 'ಅಪಹಾಸ್ಯ'; ಕೇವಲ 3 ರೂ. ಪರಿಹಾರ, ಚೆಕ್ ಗಳ ಮೂಲಕ ಹಿಂತಿರುಗಿಸಿದ ಮಹಾರಾಷ್ಟ್ರ ರೈತರು!

ಚಿತ್ತಾಪುರದಲ್ಲಿ ಪಥ ಸಂಚಲನ: ಮತ್ತೊಂದು ಶಾಂತಿ ಸಭೆ ನಡೆಸುವಂತೆ ಹೈಕೋರ್ಟ್ ಸೂಚನೆ; RSSಗೆ ಹಿನ್ನಡೆ

ಟನಲ್ ರಸ್ತೆ ಬೇಡ ಎನ್ನಲು ಈ ತೇಜಸ್ವಿ ಸೂರ್ಯ ಯಾರು?, ಗೌರವ ಕೊಟ್ಟು ಕರೆದು ಮಾತಾಡಿದರೆ ಬಾಯಿಗೆ ಬಂದಂತೆ ವದರುತ್ತಿದ್ದಾನೆ: DK Shivakumar; Video

SCROLL FOR NEXT